ಕನ್ಯಪ್ಪಾಡಿ: ಪುತ್ತಿಗೆ ಪಂಚಾಯತಿನ ಪೆರ್ಣೆ ಪರಿಸರದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿರುವ ಭಗವತೀ ಫ್ರೆಂಡ್ಸ್ ಪೆರ್ಣೆ ಸದಸ್ಯರು ಈ ವರ್ಷದ ಗಣೇಶೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸುವ ಸಂಕಲ್ಪ ಮಾಡಿದ್ದಾರೆ. ಆ ಪ್ರಯುಕ್ತ ಕನ್ಯಪ್ಪಾಡಿಯಲ್ಲಿರುವ ಆಶ್ರಯ ಆಶ್ರಮಕ್ಕೆ ರೂ. 10000 ಮೊತ್ತವನ್ನು ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಭಗವತೀ ಫ್ರೆಂಡ್ಸ್ ಪ್ರಮುಖರಾದ ರವಿನಾರಾಯಣ ಗುಣಾಜೆ, ಸುನೀಲ್ ಪೆರ್ಣೆ, ಅಕ್ಷಯ್ ಪೆರ್ಣೆ, ಆಶ್ರಮದ ಮುಖ್ಯಸ್ಥರಾದ ರಮೇಶ್ ಕಳೇರಿ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


