ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ‘ಕೃಷ್ಣಮಯ 2026’ ಜಿಲ್ಲಾ ಮಟ್ಟದ ಕೃಷ್ಣವೇಶ ಸ್ಪರ್ಧೆಯ ಸಮಾರೋಪ ಸಮಾರಂಭವು ಆಗಸ್ಟ್ 29ರಂದು ರೇಷ್ಮಾ ಮೆಮೋರಿಯಲ್ ಅಡಿಟೋರಿಯಂನಲ್ಲಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಬೆಣ್ಣೆ ಕೃಷ್ಣ ಸ್ಪರ್ಧೆ: ಜಶ್ವಿ ಸಾಲಿಯಾನ್ (ಗುರುನಗರ, ಮಂಗಳೂರು) ಪ್ರಥಮ, ಸಿಯ ಸಿ.ಕೆ. ಮಂಜಡ್ಕ (ಶಕ್ತಿನಗರ) ದ್ವಿತೀಯ ಹಾಗೂ ಸಮ್ಯಕ್ ನಿಖಿಲ್ ರಾವ್ (ಯೆಯ್ಯಾಡಿ, ಮಂಗಳೂರು) ತೃತೀಯ ಸ್ಥಾನ ಪಡೆದರು.
ಬಾಲಕೃಷ್ಣ ಸ್ಪರ್ಧೆ: ಅಹನಾ ಎನ್. ಶೆಟ್ಟಿ (ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್) ಪ್ರಥಮ, ಆಧ್ಯಾ ಎಸ್. ಶೇಟ್ (ಶಾರದಾ ವಿದ್ಯಾಲಯ) ದ್ವಿತೀಯ ಹಾಗೂ ವೃಷ್ಠಿ ವಿ. ಪವನ್ (ಶಕ್ತಿ ಪ್ರಿ-ಸ್ಕೂಲ್) ತೃತೀಯ ಸ್ಥಾನ ಪಡೆದರು.
ಯಶೋಧ ಕೃಷ್ಣ ಸ್ಪರ್ಧೆ: ಸೌಮ್ಯ ಮತ್ತು ಅದಿತ್ರಿ ಪ್ರಥಮ, ನವ್ಯ ಶ್ರೀ ಮತ್ತು ಅನೈರ ಎ. ಶೆಟ್ಟಿ ದ್ವಿತೀಯ ಹಾಗೂ ಕುಶಿ ಮತ್ತು ಶಾರ್ವಿ ತೃತೀಯ ಸ್ಥಾನ ಪಡೆದರು.
ದಾಸರ ಕೀರ್ತನೆ ಸ್ಪರ್ಧೆ: ಶ್ರೀ ಶಾರದಾ ತಂಡ, ಶಾರದಾ ವಿದ್ಯಾಲಯ, ಕೊಡಿಯಾಲ್ಬೈಲ್ ಪ್ರಥಮ, ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್, ಕಿನ್ನಿಗೋಳಿ ದ್ವಿತೀಯ ಹಾಗೂ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ತೃತೀಯ ಸ್ಥಾನ ಪಡೆದವು.
ಗೋಪಿಕಾ ಕೃಷ್ಣ ಸ್ಪರ್ಧೆ: ಎಸ್. ಪ್ರಧಾನ್ಯ ಮತ್ತು ತಂಡ (ಶಾರದಾ ವಿದ್ಯಾಲಯ, ಕೊಡಿಯಾಲ್ಬೈಲ್) ಪ್ರಥಮ, ಸನಿಹ ಮತ್ತು ತಂಡ (ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್) ದ್ವಿತೀಯ ಹಾಗೂ ಶ್ರದ್ಧಾ ಮತ್ತು ತಂಡ (ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್, ಕಿನ್ನಿಗೋಳಿ) ತೃತೀಯ ಸ್ಥಾನ ಪಡೆದವು.
ಗೀತಾ ಕಂಠಪಾಠ–ಧ್ಯಾನ ಶ್ಲೋಕ (3–6 ವರ್ಷ): ರಿತಿಕ ಭಟ್ (ಕೆನರಾ ಹೈಸ್ಕೂಲ್, ಉರ್ವ) ಪ್ರಥಮ, ಮಹಿತ್ ಎನ್. ಸಾಲಿಯಾನ್ (ಶಾರದಾ ವಿದ್ಯಾಲಯ) ದ್ವಿತೀಯ ಹಾಗೂ ಮೃನಲಿ ಮಾನಸ ಎನ್. ಭಟ್ (ಸಮೃದ್ಧಿ ಇಂಟರ್ನ್ಯಾಷನಲ್ ಪ್ರೀ-ಸ್ಕೂಲ್) ತೃತೀಯ ಸ್ಥಾನ ಪಡೆದರು.
ಗೀತಾ ಕಂಠಪಾಠ–ಧ್ಯಾನ ಶ್ಲೋಕ (1 ಮತ್ತು 2ನೇ ತರಗತಿ): ಧನ್ವಿ ಎಚ್. (ಶಾರದಾ ವಿದ್ಯಾಲಯ, ಕೊಡಿಯಾಲ್ಬೈಲ್) ಪ್ರಥಮ, ಹನ್ವಿಕ ಪಿ. ಗುಜ್ಜರನ್ (ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್) ದ್ವಿತೀಯ ಹಾಗೂ ನಕ್ಷ (ರಾಷ್ಟ್ರೋತ್ಥಾನ ವಿದ್ಯಾಕೇಂದ್ರ) ತೃತೀಯ ಸ್ಥಾನ ಪಡೆದರು.
