ಮೈಸೂರಿನಲ್ಲಿ ಸೋಮವಾರದಿಂದ ಕೆಎಸ್ಸಾರ್ಟಿಸಿ ಬಸ್ ಸಂಚಾರ

Upayuktha
0



ಬೆಂಗಳೂರು: ಸೋಮವಾರದಿಂದ ಮೈಸೂರಿಗೆ ಬಸ್ ಸಂಚಾರ ಆರಂಭಿಸಲು KSRTC ಮುಂದಾಗಿದೆ. ಕೊರೊನಾ ಸೋಂಕು ಕಾರಣಕ್ಕೆ ಮೈಸೂರು ಹೊರತುಪಡಿಸಿ ಉಳಿದೆಲ್ಲ ಭಾಗಗಳಿಗೆ ಸಾರಿಗೆ ಸೇವೆ ಒದಗಿಸಲಾಗಿತ್ತು. ಕಳೆದ ಎರಡು ತಿಂಗಳಿಂದ ಮೈಸೂರಿಗೆ ಕೆಎಸ್​ಆರ್​ಟಿಸಿ ಬಸ್ ಸಂಚಾರ ಇರಲಿಲ್ಲ. ಇದೀಗ ಮೈಸೂರಿನಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 8.16 ರಷ್ಟು ಇದ್ದು, ಸೋಮವಾರದಿಂದ ಬಸ್​ಗಳು ರಸ್ತೆಗಿಳಿಯಲಿವೆ.


ಮೈಸೂರಿನಲ್ಲಿ ಲಾಕ್​ಡೌನ್ ಸಡಿಲ ಹಿನ್ನೆಲೆ ಜೂನ್-28 ರ ಬೆಳಗ್ಗೆ 6 ಗಂಟೆಯಿಂದ ಜನರ ಬೇಡಿಕೆ ಆಧರಿಸಿ ಬಸ್ ಸಂಚಾರ ಆರಂಭಿಸಲು ನಿಗಮ ಮುಂದಾಗಿದೆ‌. ಕೊರೊನಾ ಕಾರಣಕ್ಕೆ ಶೇ.50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಬಸ್​ಗಳು ಕಾರ್ಯಾಚರಣೆ ಮಾಡಲಿವೆ. ಈ ಕುರಿತು ಕೆಎಸ್​ಆರ್​​ಟಿಸಿ ಸಂಚಾರ ವ್ಯವಸ್ಥಾಪಕರಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.‌


Key Words: Mysuru, Unlock, KSRTC Bus, Public Transport, ಮೈಸೂರು, ಕೆಎಸ್ಸಾರ್ಟಿಸಿ ಬಸ್‌, ಬಸ್ ಸಂಚಾರ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top