ಕೆನರಾ ನಂದಗೋಕುಲದಲ್ಲಿ ಸಂಭ್ರಮದ ಅಕ್ಷರಾಭ್ಯಾಸ ಸಮಾರಂಭ

Upayuktha
0


ಮಂಗಳೂರು, ಮೇ 28: ಮಕ್ಕಳ ವಿದ್ಯಾಭ್ಯಾಸದ ಮೊದಲ ಹೆಜ್ಜೆಯಾದ ‘ಅಕ್ಷರಾಭ್ಯಾಸ’ ಸಮಾರಂಭವು ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಆಡಳಿತಕ್ಕೆ ಒಳಪಟ್ಟ ಕೆನರಾ ನಂದಗೋಕುಲದಲ್ಲಿ ಭಕ್ತಿಭಾವ ಹಾಗೂ ಸಡಗರದಿಂದ ನೆರವೇರಿತು.


ಜಲಬಿಂದುನಿಪಾತೇನ ಕ್ರಮಶಃ ಪೂರ್ಯತೇ ಘಟಃ ।

ಸ ಹೇತುಃ ಸರ್ವವಿದ್ಯಾನಾಂ ಧರ್ಮಸ್ಯ ಚ ಧನಸ್ಯ ಚ ॥”


"ಹನಿ ಹನಿಯಾಗಿ ನೀರು ತುಂಬಿದಂತೆ, ಜ್ಞಾನವೂ ನಿರಂತರ ಅಭ್ಯಾಸದಿಂದಲೇ ಸಂಪೂರ್ಣವಾಗುತ್ತದೆ" ಎಂಬ ಸುಭಾಷಿತದ ಸಂದೇಶದೊಂದಿಗೆ ಪುಟಾಣಿ ಮಕ್ಕಳಿಗೆ ಅಕ್ಷರ ಲೋಕದ ದೀಕ್ಷೆ ನೀಡಲಾಯಿತು.


ಸಂಪ್ರದಾಯ ಮತ್ತು ಆಧುನಿಕತೆಯ ಸಮನ್ವಯ: ಮಕ್ಕಳಲ್ಲಿ ಶಿಸ್ತು, ಮೌಲ್ಯ ಹಾಗೂ ವಿದ್ಯೆಯ ಮಹತ್ವವನ್ನು ಬಿತ್ತುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಕೆನರಾ ನಂದಗೋಕುಲದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಜ್ವಲ್ ಮಲ್ಯ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕೆನರಾ ನಂದಗೋಕುಲ ಕೊಡಿಯಾಲ್‌ಬೈಲ್ ಹಾಗೂ ಪದವಿನಂಗಡಿ ಶಾಖೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಮತ್ತು ಅಪಾರ ಸಂಖ್ಯೆಯ ಪೋಷಕರು ಪಾಲ್ಗೊಂಡು ಮಕ್ಕಳ ಜ್ಞಾನದ ಹಾದಿಗೆ ಶುಭ ಹಾರೈಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top