ಶ್ರೀ ಪೇಜಾವರ ಶ್ರೀ ಚಾತುರ್ಮಾಸ್ಯ ನವದೆಹಲಿ -2026
ಶುಕ್ರವಾರ ಆಗಸ್ಟ್ 14 ರಂದು ಭಾರತ ವಿಭಜನೆಯ ಕರಾಳ ಸ್ಮರಣೆಯ ಅಂಗವಾಗಿ ದೆಹಲಿಯ ಐಡಿಯಾಸ್ ಎಕ್ಸ್ ಚೇಂಜ್ ಫೋರಮ್ ಸಂಘಟನೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮೀಜಿಯವರು ಸಾನ್ನಿಧ್ಯವಹಿಸಿ ಸಂದೇಶ ನೀಡಿದರು. ದೆಹಲಿ ಸರ್ಕಾರದ ಶಿಕ್ಷಣ ಮಂತ್ರಿ ಆಶಿಶ್ ಸೂದ್, ಹಿರಿಯರಾದ ಕಪಿಲ್ ಖನ್ನಾ, ಕಾರ್ಯಕ್ರಮ ಸಂಯೋಜಕ ಡಾ ಅಭಿಷೇಕ್ ಟಂಡನ್ ಮೊದಲಾದವರು ಉಪಸ್ಥಿತರಿದ್ದರು.
ನೂರಾರು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಷ್ಟ್ರ ವಿಭಜನೆಯ ಕರಾಳ ನೆನಪಿನ ನಿಟ್ಟಿನಲ್ಲಿ ಒಂದು ಮೌಲಿಕ ಅವಲೋಕನ ಮತ್ತು ಭವಿಷ್ಯದ ಬಗ್ಗೆ ದಿವ್ಯ ಸಂಕಲ್ಪದ ಅವಶ್ಯಕತೆಯನ್ನು ಕಾರ್ಯಕ್ರಮ ಅರ್ಥಪೂರ್ಣವಾಗಿ ನಿರೂಪಿಸಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

