ಬಳ್ಳಾರಿ:
ವೀ.ವಿ.ಸಂಘದ ಪ್ರತಿಷ್ಠಿತ
ವೀರಶೈವ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರಿಡಾ ವಿಭಾಗದಿಂದ ನಿನ್ನೆ ಬೆಳಗ್ಗೆ 9.00 ಗಂಟೆಗೆ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಾಹುಕಾರ್ ಸತೀಶ್ ಬಾಬು ವಹಿಸಿದ್ದರು. ವಾರ್ಷಿಕ ಕ್ರೀಡಾ ಕೂಟವನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ “ಸದೃಢ ದೇಹದಲ್ಲಿ ಸದೃಢ
ಮನಸ್ಸು” ಎಂದು ತಿಳಿಸಿದರು.
ವಿಎಸ್
ಕೆ ವಿವಿ ಕುಲಸಚಿವ ಪ್ರೋ.ಎನ್.ಎಂ.ಸಾಲಿ
ಯವರು ಕ್ರೀಡಾಕೂಟವನ್ನು ಉದ್ಘಾಟಸಿ ಮಾತನಾಡುತ್ತ ಎಲ್ಲಾ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯತೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಮಹಾವಿದ್ಯಾಲಯದ
ಪ್ರಾಚಾರ್ಯರಾದ ಜಿ.ಮಲ್ಲನಗೌಡ ಪ್ರಾಸ್ತಾವಿಕ
ನುಡಿ ಮಾತನಾಡಿದರು. ವೇದಿಕೆಯಲ್ಲಿ ಹೆಚ್.ಪಿ.ಜಯಪ್ರಕಾಶ್
ಗೌಡ, ಹೆಚ್.ಚಂದ್ರಶೇಖರ್ ಗೌಡ,
ಡಾ.ಶಶಿದರ್.ಎ.ಕೆಲ್ಲೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ
ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರುಗಳಾದ ಎಸ್.ವೆಂಕಟೇಶ್ಗೌಡ, ಕಾರದಪುಡಿ ಮುದ್ದನಗೌಡ,
ಅಕ್ಕಿ ಶಿವರಾಜ್ ಮತ್ತು
ಡಿ.ನಂಜುಂಡಪ್ಪ ಮತ್ತು ವೀರಶೈವ ಪದವಿ ಪೂರ್ವ ಕಾಲೇಜಿನ
ಸದಸ್ಯರಾದ ಮಹೇಶ್ವರ ಸ್ವಾಮಿ ರವರು ಭಾಗವಹಿಸಿದ್ದರು. ವೀರಶೈವ
ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು 400ಕ್ಕು ಹೆಚ್ಚು ವಿದ್ಯಾರ್ಥಿಗಳು
ವಾರ್ಷಿಕ ಕ್ರಿಡಾ ಕೂಟದಲ್ಲಿ ಭಾಗವಹಿಸಿದ್ದರು.
ದೈಹಿಕ
ಶಿಕ್ಷಣ ನಿರ್ದೇಶಕರಾದ ಡಾ.ಕವಿತಾ ಸಂಗನಗೌಡ.ಎಂ ರವರು ಕಾರ್ಯಕ್ರಮವನ್ನು
ನಡೆಸಿಕೊಟ್ಟರು. ಡಾ ಶರಣಬಸವ, ಮುಖ್ಯಸ್ಥರು
ಸಸ್ಯಶಾಸ್ತ್ರ ವಿಭಾಗ ಇವರು ಸ್ವಾಗತಿಸಿದರು. ಡಾ.ವಿನೋದಕುಮಾರ, ಐ.ಕ್ಯೂ.ಎ.ಸಿ, ಸಂಯೋಜಕರು ಇವರು
ಪ್ರತಿಜ್ಞಾ ವಿಧಿ ಬೋಧಿಸಿದರು. ಕುಮಾರಿ.ರೇಖಾಶ್ರಿ.ಎಸ್. ಉಪನ್ಯಾಸಕರು, ಸಸ್ಯಶಾಸ್ರ್ತ
ವಿಭಾಗ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


