ಎಂಥ ಗೊತ್ಲೇ, ಬೊಳ್ಪು ಬೊಳ್ಪಿಗೆನೇ ಏನೋ ಮಳೆ ಸುರಾಗಿತ್. ಮಳೆ ಬಂದರೆ ಕೇಳೋಕಾ ಮತ್ತೆ.. ನಮ್ಮ ಕೊಡ್ಗ್ ಲಿ ಕರೆಂಟ್ ಮಂಗ ಮಾಯಾ. ರೊಟ್ಟಿ ಮಾಡಿಕೇತ ಪದ್ನಿಕೆ ಹಾಕಿದ ಅಕ್ಕಿ ಮಿಕ್ಸಿ ಜಾರ್ ಒಳಗೆ ಬೀಳ್ದು ಬುಟ್ಟು ಗಂಜಿ ಮಡ್ಕೆಗೆ ಬಿದ್ದದೆ. ಒಟ್ಟಾರೆ, ಇಂದ್ ಗಂಜಿನೇ ಗತಿ ತ ನಿಗಂಟ್ ಆತ್. ಅದ್ ಇರ್ಲಿ ಒಂದು ಒಳ್ಳ ಗೈಪು ಆರ್ ಮಾಡಿ ಉಣಕ್ ತ ನೆನ್ಸಿರೆ, ಈ ಯುದ್ದಗಳ್ನ್ದ ಗ್ಯಾಸ್ ಸ ಇಲ್ಲದೆ, ಸೌದೆ ಒಲೆನೇ ಗತಿ. ಒಲೆ ಮುಂದೆ ಕುದ್ದ್, ಗಂಜಿ ಗೈಪು ಬೇಯಕನ ನಾವುಸಾ ಅರ್ಧ ಬಿಂದಿದ್ದವೆ.
ಇಷ್ಟೆಲ್ಲಾ ಆಗಿ ಪೊಜ್ಜಿಲಿ ಗಂಜಿ ಉಂಡು ಆಕನ ಗಂಟೆ 10 ಆಗಿತ್. ಅದರೇಸಾ ಮಳೆ ಬುಡುವ ಅಂದಾಜಿಲಿ ಕಾಂಬೊದುಲೆ. ಕತ್ತಲೆ ಒಡ್ಡಿಕಂಡೆ ಇತ್. ಇನ್ನ್ ಸ ಕುದ್ದರೆ ಆಕಿಲೇತ ಪೊಪ್ಪ ಎದ್ದ್ ತೋಟಕೆ ಕಿಡಿಂಜೊಲು ಕಟ್ಟಿ ಹೊರ್ಟ್ ಹೋದೋ.
ಮಳೆ ಒಟ್ಟಿಗೆ ಸಾದಾರ್ಣ ಗಾಳಿಸ ಇತ್. ಪೊಪ್ಪ ತೋಟಂದ ಅಡ್ಕೆ ಹೆರ್ಕಿ ಬಾಕನ ನೀರಿಗೆ ಬಿದ್ದ ಕೋಳಿ ಹಂಗೆ ಕಾಣ್ತಿದ್ದೊ. ಆಗಲೇ ನೆನ್ಪಾತ್ ನೋಡಿ, ಎಂತ ಹೇಳಿರೆ ನಮ್ಮಲ್ಲಿ ಕೋಳಿ ಗೈಪು ಮಾಡದೇ ಸುಮಾರ್ ದಿನ ಆಗಿತ್. ನಂಗೆಸಾ ತಿನ್ನಕಾಯ್ತ್ ತ ಒಂದು ಕಡೆಂದ ಆಸೆ ಸ ಆಗ್ತಿತ್. ಮೆಲ್ಲ ಪೊಪ್ಪನ ಪುಸಲಾಯಿಸಿ ಪೇಟೆಗೆ ಕೋಳಿ ತಾಕೆ ಕಳ್ಸಿದೆ.
