ಸುರತ್ಕಲ್: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ ಸುರತ್ಕಲ್ ರೋಟರಿ ಕ್ಲಬ್ ವತಿಯಿಂದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸುರತ್ಕಲ್ ಶಾಖೆಯ ವೈದ್ಯರುಗಳನ್ನು ಗೌರವಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ರೊ. ಶ್ರೀಧರ್ ಟಿ. ಎನ್. ಆರೋಗ್ಯಕರ ಸಮಾಜದ ರೂಪಿಸುವಿಕೆಗೆ ನಿರಂತರ ಶ್ರಮಿಸುವ ವೈದ್ಯರ ತ್ಯಾಗಮಯ ಸೇವೆಯನ್ನು ಸ್ಮರಿಸಿದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ಸುರತ್ಕಲ್ ಶಾಖೆಯ ಅಧ್ಯಕ್ಷ ಡಾ. ಎಸ್. ರಾಜ್ ಗೋಪಾಲ್ ರಾವ್ ವೈದ್ಯರ ಅನನ್ಯ ಸೇವೆಯನ್ನು ಗುರುತಿಸಿ ಗೌರವಿಸುವ ಪ್ರವೃತ್ತಿಯನ್ನು ಶ್ಲಾಘಿಸಿದರು.
ಜಿಲ್ಲಾ ರೋಟರಿ 3181 ರ ಪದಾಧಿಕಾರಿ ರೊ. ಡಾ. ಕೆ. ಅರವಿಂದ ಭಟ್, ಸುರತ್ಕಲ್ ರೋಟರಿ ಯ ನಿರ್ದೇಶಕರಾದ ಕೃಷ್ಣ ಮೂರ್ತಿ, ರಮೇಶ್ ಭಟ್, ಅಶ್ವಿನ್ ಕುಮಾರ್, ಪೂರ್ಣಿಮಾ ಶ್ರೀಧರ್ ಮತ್ತು ಹಿರಿಯ ವೈದ್ಯರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


