ಬೆಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಲ್ಲಿ ಗಣಿತದ ಅರಿವು ಹಾಗೂ ಆಸಕ್ತಿಯನ್ನು ವೃದ್ಧಿಸುವ
ಉದ್ದೇಶದಿಂದ ನಿವೃತ್ತ ಶಿಕ್ಷಕ ಎಂ .ಶಂಕರ ರವರು
ರಚಿಸಲಾದ “Innovative
Mathematics Resource Book” (ನೂತನ
ಗಣಿತದ ಸಂಪನ್ಮೂಲ ಪುಸ್ತಕ) ಕೃತಿಯ ಲೋಕಾರ್ಪಣೆ ಸಮಾರಂಭವು ಮೇ 23, 2026ರಂದು ಶನಿವಾರ ಬೆಳಿಗ್ಗೆ
10.35 ಗಂಟೆಗೆ ಬೆಂಗಳೂರಿನ ಜಯನಗರ 8ನೇ ಬ್ಲಾಕ್ ಶ್ರೀ
ಜಯರಾಮ ಸೇವಾ ಮಂಡಳಿಯಲ್ಲಿ ನಡೆಯಲಿದೆ.
ಶ್ರೀ
ವೀರೇಶಾನಂದ ಸರಸ್ವತಿ, ಶ್ರೀ ರಾಮಕೃಷ್ಣ ವಿವೇಕಾನಂದ
ಆಶ್ರಮ, ತುಮಕೂರು ಅವರು ದಿವ್ಯ ಸಾನ್ನಿಧ್ಯ
ವಹಿಸಲಿದ್ದು, ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಅದಮ್ಯ ಚೇತನ ಅಧ್ಯಕ್ಷೆ ಡಾ.
ತೇಜಸ್ವಿನಿ ಅನಂತಕುಮಾರ್ ಅವರು ವಹಿಸಲಿದ್ದಾರೆ. ಕೃತಿ ಪರಿಚಯ ಡಾ.
ಹೆಚ್. ಎಸ್ . ನಾಗರಾಜ, ಸ್ಥಾಪಕರು ಹಾಗು ಮುಖ್ಯ ಮಾರ್ಗದರ್ಶಕರು,
ಪ್ರಯೋಗ ಸಂಸ್ಥೆ ಮಾಡಲಿದ್ದು, ಕಾರ್ಯಕ್ರಮದಲ್ಲಿ
ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು, ಶಿಕ್ಷಣಾಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


