ವಂಶಾವಳಿ ತಿಳಿಯುವುದು ಕುತೂಹಲಕ್ಕೆ ಮಾತ್ರ ಅಗತ್ಯವಿದೆ: ಡಾ ಮೈಕಲ್ ಲೋಬೊ

Upayuktha
0


ಮಂಗಳೂರು: ಕ್ರೈಸ್ತ ವಂಶಾವಳಿ ತಿಳಿಯಲು ಚರ್ಚ್ ದಾಖಲೆ ನೋಡಿದರೆ ಸಾಕು; ಆದರೆ ಅದೊಂದು ಕುತೂಹಲ ತಣಿಸುವ ಕೆಲಸ ಬಿಟ್ಟರೆ ಬೇರೆ ಹೆಚ್ಚಿನ ಉಪಯೋಗ ಕಾಣಿಸುವುದಿಲ್ಲ, ಎಂದು ವಂಶಾವಳಿಗಳು ಹುಡುಕಿ ಹತ್ತುಸಾವಿರ ಪುಟಗಳ ಪುಸ್ತಕ ಬರೆದು ಪ್ರಕಟ ಮಾಡಿದ ಮತ್ತು ಅದಕ್ಕಾಗಿ ವಿದೇಶಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪಡೆದ ವಂಶಾವಳಿ ತಜ್ಞ ಡಾ ಮೈಕಲ್ ಲೋಬೊ ಹೇಳಿದರು.


ಅವರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ (ರಿ) ಇದರ 52ನೇ ವರ್ಷದ ಸ್ಥಾಪನಾ ದಿನದ ಪ್ರಯುಕ್ತ ಬಿಇಎಮ್ ಸ್ಕೂಲ್ ಕಾರ್‌ಸ್ಟ್ರೀಟ್ ಸಭಾಂಗಣದಲ್ಲಿ ತೌರೊ ಕುಟುಂಬದ ಸಹಯೋಗದೊಂದಿಗೆ ನಡೆದ ವಂಶಾವಳಿ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡುತ್ತಿದ್ದರು.


ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ವಜ್ರೋದ್ಯಮಿ ಎಸ್‌ ಎಲ್‌ ಪ್ರಶಾಂತ್ ಶೇಟ್ ಮಾತನಾಡಿ, ವಿಭಿನ್ನ ಕಾರ್ಯಕ್ರಮ ಮಾಡಿ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಕೊಂಕಣಿ ಜನರ ಅಗತ್ಯಗಳನ್ನು ಪೂರೈಸಲು ಹವಣಿಸುವುದು ನಿಜವಾದ ಕೆಬಿಎಂಕೆ ಉದ್ದೇಶದ ಈಡೇರಿಕೆ ಕಡೆಗೆ ಸಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿ, ಕರ್ನಾಟಕ, ಕೇರಳ, ಗೋವ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊಂಕಣಿ ಭಾಷಾ ಮಂಡಳಗಳಿದ್ದು ಅವುಗಳ ಕೆಲಸ ಕೊಂಕಣಿ ಚಳುವಳಿ ಆಗಿದೆ. ಹಿಂದೆ ಅಕಾಡೆಮಿ ಆಗಲು, ಎಂಟನೇ ಪರಿಚ್ಛೇದ ಮಾನ್ಯತೆ ಸಿಗಲು ಹೋರಾಟದ ಮಂಚೂಣಿಯಲ್ಲಿ ಇದ್ದೆವು. ಈಗ ಕೊಂಕಣಿ ಭವನ, ಎಂಎ ಆಗಲು ಸದಾ ಚಳುವಳಿ ಮಾಡಲು ಅಣಿಯಾಗಿದ್ದೇವೆ ಎಂದರು.


ಮುಖ್ಯ ಅತಿಥಿ ಆಗಿದ್ದ ಜೋನ್ ಎ ತಾವ್ರೊ ಕಾಮತ್ ಶುಭ ಹಾರೈಸಿದರು. ತೌರೊ ಒಂದು ವಂಶಾವಳಿ ಬಗ್ಗೆ ಸಂಶೋಧನೆ ಮಾಡಿದ ಮಾನ್ವೆಲ್ ತಾವ್ರೊ ಅದರ ಬಗ್ಗೆ ವಿವರಿಸಿದರು. ಪ್ರವೀಣ್ ತೌರೊ ಅವರು ತೌರೊ ಕುಟುಂಬದ ವಂಶಾವಳಿ ಕುರಿತು ವಿವರಿಸಿದರು.


ಕಾರ್ಯಕ್ರಮಕ್ಕೆ ಬಂದ ಕುತೂಹಲಕರ ಜನರು ವಂಶಾವಳಿ ಬಗ್ಗೆ ತಮ್ಮ ಅನುಭವ ಮತ್ತು ಮಾಹಿತಿ ಹಂಚಿಕೊಂಡರು. ಖಜಾಂಜಿ ವಸಂತ ರಾವ್ ಮತ್ತು ಗೀತಾ ಸಿ ಕಿಣಿ, ಜೂಲಿಯೆಟ್ ಫರ್ನಾಂಡೀಸ್ ಪ್ರಶ್ನೋತ್ತರ ನಡೆಸಿಕೊಟ್ಟರು.


ಉಪಾಧ್ಯಕ್ಷ ಮೀನಾಕ್ಷಿ ಎನ್ ಪೈ ಮತ್ತು ರಾಜ್ಯ ಶಿಕ್ಷಕರ ಸಂಘದ ಮಾಜಿ ಉಪಾಧ್ಯಕ್ಷ ಸ್ಟೇನಿ ತೌರೊ ಸಮಾರೋಪ ಭಾಷಣ ಮಾಡಿದರು.


ಮೊದಲಿಗೆ ಕಾರ್ಯಕಾರಿ ಸದಸ್ಯ ಆದ ರೊಬರ್ಟ್ ಮೆನೆಜಸ್ ಸ್ವಾಗತಿಸಿ, ಕಾರ್ಯದರ್ಶಿ ಲಿಸ್ಟನ್‌‌ ಡಿಸೋಜ ವಂದಿಸಿದರು. ಜೊಸ್ಸಿ ಪಿಂಟೊ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top