ಆಗಸ್ಟ್ 6 ರಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ. ತಮಿಳಿನಲ್ಲಿ ಆಡಿಮಾಸವಾಗಿದೆ. ಆಡಿಮಾಸ 21ರಂದು ಕಾವಡಿ ಹಬ್ಬ, ಮುರಗಸ್ವಾಮಿಯ ಹಬ್ಬ. ಎಲ್ಲಾ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಗಳಲ್ಲಿ ಕಾವಡಿ ಹಬ್ಬ ಜಾತ್ರೆ ನಡೆಯುತ್ತದೆ. ತಮಿಳುನಾಡಿನಲ್ಲಿ ಆಡಿ 22ರಂದು ಆಡಿಕೃತ್ತಿಕ ಕಾವಡಿ ಹಬ್ಬ ಆಚರಿಸುತ್ತಾರೆ. ಭರಣಿಕಾವಡಿ ಪಾಲಕಾವಡಿ ಪನ್ನೀರ್ ಕಾವಡಿ ಪುಷ್ಪಕಾವಡಿ ನವಿಲುಕಾವಡಿಗಳಿವೆ. ಮನೆಯಲ್ಲಿ ದೇವರಿಗೆ ಪೂಜೆ ಮಾಡಿ ಭಕ್ತಾದಿಗಳು ಭಕ್ತಿಯಿಂದ ಸುಬ್ರಹ್ಮಣ್ಯಸ್ವಾಮಿಯ ದೇವಸ್ಥಾನಕ್ಕೆ ಕಾವಡಿ ಎತ್ತುಕೊಂಡು ಹೋಗಿ ದೇವರಿಗೆ ಪೂಜೆ ಮಾಡುತ್ತಾರೆ.
ದೇಶ ವಿದೇಶಗಳಲ್ಲಿರುವ ಮುರಗಸ್ವಾಮಿ ದೇವಸ್ಥಾನದಲ್ಲಿಯೂ ಕಾವಡಿ ಹಬ್ಬ ಆಡಿ 18 (ಪದೖಿನೇಟು) ಹಬ್ಬ ಆಚರಿಸುತ್ತಾರೆ. ತಮಿಳು ನಾಡಿನಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರಗಳು ತಮಿಳುನಾಡಿನಲ್ಲಿ ಕರೆಯಲಾಗುವ ಆರು ಪಡೖೆವೀಡು ಕ್ಷೇತ್ರಗಳ ಇದು ಮುರಗಸ್ವಾಮಿಯ ದೇವಾಲಯವೂ ಒಂದು ಆರು ಪಡೖೆವೀಡು ಅಂದರೇ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆರು ದಿವ್ಯ ದೇವಾಲಯಗಳು ಅಥವಾ ನೆಲೆಗಳು ಎಂದರ್ಥ.
1. ಸ್ವಾಮಿಮಲೖೆ - Swamimalai
2. ಪಳನಿ - Palani
3. ತಿರುತ್ತಿನಿ - Thiruthani
4. ತಿರುಚೆಂದೂರ್ - Tiruchendur
5. ತಿರುಪ್ಪಾರನ್ ಕುನ್ರನ್ - Thiruparankundram
6. ಪಲಮುದ್ರಿಚೋಲೈ - Palhamudircholai
ಈ ಎಲ್ಲಾ ದೇವಸ್ಥಾನಗಳು ತಮಿಳುನಾಡಿನಲ್ಲಿದೆ. ಕರ್ನಾಟಕ ತಮಿಳುನಾಡು ದೇಶ ವಿದೇಶಗಳಲ್ಲಿ ಮತ್ತು ಸಿಂಗಾಪುರಂ ಮಲೇಶಿಯಾದಲ್ಲೂ ಶ್ರಿ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನಗಳಿವೆ. ಎಲ್ಲಾ ದೇವಸ್ಥಾನಗಳಲ್ಲಿ ಕಾವಡಿ ಹಬ್ಬ ಆಚರಿಸುತ್ತಾರೆ.
- ವಿ.ಎಂ.ಎಸ್.ಗೋಪಿ
ಲೇಖಕರು, ಸಾಹಿತಿಗಳು
ಬೆಂಗಳೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