ಆಗ ಅಮ್ಮ ಏನೂ ಕೆಲ್ಸಲಿ ಇದ್ದೋ, ಹಂಗೆ ಅಮ್ಮಂಗೆ ಈ ವಿಷ್ಯ ಗೊತ್ತಾತ್ಲೆ. ಚೂರು ಹೊತ್ತು ಆದಮೇಲೆ ಏನಾರ್ ಗೈಪು ಮಾಡ್ ಮಗ ಮಧ್ಯಾಹ್ನ ಊಟಕ್ಕೆ ಗೈಪು ಇಲ್ಲೆ ತ ಹೇಳ್ದೋ. ನಾ ಅಮ್ಮ ಹೇಳ್ದಂಗೆನೇ ರಪ್ಪ ಎದ್ದ್ ತೊಂಡೆಕಾಯಿ ಕೊಯ್ದ್ ಗೈಪು ಮಾಡಿಕೆ ಹೊರ್ಟೆ ನೋಡಿ.ಅಷ್ಟಾಕನ ಪೊಪ್ಪ ಪೇಟೆಂದ ಕೋಳಿ ತಕಂಡ್ ಬಂದೋ. ನಂಗೇ ಆಗಳೇ ನೋಡಿ ನೆನ್ಪಾದ್, ಓ.. ನಾ ಪೊಪ್ಪನ ಕೋಳಿ ತಾಕೆ ಕಳ್ಸಿದ್ದೆ ಅಲಾ.. ತ. ಇನ್ನೆಂತ ಮಾಡ್ದು, ತೊಂಡೆಕಾಯಿ ಗೈಪು ಒಲೇಲಿ ಬೆಂದ್ ಕಂಡ್ ಇತ್. ಇತ್ತ ಅಮ್ಮನ ಕೈಂದ ನಂಗೆ ಬೊಯ್ಗಳ್ ಸ ಸಿಕ್ಕಿಕಂಡ್ ಇತ್. ನನ್ನ ಈ ಮರೆವ ಕಾಯ್ಲೆಂದ ಏನೆಲ್ಲಾ ಅವಾಂತರ ಆಕೆ ಉಟ್ಟ ದೇವಾ ತ ನೆಗಾಡಿಕೆನೂ ಬರ್ತಿತ್. ಅಮ್ಮ ಕೋಳಿ ಗೈಪು ಮಾಡ್ದೊ. ಕೋಳಿ ಗೈಪುಲಿ ಗಮ್ಮತ್ ಉಂಡ್ ಕಂಡ್ ಇರ್ಕನಾ.. ನನ್ನ ಬುದ್ದಿವಂತರ ದೂರವಾಣಿ ಮರ್ಡಕೆ ಸುರುಮಾಡ್ತ್. ಯಾರಪ್ಪ ಅದ್ ಇಷ್ಟೊತ್ತಿಗೆ ತ ಬೊಯ್ಕಂಡ್ ಹೋಗಿ ನೋಡಿರೆ ನನ್ನ ಒಟ್ಟಿಗೆ ಕಲಿವ ಗೂಡೆದ್. ಎಂತ ವಿಷ್ಯ ಮಾರೈತಿ ತ ಕೇಳ್ದೆ. ಅದ್ ಹೇಳ್ದ ವಿಷ್ಯ ಕೇಳಿ ಎಷ್ಟ್ ಖುಷಿಯಾತ್ ತ ಹೇಳಿರೆ ಕಾಲ್ ನೆಲಲಿ ನಿಲ್ಲದಷ್ಟ್. ಅಂತಾ ವಿಷ್ಯ ಎಂತಪ್ಪ ತ ಹೇಳಿರೆ, ನಾಳೆ ರಜೆ ತ ಹೇಳ್ದ್. ಅದೇ ಖುಷಿಲಿ ಹೊತ್ತು ಹೋದೇ ಗೊತ್ತಾತ್ಲೇ ಅಷ್ಟ್ ಬೇಗಾ ಕತ್ತಲೆಸ ಆಗಿತ್. ಕೋಳಿ ಗೈಪು ಲಿ ಬಿಸಿ ಬಿಸಿ ರೊಟ್ಟಿ ತಿಂದ್ ಸುರ್ಟಿ ಮಲ್ಗಿದೆ ನೋಡಿ. ರಜೆ ತ ಮನ್ಸ್ ಲಿ ಗಟ್ಟಿ ಕುದ್ದಿತ್. ಅದರ್ನ್ದಾಗಿ ಇದ್ರ್ ಸುವ ಗಂಟೆಸಾ ಸದ್ದೇ ಮಾಡ್ತ್ಲೆ. ಒಳ್ಳ ನಿದ್ದೆಸ ಬಂದಿತ್ ಮರ್ರೆ. ಸಾದಾರ್ಣ ಎಂಟ್ ಗಂಟೆ ಆಕನ ಅಮ್ಮನ ಸುಪ್ರಭಾತಕ್ಕೆ ಮೆಲ್ಲ ಕಣ್ಣ್ ಬುಟ್ಟೆ. ಎದ್ದಾಂಗೆನೆ ನಂಗೆ ಕೇಳ್ತಿದ್ದ ಸುಪ್ರಭಾತ ಹೆಂಗೆ ಇತ್ ತ ಹೇಳಿರೆ, ಕೌಶಲ್ಯೆ ಶ್ರೀ ರಾಮ ನ ಎದ್ರ್ ಸಿಕೆ ತ ಇಂಪಾಗಿ ಹಾಡ್ತಿದ್ದ ಸುಪ್ರಭಾತ ಹೊಸ ರೂಪ ಪಡ್ಕಂಡ್ ಈಗನ ಮಕ್ಕಳ ನಿದ್ರೆ ಬುಡ್ಸಿಕೆ ಹಾಡುವ ಹೊಸ ನಮೂನೆ ನ ಸುಪ್ರಭಾತ ಹಂಗೆ ಕೇಳ್ತಿತ್. ಅಂತಾ ಸುಪ್ರಭಾತ ಎಂತ ಆಗಿರ್ದು ತ ಜಾಸ್ತಿ ಯೋಚನೆ ಮಾಡ್ಬೇಡಿ. ಅದ್ ಎಂತ ಗೊತ್ತುಟ..“ ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆದಂಗೆನೇ.. ಹೋಗ್ತಾ ಹೋಗ್ತಾ ಇವ್ಳಿಗೆ ಪಾಠ ಕೇಳಿಕೆ ಹೋಕೆಸ ಮನ್ಸ್ ಇಲ್ಲೆ.
ಕಾಲೇಜಿಗೆ ಹೊದು ಬುಟ್ಟು ಹಂದಿ ಮಲ್ಗಿದಂಗೆ ಮಲ್ಗಿಟು ಗಂಟೆ ಎಂಟಾದರೂ ಎದ್ರಿಕೆ ಆತ್ಲೆ ಇವ್ಳಿಗೆ. ಈಗ ಏನ್ ಎದ್ದಿಯನ ಅಲ್ಲ ನೀರ್ ಹೊಯ್ಯಕಾ” ತ. ಕೆಬಿಗೇ ಬೀಳ್ತಾ ಇತ್. ನೆನ್ನೆ ಅವ್ಳ್ ನಾಳೆ ರಜೆ ತ ಹೇಳಿತ್ ಅದ್ ಅಮ್ಮಂಗೆಸಾ ಗೊತ್ತುಟು ಪುನಾ ಯಾಕೆ ಅಮ್ಮ ಹಿಂಗೆ ಬೋಯ್ದವೆ ತ ಎದ್ದ್ ಸಣ್ಣ ಅನುಮಾನ ಲಿ ಇನ್ನೊಂದ್ ಗೂಡೆಗೆ ಕರೆ ಮಾಡಿ ವಿಚಾರ್ಸಿದೆ. ಅವ್ಳ್ ರಜೆನು ಇಲ್ಲೆ ಎಂತನು