ಮಾನವಿಕ ಶಿಕ್ಷಣದ ಮೇರು ಸಂಸ್ಕೃತಿ ಬಿಂಬಿಸುವ ಉಡುಪಿಯ ಎಂ.ಜಿ.ಎಂ ಪದವಿಪೂರ್ವ ಕಾಲೇಜು

Upayuktha
0

 


 

ಉಡುಪಿ: ಶಿಕ್ಷಣವೆಂದರೆ ಕೇವಲಸೈನ್ಸ್ಅಥವಾಕಾಮರ್ಸ್ಮಾತ್ರ ಎನ್ನುವ ಅಬ್ಬರದ ಪ್ರಚಾರದ ಆಧುನಿಕ ಕಾಲಘಟ್ಟದಲ್ಲೂ, ಮಾನವಿಕ ಶಾಸ್ತ್ರ (Arts) ಕೂಡ ಶಿಕ್ಷಣದ ಅವಿಭಾಜ್ಯ ಅಂಗ ಮತ್ತು ಬದುಕಿನ ದಾರಿದೀಪ ಎಂಬುದನ್ನು ನಿರಂತರವಾಗಿ ಸಾಬೀತುಪಡಿಸುತ್ತಾ ಬಂದಿರುವ ಹೆಗ್ಗಳಿಕೆ ಉಡುಪಿಯ ಪ್ರಸಿದ್ಧ ಎಂ.ಜಿ.ಎಂ. ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ.

 

ವಿದ್ಯಾರ್ಥಿಗಳ ನೆಚ್ಚಿನ ಕಲಾ ವಿಭಾಗ:

ಒಂದು ವಿದ್ಯಾಸಂಸ್ಥೆಯು ಪರಿಪೂರ್ಣ ಎನಿಸಿಕೊಳ್ಳುವುದು ಅಲ್ಲಿ ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಜ್ಞಾನದ ವಿಸ್ತಾರ ಲಭ್ಯವಿದ್ದಾಗ ಮಾತ್ರ. ನಿಟ್ಟಿನಲ್ಲಿ ಎಂ.ಜಿ.ಎಂ. ಕಾಲೇಜಿನ ಆವರಣವು ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿಗೆ ಸರಿಸಮನಾಗಿ ಅತ್ಯುನ್ನತ ಗುಣಮಟ್ಟದ ಕಲಾ ವಿಭಾಗವನ್ನೂ ಪೋಷಿಸಿಕೊಂಡು ಬಂದಿದೆ. ಇಲ್ಲಿನ ಸಂಪನ್ನ ಮತ್ತು ಅನುಭವಿ ಉಪನ್ಯಾಸಕ ವೃಂದ ಹಾಗೂ ಕಲಾ ಪ್ರೇಮಿ ವಿದ್ಯಾರ್ಥಿಗಳಿಂದಾಗಿ ವಿಭಾಗಕ್ಕೆ ಎಂದಿಗೂ ವಿದ್ಯಾರ್ಥಿಗಳ ಕೊರತೆ ಕಾಡಿಲ್ಲ. ಬದಲಾಗಿ, ಜಿಲ್ಲೆ ಹಾಗೂ ಹೊರಜಿಲ್ಲೆಗಳ ಶ್ರೇಷ್ಠ ಪ್ರತಿಭಾವಂತ ವಿದ್ಯಾರ್ಥಿಗಳು ಹೆಮ್ಮೆಯಿಂದ ಎಂ.ಜಿ.ಎಂ. ಕಾಲೇಜಿನ ಕಲಾ ವಿಭಾಗವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಇಲ್ಲಿನ ವಿಶಿಷ್ಟ ಪರಂಪರೆಗೆ ಸಾಕ್ಷಿಯಾಗಿದೆ.

 

ಉನ್ನತ ಸಾಧನೆಗಳ ಹೆಜ್ಜೆಗುರುತು:

ಪ್ರತಿ ವರ್ಷ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದಾಗಲೂ ಎಂ.ಜಿ.ಎಂ. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಶ್ರೇಷ್ಠ ಸಾಧನೆ ದಾಖಲಿಸುತ್ತಾ ಬಂದಿರುವುದನ್ನು ನಾವು ಕಾಣಬಹುದು. ಇಲ್ಲಿ ಅಕ್ಷರ ಕಲಿತ ನೂರಾರು ವಿದ್ಯಾರ್ಥಿಗಳು ಮುಂದೆ ದೇಶದ ಪ್ರತಿಷ್ಠಿತ ಕಾನೂನು (Law) ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸಮೂಹ ಸಂವಹನ (Mass Communication) ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪೂರೈಸಿ, ಇಂದು ಸಮಾಜದ ವಿವಿಧ ಉನ್ನತ ಹಾಗೂ ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

 

ಸಾಧನೆಯ ಚಿನ್ನದ ಗರಿ: ಕು. ಸುಮೇಧಾ ಶೆಣೈ

ಉನ್ನತ ಶೈಕ್ಷಣಿಕ ಪರಂಪರೆಯನ್ನು ಮತ್ತೊಮ್ಮೆ ಪುಷ್ಟೀಕರಿಸುವಂತೆ, ಬಾರಿಯ ಪದವಿಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷೆಯಲ್ಲಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಕು. ಸುಮೇಧಾ ಶೆಣೈ ಅವರು ರಾಜ್ಯ ಮಟ್ಟದಲ್ಲಿ 10ನೇ ರ್‍ಯಾಂಕ್ ಗಳಿಸುವುದರೊಂದಿಗೆ, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಇದು ಎಂ.ಜಿ.ಎಂ. ಸಂಸ್ಥೆಯ ಯಶಸ್ಸಿನ ಮುಕುಟಕ್ಕೆ ಸಂದ ಮತ್ತೊಂದು ಚಿನ್ನದ ಗರಿಯಾಗಿದೆ.

 

ಅಪೂರ್ವ ಪ್ರತಿಭೆ ಸುಮೇಧಾ ಶೆಣೈ ಅವರನ್ನು ಉಡುಪಿ ಜಿಲ್ಲಾ ಆಡಳಿತದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿರುವುದು ಕೇವಲ ಒಬ್ಬ ವಿದ್ಯಾರ್ಥಿನಿಗೆ ಸಂದ ಗೌರವವಲ್ಲ; ಬದಲಿಗೆ ಇದು ಇಡೀ ಮಾನವಿಕ ಶಾಸ್ತ್ರ ವಿಷಯಕ್ಕೆ ಸಂದ ಅತಿ ದೊಡ್ಡ ಗೌರವವಾಗಿದೆ. ಸ್ಪರ್ಧಾತ್ಮಕ ಶೈಕ್ಷಣಿಕ ಜಗತ್ತಿನಲ್ಲಿ ಮಾನವಿಕ ಶಾಸ್ತ್ರದ ಕಲಿಕಾ ಮೌಲ್ಯ ಮತ್ತು ಪ್ರಾಮುಖ್ಯತೆ ಇನ್ನಷ್ಟು ವಿಸ್ತಾರವಾಗಿ ಬೆಳಗಲಿ ಎನ್ನುವುದೇ ನಮ್ಮೆಲ್ಲರ ಆಶಯ.

 

- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ, ಉಡುಪಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top