ಪ್ರಕೃತಿಯು ಹಳೆಯ ಪರ್ಣಗಳನ್ನು ಉದುರಿಸಿ, ಹಸಿರು ಚಿಗುರನ್ನೊಡೆದು ಮಧುಮಾಸವನ್ನು ಸ್ವಾಗತಿಸುವ ಸುಂದರ ಸಮಯವೇ ಈ "ಹೊಸ ಸಂವತ್ಸರ". ನಮ್ಮೂರಿನಲ್ಲಿ ಯುಗಾದಿಯೆಂದರೆ ಕೇವಲ ಹಬ್ಬವಲ್ಲ, ಅದು ಸಂಭ್ರಮದ ಸಡಗರ. ಮುಂಜಾನೆಯೇ ಬಾಗಿಲಿಗೆ ಕಟ್ಟುವ ಮಾವಿನ ಎಲೆಗಳ ತೋರಣ ಮತ್ತು ರಂಗೋಲಿ ಹೊಸ ಆಶಯಗಳಿಗೆ ನಾಂದಿ ಹಾಡುತ್ತವೆ.
ನಮ್ಮೂರಿನ ವಿಶೇಷವೆಂದರೆ 'ಬೇವು-ಬೆಲ್ಲ'ದ ವಿತರಣೆ. ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶ ಸಾರುವ ಈ ಸಂಪ್ರದಾಯ ಇಂದಿಗೂ ಜೀವಂತ. ಬಾಲ್ಯದಲ್ಲಿ ಗೆಳೆಯರೊಂದಿಗೆ ಸೇರಿ ಪಂಚಾಂಗ ಶ್ರವಣ ಕೇಳಲು ದೇವಸ್ಥಾನಕ್ಕೆ ಹೋಗುತ್ತಿದ್ದ ನೆನಪುಗಳು ಇಂದಿಗೂ ಹಸಿರು. ರೈತಾಪಿ ವರ್ಗಕ್ಕೆ ಇದು ಕೃಷಿ ಚಟುವಟಿಕೆಗಳ ಹೊಸ ಆರಂಭ. ಮನೆಯಲ್ಲಿ ತಯಾರಿಸುವ ಘಮಘಮಿಸುವ ಹೋಳಿಗೆ (ಒಬ್ಬಟ್ಟು) ಮತ್ತು ಮಾವಿನಕಾಯಿ ಚಿತ್ರಾನ್ನದ ಸವಿಯೇ ವಿಶಿಷ್ಟ.
ಹೊಸ ಸಂವತ್ಸರವು ಬದುಕಿನ ಕಹಿಯನ್ನು ಮರೆತು, ಸಿಹಿಯನ್ನು ಹಂಚುತ್ತಾ ಸನ್ಮಾರ್ಗದಲ್ಲಿ ನಡೆಯುವ ಚೈತನ್ಯ ನೀಡಲಿ. ಈ ಯುಗಾದಿ ಎಲ್ಲರ ಬಾಳಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಆಶಿಸೋಣ.
-ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


