ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾನಿಲಯ, ಮಂಗಳೂರು ಇವರಿಂದ ಶ್ರೀಮತಿ ವಿನುತಾ ಹೆಚ್.ಕೆ ಅವರಿಗೆ ವಾಣಿಜ್ಯ ವಿಷಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ) ಪದವಿಯನ್ನು ನೀಡಿ ಗೌರವಿಸಲಾಗಿದೆ. ಅವರು ಪ್ರಸ್ತುತ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅವರ ಡಾಕ್ಟರೇಟ್ ಸಂಶೋಧನೆಯ ಶೀರ್ಷಿಕೆ "ಬ್ಯಾಂಕಿಂಗ್ ಉದ್ಯಮದಲ್ಲಿ ಫಿನ್ಟೆಕ್ ಪರಿಹಾರಗಳ ಮಿಲೇನಿಯಲ್ ಅಳವಡಿಕೆ - ಬಳಕೆದಾರರ ವೈಯಕ್ತಿಕಗೊಳಿಸಿದ ಆದ್ಯತೆಗಳ ವಿಶ್ಲೇಷಣೆ" ಆಗಿದ್ದು, ಶ್ರೀನಿವಾಸ ವಿಶ್ವವಿದ್ಯಾನಿಲಯದ ಡಾ.ಸಿ.ಕೆ. ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ.
ವಿನುತಾ ಹೆಚ್.ಕೆ ಅವರು ಭುಜಂಗ ಎಲ್. ರಾವ್ ಅವರ ಪತ್ನಿ ಹಾಗೂ ಕೃಷ್ಣರಾಜ ಹೆಚ್.ಆರ್ ಮತ್ತು ವಿಲಾಸಿನಿ ಹೆಚ್.ಕೆ ಅವರ ಪುತ್ರಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


