ವೈಷ್ಣವ ಸಂಪ್ರದಾಯಗಳ ತಾತ್ವಿಕ–ಸಾಂಸ್ಕೃತಿಕ ಸಂವಾದಕ್ಕೆ ದೇಶದ ಖ್ಯಾತ ವಿದ್ವಾಂಸರ ಸಂಗಮ
ನವದೆಹಲಿ: ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ಪ್ರಯುಕ್ತ ಪೂರ್ಣಪ್ರಜ್ಞ ಸಂಶೋಧನ ಮಂದಿರ, ಬೆಂಗಳೂರು, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ ಹಾಗೂ ವೇದಿಕ್–ವೇದಾಂತಿಕ್ ಸ್ಟಡೀಸ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ (VVSRI), ನವದೆಹಲಿ ಸಹಯೋಗದಲ್ಲಿ "ವೈಷ್ಣವ ಧರ್ಮದ ವಿವಿಧ ಶಾಖೆಗಳ ನಡುವಿನ ಸಂವಾದ – ತಾತ್ವಿಕ ಮತ್ತು ಸಾಂಸ್ಕೃತಿಕ ಆಯಾಮಗಳು" ಎಂಬ ವಿಷಯದ ಕುರಿತು ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಗಸ್ಟ್ 3 ರಿಂದ 5ರವರೆಗೆ ನವದೆಹಲಿಯ ವೇದವ್ಯಾಸ ಗುರುಕುಲ, ವಸಂತ್ ಕುಂಜ್ ನಲ್ಲಿ ಆಯೋಜಿಸಲಾಗಿದೆ.
ಸಮ್ಮೇಳನದಲ್ಲಿ ದ್ವೈತ, ವಿಶಿಷ್ಟಾದ್ವೈತ, ಶುದ್ಧಾದ್ವೈತ, ಅಚಿಂತ್ಯಭೇದಾಭೇದ ಸೇರಿದಂತೆ ವಿವಿಧ ವೈಷ್ಣವ ಪರಂಪರೆಗಳ ತತ್ವ, ಸಂಸ್ಕೃತಿ, ಭಕ್ತಿ, ಗ್ರಂಥಪರಂಪರೆ ಹಾಗೂ ಸಮಕಾಲೀನ ಪ್ರಸ್ತುತತೆ ಕುರಿತು ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಖ್ಯಾತ ಸಂಶೋಧಕರು, ಮಠಾಧೀಶರು, ಆಚಾರ್ಯರು ಹಾಗೂ ಸಂಸ್ಕೃತ ವಿದ್ವಾಂಸರು ಉಪನ್ಯಾಸ ಮತ್ತು ವಿಚಾರ ವಿನಿಮಯ ನಡೆಸಲಿದ್ದಾರೆ.
ಆಗಸ್ಟ್ 3ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಭಾರತೀಯ ಐತಿಹಾಸಿಕ ಸಂಶೋಧನಾ ಪರಿಷತ್ (ICPR) ಸದಸ್ಯ ಕಾರ್ಯದರ್ಶಿ ಪ್ರೊ. ಸಚ್ಚಿದಾನಂದ ಮಿಶ್ರಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವ ಪ್ರೊ. ಆರ್.ಜಿ. ಮುರಳಿ ಕೃಷ್ಣ ಉಪಸ್ಥಿತರಿರುವರು.
ಪೂರ್ಣಪ್ರಜ್ಞ ಸಂಶೋಧನ ಮಂದಿರದ ನಿರ್ದೇಶಕ ಆಚಾರ್ಯ ವೀರನಾರಾಯಣ ಪಾಂಡುರಂಗಿ ಸ್ವಾಗತ ಭಾಷಣ ಮಾಡಲಿದ್ದು, ವೇದವ್ಯಾಸ ಗುರುಕುಲದ ವಿದ್ಯಾರ್ಥಿಗಳಿಂದ ಶಾಸ್ತ್ರಾನುವಾದ ಕಾರ್ಯಕ್ರಮ ನಡೆಯಲಿದೆ. ನಂತರ "ಶ್ರೀ ಜಯತೀರ್ಥರ ತತ್ತ್ವದರ್ಶನ" ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ.
ಮೂರು ದಿನಗಳ ಸಮ್ಮೇಳನದಲ್ಲಿ ಒಟ್ಟು ಐದು ಶೈಕ್ಷಣಿಕ ಅಧಿವೇಶನಗಳು ನಡೆಯಲಿದ್ದು, ಪ್ರತಿಯೊಂದು ಅಧಿವೇಶನಕ್ಕೂ ದೇಶದ ಖ್ಯಾತ ಸಂಸ್ಕೃತ ವಿದ್ವಾಂಸರು ಅಧ್ಯಕ್ಷತೆ ವಹಿಸಲಿದ್ದಾರೆ.
ಅಧಿವೇಶನಗಳಲ್ಲಿ ಪ್ರೊ. ಎಂ. ನಾರಾಯಣ್, ಪ್ರೊ. ಓಂನಾಥ್ ಬಿಮಲಿ, ಮಹಾಮಹೋಪಾಧ್ಯಾಯ ಪ್ರೊ. ಎ. ಹರಿದಾಸ ಭಟ್, ಶ್ರೀ ಪಂಕಜ ಗೋಸ್ವಾಮಿ ಹಾಗೂ ಶ್ರೀ ಶರದ್ ಗೋಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮ್ಮೇಳನದಲ್ಲಿ ವೃಂದಾವನ, ಗೋಕುಲ, ನಾಶಿಕ್, ಮುಂಬೈ, ಬೆಂಗಳೂರು, ಹೈದರಾಬಾದ್, ನವದೆಹಲಿ, ಉದಯಪುರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸುವ ವಿದ್ವಾಂಸರು ವಿವಿಧ ವೈಷ್ಣವ ಸಂಪ್ರದಾಯಗಳ ಕುರಿತು ಸಂಶೋಧನಾತ್ಮಕ ಉಪನ್ಯಾಸಗಳನ್ನು ನೀಡಲಿದ್ದಾರೆ.
ಪ್ರಮುಖವಾಗಿ ಶ್ರೀ ಹರಿಪ್ರಿಯಾ ದಾಸ್, ಶ್ರೀ ಜಯಕಿಶೋರ್ ವ್ಯಾಸ, ಶ್ರೀ ಮಾಧವೇಂದ್ರ ಗೋಸ್ವಾಮಿ, ಶ್ರೀ ಪರೇಶ್ ಗೋಸ್ವಾಮಿ, ಡಾ. ಮೈತ್ರಿ ಗೋಸ್ವಾಮಿ, ಶ್ರೀ ಶ್ಯಾಮ ಮನೋಹರ ಗೋಸ್ವಾಮಿ, ಶ್ರೀ ಧರ್ಮೇಂದ್ರ ಸಿಂಗ್ ಝಾಲಾ, ಶ್ರೀ ಪುಷ್ಪಾಂಗ ಗೋಸ್ವಾಮಿ ಹಾಗೂ ಶ್ರೀ ಶರದ್ ಗೋಸ್ವಾಮಿ ಸೇರಿದಂತೆ ಹಲವಾರು ವಿದ್ವಾಂಸರು ವಿಚಾರ ಮಂಡಿಸಲಿದ್ದಾರೆ.
ಆಗಸ್ಟ್ 5ರಂದು ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಕಟಣಾ ನಿರ್ದೇಶಕ ಪ್ರೊ. ಕಾಶೀನಾಥ್ ನ್ಯೌಪಾನೆ ಹಾಗೂ ಪ್ರೊ. ಕುಲದೀಪ್ ಶರ್ಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpeg)
