ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಶ್ರೀಮತಿ ಎ. ವನಜ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ದಿಂದ "ನೆಟ್ವರ್ಕ್ಜೀ ವಿತಾವಧಿಯನ್ನು ಹೆಚ್ಚಿಸುವುದು ಮತ್ತು ವೈರ್ಲೆಸ್ ಮೊಬೈಲ್ ಅಡ್-ಹಾಕ್ ನೆಟ್ವರ್ಕ್ಗಳಲ್ಲಿ ಬಹು ನಿರ್ಬಂಧಿತ ಗುಣಮಟ್ಟದ ಸೇವಾ ರೂಟಿಂಗ್ ಸಮಸ್ಯೆಗಳನ್ನು ನಿರ್ಣಯಿಸುವುದು" ಎಂಬ ಪ್ರಬಂಧಕ್ಕಾಗಿ ಪಿಎಚ್ಡಿ ಪದವಿ ನೀಡಲಾಗಿದೆ.
ಇವರು ಸಂತ ಅಲೋಶಿಯಸ್ ವಿವಿಯ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆಯ ಸಂಶೋಧನಾ ಮೇಲ್ವಿಚಾರಕ ಡಾ. ಜೀವನ್ ಲಿಯೋನೆಲ್ ಜೋಸೆಫ್ ಪಿಂಟೊ ಮತ್ತು ಬೆಳಗಾವಿಯ ವಿಟಿಯುನ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಸಂಶೋಧನಾ ಸಹ-ಮೇಲ್ವಿಚಾರಕ ಡಾ. ರೋಹಿತ್ ಬಿ. ಕಲಿವಾಲ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು.
ವನಜರವರು ಕೆ ಅಮ್ಮಯ್ಯಪ್ಪನ್ ಮತ್ತು ಎ. ಭಾನುಮತಿ ಅವರ ಹೆಮ್ಮೆಯ ಪುತ್ರಿ ಮತ್ತು ಮಂಗಳೂರಿನ ಎಂ.ಕುಮಾರವೇಲ್ ಅವರ ಪತ್ನಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