ಇಲ್ಲೆ ಇಂದ್ ಇರ್ವ ಮೂರ್ಖರ ದಿನಕ್ಕೆ ನಿನ್ನೆನೇ ಮೂರ್ಖ ಆದನ ಮಾರಾಯ್ತಿ ತ ಹೇಳಿ ನೆಗಾಡ್ತ್. ಒಮ್ಮೆಗೆ ಸೀಡ್ಳ್ ಹೊಡ್ದಂಗೆ ಆತ್ ಮರ್ರೆ. ಇನ್ನ್ ಸ ಎದ್ದ್ ಹೊರ್ಡದಿದ್ದರೆ ಆಕಿಲೆ ತ ರಪ್ಪ ರಪ್ಪ ಎದ್ದ್ ಬಿದ್ದ್ ಹೊರ್ಟೆ ನೋಡಿ. ಅರ್ಧಂಬರ್ದಹೊಟ್ಟೆಸ ತುಂಬುಸಿಕಂಡ್ ದಿನಾಲೂ ನನ್ನ ಬಸ್ ಹಕ್ಕಲೆ ಬುಡುವ ಅಣ್ಣ ನ ಮನೆ ದಾರಿಲಿ ಹೋಗಿ ನಿತ್ತೆ. ಎಷ್ಟ್ ಹೊತ್ತಾದರೂ ಅಣ್ಣನ ಪತ್ತೆನೇ ಇಲ್ಲೆ ಅತ. ಮತ್ತೆ ಗೊತ್ತಾತ್ ಅವ್ ಮಾಮೂಲು ಹೊತ್ತಿಗೆ ಹೋಗೊಳೊ ತ ಇಷ್ಟ್ ದಿನ ನನ್ನ ಬುಡಿಕೆ ತ ಅವ್ ಅಷ್ಟ್ ಬೇಗ ಬಾದು ತ ಇದ್ದ ಭ್ರಮೆ ಹಾರಿ ಹೋತ್. ಇನ್ನೆಂತ ಮಾಡ್ದು, ನನ್ನ ಹಣೆಬರನೇ ಸರಿ ಇಲ್ಲೇತ ನಡ್ಕಂಡೇ 3 ಮೈಲಿ ಹೋಗಿ ಹೆಂಗೋ ಪೇಟೆ ಸೇರ್ದೆ. ನ ಎತ್ತಿಕೆ ಹಞ್ಞ ಮುಂದೆ ಅಷ್ಟೆ ಬಸ್ ಹೋಗಿ ಆಗುಟು. ಕಾದ್ ಕಾದ್ ಇನ್ನೊಂದ್ ಬಸ್ ಬಾತ್. ಹತ್ತಿ ಕುದ್ದೆ. ಬಸ್ ನ ವಿಚಾರಕ ಟಿಕೆಟ್ ಕೇಳ್ಕನ ಹೆಣ್ಣ್ ಮಕ್ಕಳ ಆಯುಧ ಆದ ಆಧಾರ್ ಕಾರ್ಡ್ ತೋರ್ಸಿಕೆ ಹೇಳ್ದೋ. ನನ್ನ ಚೀಲಕ್ಕೆ ಕೈ ಹಾಕಿ ನೋಡಿರೆ ಆಧಾರ್ ಕಾರ್ಡ್ ಮನೇಲೆ ಬಾಕಿ ತ ನೆನ್ಪಾತ್. ಆತ್ ಮುಗ್ತ್ ಇಲ್ಲಿಗೆ ನನ್ನ ಕತೆತಾ ಹೆದ್ರಿಕಂಡ್ ಹಿಂದೆ ನನ್ನ ಗೆಳತಿ ಹಕ್ಕಲೆ ಉಟ್ಟು ತ ಹಿಂದೆ ಕಳ್ಸಿದೆ. ದುಡ್ಡು ಕೊಟ್ಟ್ ಟಿಕೆಟ್ ಮಾಡ್ಸಕ್ ತ ಹೇಳಿರೆ ಒಂದು ಪೈಸೆ ಸ ತಕಂಡ್ ಬಂದಿತ್ಲೆ.
