ನಿತ್ಯ ಸತ್ಯ: ಪಯಣ

Upayuktha
0

 

ಕಿರು   ಸತ್ಯ..95

ಸುಳಿ 

**

ನೀರಿನೊಳಗೆ 

ಸುಳಿಯು ಇಹುದು 

ಸುಳಿಯ ಒಳಗು 

ನೀರು ಇಹುದು 

ಸುಳಿಯ ಬಲೆಗೆ 

ಬೀಳದಂತೆ 

ಚತುರನಾಗು ನೀ 

*****

ಸಹಸ್ರಬುಧ್ಯೆ ಮುಂಡಾಜೆ



ಕಿರು  ಸತ್ಯ..96


ನರ ವಿಷ 

****

ಹರನ ವಿಷವ 

ತೊಳೆದ ಗಂಗೆ 

ಪವಿತ್ರತೆಯ 

ಕಾಯ್ದು ಕೊಂಡು 

ನರನ ವಿಷವ 

ತಡೆಯೆ ಎನುತ 

ಶರಧಿ ಪೊಕ್ಕಳು 

*****

ಸಹಸ್ರಬುಧ್ಯೆ ಮುಂಡಾಜೆ


ಕಿರು    ಸತ್ಯ..97


ಪಯಣ 

***

ರವಿಗೆ ಸುತ್ತಿ 

ಬರುತಲಿಹೆವು 

ಭುವಿಯ ಹತ್ತಿ

ಕುಳಿತುಕೊಂಡು

ಯಾವ ಗುರಿಯ 

ಸೇರದಂಥ 

ಭಾವವಿಲ್ಲದೆ.

****

ಸಹಸ್ರಬುಧ್ಯೆ ಮುಂಡಾಜೆ


ಕಿರು   ಸತ್ಯ... 98


ಚದುರಂಗ 

***

ಚದುರಂಗದ 

ಆಟದಲ್ಲಿ 

ಯಾರು ಚತುರ 

ನಾಗಿ ಇಹನೊ 

ಬದುಕೆನ್ನುವ

ಆಟದಲ್ಲು 

ಗೆಲ್ಲುವನವನು.

*****

ಸಹಸ್ರಬುಧ್ಯೆ ಮುಂಡಾಜೆ


ಕಿರು   ಸತ್ಯ...99


ವ್ಯರ್ಥ 

***

ವ್ಯರ್ಥವೆಂಬ 

ಭಾವಕಿಲ್ಲಿ

ಅರ್ಥವೆಲ್ಲಿ

ಹೇಳು ಮನುಜ

ದೃಷ್ಟಿಕೋನ

ಬದಲುವಾಗ 

ಸತ್ಯ ತಿಳಿವುದು. 

*****

ಸಹಸ್ರಬುಧ್ಯೆ ಮುಂಡಾಜೆ


ಕಿರು   ಸತ್ಯ..100 


ಜೀವನ 

***

ಜನನ ಮರಣ 

ತಿಳಿದೆ ಇಲ್ಲ 

ಕರ್ಮ ಬಂಧ 

ಬಿಡಲು ಸಲ್ಲ

ವರ್ತಮಾನ 

ಮಾತ್ರ ಸಾಕ್ಷಿ 

ಪಾಪ ಪುಣ್ಯಕೆ 

*****

ಸಹಸ್ರಬುಧ್ಯೆ ಮುಂಡಾಜೆ


ಕಿರು   ಸತ್ಯ.. 101


ರಾಜಕಾರಣಿ

****

ಮತದಾರನ 

ಭಿಕ್ಷೆ ಉಂಡು 

ಮಂತ್ರಿಯಾದೆ 

ಸೇವೆಗೆಂದು

ದೇಶ ಲೂಟಿ 

ಮಾಡಬಾರ

ದೆಂದು ತಿಳಿದುಕೋ

*****

ಸಹಸ್ರಬುಧ್ಯೆ ಮುಂಡಾಜೆ


ಕಿರು   ಸತ್ಯ..102


ನಿಯಮ 

****

ದುಂಬಿಗೊಂದು 

ಹೂವು ಎನಲು 

ಸಹಜ ಧರ್ಮ 

ವಾದರಿಲ್ಲಿ 

ಹೂವಿಗೊಂದೆ 

ದುಂಬಿ ಎನಲು 

ಮನುಜ ಧರ್ಮವು.

******.

ಸಹಸ್ರಬುಧ್ಯೆ ಮುಂಡಾಜೆ


ಕಿರು  ಸತ್ಯ..103


ವರ್ತಮಾನ 

****

ಇಂದು ನಾಳೆ 

ಆಗಿಹೋಯ್ತು 

ನಾಳೆ ಇಂದು 

ಬಂದಾಯಿತು

ಇದರ ನಡುವೆ 

ವರ್ತಮಾನ 

ಕಳೆದು ಹೋಯಿತು. 

*******

ಸಹಸ್ರಬುಧ್ಯೆ ಮುಂಡಾಜೆ


ಕಿರು   ಸತ್ಯ..104


ಖಚಿತ 

** 

ಔಷಧಗಳು 

ಹಲವು ಇಹವು 

ರಾಮ ಬಾಣ

ದಂಥ ಗುಣವು

ನಾಟಿದೊಡನೆ 

ರೋಗ ನಾಶ 

ಇಲ್ಲ ರೋಗಿಯು.!! 

******

ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top