ಬೆಂಗಳೂರು:
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಹಾಗೂ ಶ್ರೀ ಗುರು
ರಾಘವೇಂದ್ರ ಸೇವಾ ಸಮಿತಿ ಪ್ರಕಾಶನಗರ
ಇವುಗಳ ಸಂಯುಕ್ತಾಶ್ರಯದಲ್ಲಿ ಜೂನ್ 2 ರಿಂದ 5ರ ವರೆಗೆ ನಾಲ್ಕು
ದಿನಗಳ ಕಾಲ ಶ್ರೀ ರಾಘವೇಂದ್ರ
ಸ್ವಾಮಿಗಳ ಮಠ, ಪ್ರಕಾಶನಗರ, ಬೆಂಗಳೂರು
ಇಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ
ವಿವರಗಳು
ಜೂನ್
2, ಮಂಗಳವಾರ: ಸಂಜೆ 6-00ಕ್ಕೆ-ರಾಜಾಜಿನಗರದ ಅಂಭ್ರಣಿ
ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ-ಶ್ರೀ ರಾಮವಿಠಲಾಚಾರ್ಯರಿಂದ
ಧಾರ್ಮಿಕ ಪ್ರವಚನ.
ಜೂನ್
3, ಬುಧವಾರ : ಸಂಜೆ 6-00ಕ್ಕೆ-ಗಿರಿನಗರದ ಶೃತಿ
ಸಂಗೀತ ಶಾಲೆಯ ಸದಸ್ಯರಿಂದ ಭಜನೆ, 7-00ಕ್ಕೆ-ಶ್ರೀ ರಾಮವಿಠಲಾಚಾರ್ಯರಿಂದ
ಧಾರ್ಮಿಕ ಪ್ರವಚನ.
ಜೂನ್
4, ಗುರುವಾರ : ಸಂಜೆ 6-30ಕ್ಕೆ-"ಹರಿನಾಮ ಸಂಕೀರ್ತನೆ'. ಗಾಯನ : ಕು|| ಅಭಿಜ್ಞ ಪಿ.
ಕಶ್ಯಪ್, ಪಿಟೀಲು : ಶ್ರೀ ಎಸ್. ಶಶಿಧರ್,
ಮೃದಂಗ : ಶ್ರೀ ಶ್ರೀಧರ್ ರಾವ್.
ಜೂನ್ 5,
ಶುಕ್ರವಾರ : ಸಂಜೆ 6-00ಕ್ಕೆ-ರಾಜಾಜಿನಗರದ ರುಕ್ಮಿಣಿ
ಮಹಿಳಾ ಸಂಘದ ಸದಸ್ಯರಿಂದ ಭಜನೆ,
7-00ಕ್ಕೆ ಶ್ರೀ ರಾಮವಿಠಲಾಚಾರ್ಯರಿಂದ ಧಾರ್ಮಿಕ ಪ್ರವಚನ
ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಟಿಟಿಡಿ ಹೆಚ್.ಡಿ.ಪಿ.ಪಿ.
ಸಂಚಾಲಕರಾದ ಡಾ|| ಪಿ. ಭುಜಂಗರಾವ್
ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