ಬಸ್ ತುಂಬಾ ಜನ ಇದ್ದರ್ನ್ದಾಗಿ ಆ ವಿಚಾರಕಂಗೆ ಎಲ್ಲಿ ಮರ್ತ್ ಹೊತೋ ಏನೋ. ಹೆಂಗೊ ಬೀಸುವ ದೊಣ್ಣೆಂದ ತಪ್ಪುಸಿಕಂಡರೆ ನೂರು ವರ್ಷ ಆಯುಷ ಗಡ, ಹಂಗೆನೇ ನಾನು ಸ ಹೆಂಗೊ ತಪ್ಪಿಸಿಕಂಡ್ ಕಾಲೇಜಿಗೆ ಹೋಗಿ ಎತ್ತಿದೆ. ತರಗತಿಲಿ ಕುದ್ದರೆ ಯಾವ ಉಪನ್ಯಾಸಕರು ಸ ಬರ್ತಿಲ್ಲೆ. ಹೋಗಿ ಬೇರೆ ಉಪನ್ಯಾಸಕರೊಟ್ಟಿಗೆ ಕೇಳ್ಕನ ಹೇಳ್ದೋ ಕೇರಳಲಿ ಇಂದ್ ಓಟು ಅಲಾ ಹಂಗೆ ಯಾರುಸ ಬಾತ್ಲೇ ತ. ಇನ್ನೆಂತ ಮಾಡ್ದು ಅಷ್ಟ್ ದೂರಂದ ನರ್ಕ ಪಟ್ಟ್ ಬಂದದಕ್ಕೆ ಸ ಒಂದು ಹಾಜರಿಸ ಇತ್ಲೆ, ಇನ್ನ್ ಎಂತ ಮಾಡ್ದು ಬಂದ ದಾರಿಗೆ ಸುಂಕ ಇಲ್ಲೆ ತ ವಾಪಾಸ್ ಹಿಂಬೊತು ಮನೆಗೆ ಹೊರ್ಟೆ. ಅಂತೂ ಇಂತೂ ಎಲ್ಲ ಸೇರಿ ನನ್ನ ಇಂದ್ ಮೂರ್ಖ ಮಾಡಿದ್ದೋ. ಅದ್ ಮರೆಯಕೆನೆ ಆಗದ ಮೂರ್ಖರ ದಿನ ಆತ್. ಮನೆಗೆ ಎತ್ತಿಕನ ಕತ್ತಲೆ ಆಕಂಡ್ ಬಂದಿತ್. ಹೋದಂಗೇನೇ ಅಮ್ಮ ನ ಕರ್ದ್ ಕಾಲೇಜಿಗೆ ಹೋಕನ ಆದ ಅವಾಂತರಗಳ ಎಲ್ಲ ಹೇಳ್ದೆ. ಅಮ್ಮಂಗೆಸ ನೆಗಾಡಿಕೆ ಬರ್ತಿತ್ ಆದರೂ ನನ್ನ ಎದ್ ರ್ ನೆಗಾಡ್ತ್ಲೆ. ನನ್ನ ಧರ್ಮ ಸಂಕಟ ನೋಡಿ ಅಮ್ಮ ಬಿಸಿ ಬಿಸಿ ಚಾಯ ಮಾಡಿ ಕೊಟ್ಟೊ. ಚಾ ಕುಡ್ದ್ ಬೊಚ್ಚೆಲ್ ತೆಗ್ಯಮ ತ ಹಂಗೆ ದಿಂಬುಗೆ ತಲೆ ಕೊಟ್ಟೆ...
-ಧನ್ಯಶ್ರೀ ಎನ್ ಟಿ
ನೆಲ್ಲಿಪುಣಿ ಮನೆ, ಯು. ಚೆಂಬು ಗ್ರಾಮ
ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


