ಮಂಗಳೂರು: ಅಳಿಕೆ ಗ್ರಾಮದ ನೆಗಳಗುಳಿ ಮೂಲದ ನೆಗಳಗುಳಿ ಮಹಾಬಲೇಶ್ವರ ಭಟ್ ಅವರು ತಮ್ಮ 87 ನೇ ವಯಸಿನಲ್ಲಿ ವಯೋ ಸಹಜ ಕಾಯಿಲೆಯಿಂದ ಜ. 24 ರ ಶನಿವಾರ ನಿಧನರಾಗಿದ್ದಾರೆ.
ಪ್ರಕೃತ ಮಂಗಳೂರಿನ ರಾಣಿಪುರ ಸಮೀಪದ ಭಂಡಾರ ಬೈಲು ನಿವಾಸಿಯಾಗಿದ್ದ ಅವರು ಇಬ್ಬರು ಗಂಡು ಮಕ್ಕಳನ್ನು ಹಾಗೂ ಇಬ್ಬರು ಪುತ್ರಿ ಮತ್ತು ಪತ್ನಿ ಶಂಕರಿ ಅಮ್ಮ ಅವರನ್ನು ಅಗಲಿರುತ್ತಾರೆ.
ಮೊದಲ ಪುತ್ರ ಎನ್ ಟಿ ರಾಜ ಅವರು ಮಂಗಳೂರಿನಲ್ಲಿ ಉದ್ಯಮಿಯಾಗಿದ್ದು ದ್ವಿತೀಯ ಪುತ್ರ ಅಮೇರಿಕಾದಲ್ಲಿ ಕರ್ತವ್ಯ ಎಸಗುತ್ತಿದ್ದಾರೆ. ಮಂಗಳೂರು ಕೆನರಾ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಅವರು ವಿದ್ಯಾಭೋಧಿನಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸುದೀರ್ಘ ಅವಧಿಗೆ ಅಡ್ಯನಡ್ಕ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಗೈದು ನಿವೃತ್ತರಾಗಿದ್ದರು. ಅಶುಕವನ ಹಾಗೂ ಯಕ್ಷಗಾನ ಅರ್ಥಗಾರಿಕೆಯಲ್ಲಿಯೂ ತಮ್ಮನ್ನು ಅವರು ತೊಡಗಿಸಿಕೊಂಡಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


