ಸುರತ್ಕಲ್: ಲಕ್ಷಾಂತರ ದೇಶಪ್ರೇಮಿಗಳ ಹೋರಾಟ, ತ್ಯಾಗ ಬಲಿದಾನಗಳಿಂದ 200 ವರ್ಷಗಳ ಕಾಲ ಬ್ರಿಟೀಷರ ಆಳ್ವಿಕೆಯಲ್ಲಿದ್ದ ಭಾರತವುದಾಸ್ಯದ ಸಂಕೋಲೆಯಿಂದ ಬಿಡಗಡೆಗೊಂಡು ಇಂದಿಗೆ 80 ವರ್ಷಗಳಾಗಿದೆ.ಅಭಿವೃದ್ಧಿ ಪಥದಲ್ಲಿ ಭಾರತವು ಮುನ್ನಡೆಯುತಿದ್ದು, ಆರ್ಥಿಕ, ತಂತ್ರಜ್ಞಾನ, ವಿಜ್ಞಾನ, ಶಿಕ್ಷಣ, ಬಾಹ್ಯಾಕಾಶ ಮತ್ತುರಕ್ಷಣಾ ವ್ಯವಸ್ಥೆಗಳಲ್ಲಿ ವಿಶ್ವದಲ್ಲೇ ಮನ್ನಣೆಯನ್ನು ಪಡೆದಿದೆ.
ಇಂದಿನ ಯುವಜನಾಂಗವು ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಅಮರ ಬಲಿದಾನಿಗಳನ್ನು ಮತ್ತು ಭಾರತದ ಗಡಿಗಳಲ್ಲಿ ತಮ್ಮಜೀವನದ ಹಂಗನ್ನುತೊರೆದುದೇಶರಕ್ಷಣೆ ಮಾಡುತ್ತಿರುವ ವೀರಯೋಧರನ್ನು ಸದಾ ಸ್ಮರಿಸಿ ಗೌರವಿಸಬೇಕು ಎಂದು ಹಿಂದು ವಿದ್ಯಾದಾಯಿನೀ ಸಂಘ (ರಿ.), ಸುರತ್ಕಲ್ಇದರ ಆಡಳತಕ್ಕೊಳಪಟ್ಟ ಗೋವಿಂದದಾಸಕಾಲೇಜು, ಸುರತ್ಕಲ್ನ ಪ್ರಾಂಶುಪಾಲ ಪ್ರೊ. ಹರೀಶಆಚಾರ್ಯ ಪಿ. 80ನೇ ವರ್ಷದ ಸ್ವಾತಂತ್ರ್ಯೋತ್ಸವದ ಧ್ವಜಾರೋಣಗೈಯುತ್ತಾ ನುಡಿದರು.
ಎನ್.ಸಿ.ಸಿ.ಕೆಡೆಟ್ಗಳಿಂದ ಪಥಸಂಚಲನ ನಡೆಯಿತು.
ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಭಟ್ಎಸ್.ಜಿ., ಉಪ ಪ್ರಾಂಶುಪಾಲ ಪ್ರೊ. ನೀಲಪ್ಪ ವಿ., ಹಿರಿಯಉಪನ್ಯಾಸಕ ಪ್ರೊ. ವಾಮನ ಕಾಮತ್, ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಮತ್ತುಎನ್.ಸಿ.ಸಿ.ಅಧಿಕಾರಿ ಮೇಜರ್ಡಾ. ಸುಧಾಯು.,ದೈಹಿಕ ಶಿಕ್ಷಣ ನಿರ್ದೇಶಕಡಾ. ಪ್ರಶಾಂತ್ಎಂ.ಡಿ., ಉಪನ್ಯಾಸಕರು ಮತ್ತು ಶಿಕ್ಷತೇತರ ವರ್ಗ, ಎನ್.ಎನ್.ಎಸ್. ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


