ಪುತ್ತೂರು: ಇಲ್ಲಿನ
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಇದರ ಗ್ರಾಹಕ
ಸಂಘವು ಜಿಲ್ಲಾ ಮಟ್ಟದ ವಾರ್ಷಿಕ ಕಾರ್ಯಕ್ಷಮತಾ ಮೌಲ್ಯಮಾಪನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದೆ. ಈ ಕಾರ್ಯಕ್ರಮವನ್ನು District Federation of Consumer
Organizations (R), Dakshina Kannada ವತಿಯಿಂದ
ಮೇ 23ರಂದು ಮಂಗಳೂರಿನ ಎಸ್.ಡಿ.ಎಂ. ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
2025–26ನೇ
ಶೈಕ್ಷಣಿಕ ವರ್ಷದ “ಜಿಲ್ಲೆಯ ಅತ್ಯುತ್ತಮ ಗ್ರಾಹಕ ಸಂಘ” ಪ್ರಶಸ್ತಿಯನ್ನು ಸಂತ
ಫಿಲೋಮಿನಾ ಕಾಲೇಜಿನ ಗ್ರಾಹಕ ಸಂಘ ತನ್ನ ಅತ್ಯುತ್ತಮ
ಕಾರ್ಯಕ್ಷಮತೆ, ಗ್ರಾಹಕ ಜಾಗೃತಿ ಕಾರ್ಯಕ್ರಮಗಳು, ಶೈಕ್ಷಣಿಕ ಭೇಟಿಗಳು ಹಾಗೂ ಸಮುದಾಯ ಸೇವಾ
ಚಟುವಟಿಕೆಗಳಿಗಾಗಿ ಪಡೆದುಕೊಂಡಿದೆ.
ಇದೇ
ವೇಳೆ ಕಾಲೇಜಿನ ಗ್ರಾಹಕ ಸಂಘದ ಸಂಯೋಜಕರಾದ ಪ್ರವೀಣ್
ಡಿ ಅವರಿಗೆ “ಅತ್ಯುತ್ತಮ ಸಂಯೋಜಕ” ಪ್ರಶಸ್ತಿ ಲಭಿಸಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಗ್ರಾಹಕ
ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಮತ್ತು ಪ್ರಾಯೋಗಿಕ ತರಬೇತಿಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಈ ಗೌರವ ನೀಡಲಾಗಿದೆ.
ತೃತೀಯ ಬಿ.ಕಾಂ ವಿದ್ಯಾರ್ಥಿನಿ
ಸಫ್ರೀನಾ ಅವರು “ಅತ್ಯುತ್ತಮ ವಿದ್ಯಾರ್ಥಿ” ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಜಿಲ್ಲೆಯ
ವಿವಿಧ ಕಾಲೇಜುಗಳು ಹಾಗೂ ಗ್ರಾಹಕ ಸಂಘಗಳು
ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಆಹಾರ,
ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಕಾಲೇಜಿನ
ಪ್ರಾಂಶುಪಾಲರಾದ ರೆ.ಡಾ.ಆಂಥೋನಿ ಪ್ರಕಾಶ್ ಮಾಂಥೆರೋ ಅವರು
ಗ್ರಾಹಕ ಸಂಘದ ಸಂಯೋಜಕರು ಹಾಗೂ
ಸದಸ್ಯರನ್ನು ಅಭಿನಂದಿಸಿ, ಜಿಲ್ಲಾ ಮಟ್ಟದಲ್ಲಿ ಕಾಲೇಜಿಗೆ ಗೌರವ ತಂದುಕೊಟ್ಟಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