ಗೀತಾ ಕಂಠಪಾಠ–ಧ್ಯಾನ ಶ್ಲೋಕ (3 ಮತ್ತು 5ನೇ ತರಗತಿ): ಕಿಶನ್ ಭಟ್ (ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್) ಪ್ರಥಮ, ಅತ್ರೇಯ ಎಂ. ಭಟ್ (ಕೆನರಾ ಪ್ರೌಢಶಾಲೆ, ಉರ್ವ) ದ್ವಿತೀಯ ಹಾಗೂ ಮಹ್ಯ ಆರ್. ಶೆಟ್ಟಿ (ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್) ತೃತೀಯ ಸ್ಥಾನ ಪಡೆದರು.
ಗೀತಾ ಕಂಠಪಾಠ–ಅಧ್ಯಾಯ 12: ಕೆ. ಪ್ರಥಮ್ ಮಲ್ಯ (ಶಾರದಾ ವಿದ್ಯಾಲಯ, ಕೊಡಿಯಾಲ್ಬೈಲ್) ಪ್ರಥಮ, ಸೃಷ್ಟಿ ಅಲೆವೂರಾಯ (ಶಾರದಾ ವಿದ್ಯಾಲಯ, ಕೊಡಿಯಾಲ್ಬೈಲ್) ದ್ವಿತೀಯ ಹಾಗೂ ತನ್ವಿ ಆರ್. ಬಲ್ಲಾಳ್ (ಸೆಕ್ರೆಡ್ ಹಾರ್ಟ್ಸ್, ಕುಲಶೇಖರ) ತೃತೀಯ ಸ್ಥಾನ ಪಡೆದರು.
ಗೀತಾ ಕಂಠಪಾಠ–ಅಧ್ಯಾಯ 15: ಶ್ರಾವಣಿ (ಶಾರದಾ ವಿದ್ಯಾಲಯ, ಕೊಡಿಯಾಲ್ಬೈಲ್) ಪ್ರಥಮ, ಧರಿತ್ರಿ ಕಾಮತ್ (ಶಾರದಾ ವಿದ್ಯಾಲಯ, ಕೊಡಿಯಾಲ್ಬೈಲ್) ದ್ವಿತೀಯ ಹಾಗೂ ಶ್ರೀನಿಧಿ ಡಿ. ದೇವಾಡಿಗ (ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್, ಕಿನ್ನಿಗೋಳಿ) ತೃತೀಯ ಸ್ಥಾನ ಪಡೆದರು.
ಚಿತ್ರಕಲಾ ಸ್ಪರ್ಧೆ: ಆತ್ಮಿಕ ಶ್ರೀ (ಶಾರದಾ ಸೆಂಟ್ರಲ್ ಸ್ಕೂಲ್, ಕಿನ್ನಿಗೋಳಿ) ಪ್ರಥಮ, ಪ್ರವೀತ್ ಪಿ.ವಿ. (ಶಾರದಾ ಸೆಂಟ್ರಲ್ ಸ್ಕೂಲ್, ಕಿನ್ನಿಗೋಳಿ) ದ್ವಿತೀಯ ಹಾಗೂ ಸಿಮ್ರಾನ್ ವಿ. ಮೈತ್ರಿ (ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್) ತೃತೀಯ ಸ್ಥಾನ ಪಡೆದರು.
ಕುಣಿತ ಭಜನೆ ಸ್ಪರ್ಧೆ: ಕೃತಿ ಮತ್ತು ತಂಡ (ಶಾರದಾ ವಿದ್ಯಾಲಯ, ಕೊಡಿಯಾಲ್ಬೈಲ್) ಪ್ರಥಮ, ನೇಹಾ ಮತ್ತು ತಂಡ (ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್) ದ್ವಿತೀಯ ಹಾಗೂ ಇಶಾನ್ವಿ ಮತ್ತು ತಂಡ (ರಾಷ್ಟ್ರೋತ್ಥಾನ ವಿದ್ಯಾಕೇಂದ್ರ) ತೃತೀಯ ಸ್ಥಾನ ಪಡೆದವು.
ಫೋಟೋ ಕಂಟೆಸ್ಟ್: ಮುದ್ದು ಕೃಷ್ಣ ವಿಭಾಗದಲ್ಲಿ ಆಗ್ನೇಯ್ ರಾಜ್, ಬಾಲಕೃಷ್ಣ ವಿಭಾಗದಲ್ಲಿ ಶ್ಲೋಕ್ ಸಾಲಿಯಾನ್, ಮುರಳಿ ಕೃಷ್ಣ ವಿಭಾಗದಲ್ಲಿ ಪ್ರಾರ್ಥನಾ ಎನ್., ಯಶೋಧ ಕೃಷ್ಣ ವಿಭಾಗದಲ್ಲಿ ಸಾಕ್ಷಾ ವಿನಿ ಮತ್ತು ಸಾರ್ಥ್ ರಾಜ್ ಹಾಗೂ ಕೃಷ್ಣ ವಿಭಾಗದಲ್ಲಿ ಯದುವೀರ್ ಕದ್ರಿ ವಿಜೇತರಾದರು.
ವಿಜೇತರಿಗೆ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ., ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ಸುರೇಖಾ ಆರ್. ಭಟ್, ಅಶೋಕ್, ಚರಣ್ ಹಾಗೂ ಲಕ್ಷ್ಮಿ ಗುರುದತ್ ಪೈ ಅವರು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ‘ಕೃಷ್ಣಮಯ’ ಸಂಯೋಜಕರಾದ ಸುಶ್ಮಾ ಸತೀಶ್ ಹಾಗೂ ಭವ್ಯ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲರಿಗೂ ಶಕ್ತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


