ಪುತ್ತೂರು: ಸಂಶೋಧನೆಯು ಹುಡುಕಾಟಕ್ಕಿಂತ ಭಿನ್ನವಾಗಿದೆ. ಹೇಗೆ ವಿಭಿನ್ನಎಂದು ನಾವು ತಿಳಿದುಕೊಳ್ಳಬೇಕು. ಇವೆರಡರ ಮಧ್ಯೆ ಅನೇಕ ವ್ಯತ್ಯಾಸಗಳಿವೆ. ಸಂಶೋಧನಾ ಗುಣ ಎಲ್ಲಾ ಮನುಷ್ಯರಲ್ಲೂ ಇರುವಂತದ್ದು. ಯಾವುದಾದರೂ ಹೊಸ ವಿಷಯದ ಹುಡುಕಾಟವೇ ಸಂಶೋಧನೆ. ಇದು ನಮ್ಮ ಜ್ಞಾನವನ್ನು ಹೆಚ್ಚುಗೊಳಿಸುವುದಲ್ಲದೆ ಅನೇಕ ವಿಷಯಗಳ ಬಗೆಗೆ ತಿಳಿಸಿಕೊಡುತ್ತದೆ. ಈ ಪ್ರಕ್ರಿಯೆಯು ದೀರ್ಘಕಾಲದ ಸಮಯವಕಾಶವನ್ನು ತೆಗೆದುಕೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಯ ಬಳಿಕದ ಜೀವನಕ್ಕೆ ಸಂಶೋಧನಾಶೀಲ ಅಧ್ಯಯನವು ಹೆಚ್ಚು ಸಹಾಯಕವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ.ಶ್ರೀಪತಿ ಕಲ್ಲೂರಾಯ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿ ಸ್ನಾತಕೋತ್ತರ ವಿಭಾಗ ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕದ ವತಿಯಿಂದ ನಡೆದ ಉತ್ತಮ ಸಂಶೋಧನೆಯನ್ನು ರೂಪಿಸಲು ಸಲಹೆಗಳು ಮತ್ತು ತಂತ್ರಗಳು ಎಂಬ ವಿಶೇಷ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶುಭಾಶಯದ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗ ಮತ್ತು ವಿವೇಕಾನಂದ ಸಂಶೋಧನಾಕೇಂದ್ರದ ನಿರ್ದೇಶಕಿಡಾ. ವಿಜಯ ಸರಸ್ವತಿ ಬಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದ್ವಿತೀಯ ಎಂ.ಕಾಂ ವಿದ್ಯಾರ್ಥಿ ಪವನ್ರಾಜ್ ಸ್ವಾಗತಿಸಿ,ರೇಖಾ ವಂದಿಸಿ, ದೀಪಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


