ಮಂಗಳೂರು: ಶ್ರೀನಿವಾಸ್
ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫಾರ್ಮೇಷನ್ ಸೈನ್ಸ್ ವತಿಯಿಂದ 2026-27ನೇ ಸಾಲಿನ ನೂತನ
ವಿದ್ಯಾರ್ಥಿಗಳ ಪ್ರವೇಶೋತ್ಸವ
ಕಾರ್ಯಕ್ರಮವು ಜುಲೈ
29, 2026ರಂದು ಪಾಂಡೇಶ್ವರದ
ನೂತನ ಕ್ಯಾಂಪಸ್ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ ಮಾತನಾಡಿ ವಿದ್ಯಾರ್ಥಿಗಳು
ದೊಡ್ಡ ಕನಸುಗಳನ್ನು
ಕಾಣಬೇಕು, ತಮ್ಮ
ಸಾಮರ್ಥ್ಯಕ್ಕೆ ಯಾವುದೇ
ಮಿತಿಯನ್ನು ಹಾಕಿಕೊಳ್ಳಬಾರದು
ಹಾಗೂ ನಿರಂತರವಾಗಿ
ತಮ್ಮ ಕೌಶಲ್ಯಗಳನ್ನು
ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು
ಕರೆ ನೀಡಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ
ಅಭಿವೃದ್ಧಿ ವಿಭಾಗದ
ಕುಲಸಚಿವ ಡಾ.
ಅಜಯ್ ಕುಮಾರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ
ಬೋಧಿಸಿ ಮಾತನಾಡಿ,
ನಾವು ವಿದ್ಯಾರ್ಥಿಗಳಿಗೆ
ಕೇವಲ ತರಗತಿಯಲ್ಲಿ
ಪಾಠ ಮಾಡುವುದಲ್ಲ,
ಪ್ರಾಯೋಗಿಕ ತರಬೇತಿ
ಹಾಗೂ ನೈಜ
ಉದ್ಯಮ ಅನುಭವದ
ಮೂಲಕ ಅವರನ್ನು
ಉದ್ಯಮ ಕ್ಷೇತ್ರಕ್ಕೆ
ಸಜ್ಜುಗೊಳಿಸುತ್ತೇವೆ. ಕಲಿಕೆಯ
ಪ್ರಕ್ರಿಯೆಯನ್ನು ಆನಂದಿಸಿ,
ನಿಮ್ಮ ಕೌಶಲ್ಯಗಳನ್ನು
ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳಿ. ಉದ್ಯಮ ಕ್ಷೇತ್ರವು
ಕೌಶಲ್ಯಯುತ ವೃತ್ತಿಪರರಿಗೆ
ಹೆಚ್ಚಿನ ಮೌಲ್ಯ
ನೀಡುತ್ತದೆ. ಆದ್ದರಿಂದ
ನಿಮ್ಮ ಸಾಮರ್ಥ್ಯವನ್ನು
ವೃದ್ಧಿಸಿಕೊಳ್ಳಲು ಗಮನಹರಿಸಿ.
ಶಿಸ್ತು ಪಾಲಿಸಿ,
ನಿಮ್ಮ ಶೈಕ್ಷಣಿಕ
ಪಯಣವನ್ನು ಆನಂದಿಸಿ
ಮತ್ತು ನಿರಂತರವಾಗಿ
ಕಲಿಯುತ್ತಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ
ನೀಡಿದರು.
ಇನ್ಸ್ಟಿಟ್ಯೂಟ್
ಆಫ್ ಕಂಪ್ಯೂಟರ್ ಸೈನ್ಸ್ ಹಾಗೂ
ಮಾಹಿತಿ ವಿಜ್ಞಾನ
ಸಂಸ್ಥೆಯ ಡೀನ್
ಡಾ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಡಾ. ಶ್ರೀಧರ್ ಆಚಾರ್ಯ ವಂದಿಸಿ, ಪ್ರೊ.
ರಿಯಾ ಉಪ್ಪಳ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


