ಮಂಗಳೂರು:
ನಗರಾಭಿವೃದ್ಧಿ ಪ್ರಾಧಿಕಾರದಿಂದ ಮ.ನ.ಪಾ
ವ್ಯಾಪ್ತಿಯ 53ನೇ ಬಜಾಲ್ ವಾರ್ಡಿನ
ಕುಂದೋಡಿ ಕೆರೆ ಅಭಿವೃದ್ಧಿ ಕಾಮಗಾರಿಯು
ಸುಮಾರು 25 ಲಕ್ಷ ರೂ ಅನುದಾನದಲ್ಲಿ
ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್
ರವರ ನೇತೃತ್ವದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ನಂತರ
ಮಾತನಾಡಿದ ಶಾಸಕರು, ಸ್ಥಳೀಯರು ವಿಶ್ರಾಂತಿಗಾಗಿ ಬಳಸುವ ಈ ಕೆರೆಯನ್ನು ಈ
ಹಿಂದೆ ಒಂದು ಹಂತಕ್ಕೆ ಅಭಿವೃದ್ಧಿಗೊಳಿಸಲಾಗಿತ್ತು.
ಇದೀಗ ಸಾರ್ವಜನಿಕರ ಬೇಡಿಕೆಯ ಮೇರೆಗೆ ಮುಂದುವರಿದ ಅಭಿವೃದ್ಧಿ ಕಾಮಗಾರಿಗೆ ಶೀಲನ್ಯಾಸ ನೆರವೇರಿಸಲಾಗಿದೆ. ಈ ಕುರಿತು ಮೂಡ
ಸಭೆಯಲ್ಲಿ ನನ್ನ ಮನವಿಗೆ ತಕ್ಷಣ
ಸ್ಪಂದಿಸಿದ ಮುಡಾ ಅಧ್ಯಕ್ಷರಾದ ಸದಾಶಿವ
ಉಳ್ಳಾಲ್ ಸಹಿತ ಎಲ್ಲಾ ಸದಸ್ಯರಿಗೂ
ವಿಶೇಷ ಅಭಿನಂದನೆಗಳು. ಈ ಕೆರೆಯ ಅಭಿವೃದ್ಧಿಯ
ನಂತರ ಯಾವುದಾದರು ಸಂಘ ಸಂಸ್ಥೆಗಳು ಮೇಲ್ವಿಚಾರಣೆ
ನಡೆಸಿಕೊಂಡು ಹೋದರೆ ಬಹುಕಾಲ ಇದರ ಉಪಯೋಗ ಸಾರ್ವಜನಿಕರಿಗೆ
ದೊರೆಯಲಿದೆ ಎಂದರು.
ಈ ವೇಳೆ ಮುಡಾ ಆಯುಕ್ತರಾದ
ಮೊಹಮ್ಮದ್ ನಜೀರ್, ಪ್ರಮುಖರಾದ ಚಂದ್ರಶೇಖರ್ ಬಜಾಲ್, ನೀರಚ್ಚಂದ್ರ ಪಾಲ್, ಸುಮನ್ದಾಸ್, ಅಬ್ದುಲ್ ಜಲೀಲ್, ಸಭಿತಾ ಮಿಸ್ಕತ್, ವಿನೇಶ್, ಅಶೋಕ್, ಮೋಹನ್ ಟೈಲರ್, ಮೋಹನ್ ದಾಸ್, ದೀಕ್ಷಿತ್, ದೀಪಕ್ ಡಿಸೋಜ, ಮೀನಾಕ್ಷಿ, ಕುಶಾಲ, ಹೇಮಲತಾ, ಮಮತಾ, ಅನಿಶಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


