ಹಿಂದೂ ಟೆರರಿಸಂ ಎಂಬ ಜಾಗತಿಕ ಮಿಥ್ಯೆ!

Upayuktha
0


ಹಿಂದೂಗಳು ಜಗತ್ತಿನ‌ ಅತ್ಯಂತ ಕಡುಪಾಪಿ ಜನಾಂಗಕ್ಕೆ ಸೇರಿದವರು. ಇವರನ್ನು ಪುಣ್ಯವಂತರನ್ನಾಗಿಸಿ ಸ್ವರ್ಗಕ್ಕೇರಲು ಅರ್ಹಗೊಳಿಸುವ ಪ್ರಯತ್ನವನ್ನು ಕ್ರೈಸ್ತ-ಮುಸಲ್ಮಾನ ಸಾಧು ಸಂತರು ವ್ಯಯಿಸಿದ ಹಣವೂ, ಸುಧಾರಣಾ ಸೇನೆಯೂ, ಹಲವು-ಹತ್ತು ಕಾರ್ಯಯೋಜನೆಗಳೂ, ಸೈಲೆಂಟಾಗಿ ನಡೆಸಿದ ತಂತ್ರ-ಯಂತ್ರಗಳೂ ಲಾಗಾಯ್ತಿನಿಂದಲೂ ಫಲಕಾರಿಯಾಗಲಿಲ್ಲ ಎಂಬುದು ಯಾರ ದುರಂತ? ಹೌದು, ಎಷ್ಟು ಬಗೆಯಲ್ಲಿ ಹಿಂದೂ ಎಂಬುದನ್ನು ಅಪಾರ್ಥಗೊಳಿಸಿ ವಿರೂಪಗೊಳಿಸಿ ವಿಕೃತಿಯಾಗಿ ಮಾಡಲು ಸಾಧ್ಯವೋ ಅವೆಲ್ಲವೂ ಮೊದಲಿಂದಲೂ ನಡೆಯುತ್ತಲೇ ಇದೆ.


ಗಾಂಧಿ, ನೆಹರೂ ಆಮೇಲೆ ಬಂದವರು, ಹೋದವರು ಮಾಡಿದ್ದೂ ಇದನ್ನೇ ಅಲ್ಲವೆ? ಹಿಂದೂ ಎಂಬ ಧರ್ಮ (ಕ್ಷಮಿಸಿ,‌ ಧರ್ಮವೆಂದೇ ಕರೆದು ರೂಢಿಯಾಗಿದ್ದರಿಂದ ಹಾಗೆಯೇ ಬಳಸುತ್ತಿದ್ದೇನೆ. ನಿಜವಾಗಿ ಹಿಂದೂ ಎಂಬುದು ರಾಷ್ಟ್ರವಾಚಕವೇ ಹೊರತು ಧರ್ಮವಾಚಕವಲ್ಲ. ಈ ದೇಶವನ್ನು ಹಿಂದೂಸ್ಥಾನ ಅಂತಲೇ ಕರೆಯುವುದು) ಕ್ರೂರ; ಅಮಾನವೀಯ; ಬರ್ಬರ; ಹಿಂಸಾತ್ಮಕ; ನಿರ್ದಯ ಎಂದೂ, ಪುರಾಣಗಳು, ವೇದೋಪನಿಷತ್ತುಗಳು, ಭಗವದ್ಗೀತೆ, ರಾಮಾಯಣ ಮಹಾಭಾರತಗಳು- ಇವುಗಳ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತ, ಜರೆಯುತ್ತ, ನಿಂದಿಸುತ್ತ, ಸುಳ್ಳೆಂಬ ವಾದ-ವಿವಾದಗಳ ಸುತ್ತ ನೀವು ಬದುಕಿದರೆ ನೀವು ಪ್ರಗತಿಪರರು. ಅದನ್ನೇ ನೀವು ಎಲ್ಲ ಕ್ಷೇತ್ರಗಳಲ್ಲೂ ಪ್ರಚುರಪಡಿಸಿದರೆ ನಿಮಗೆ ಪದವಿ, ಸ್ಥಾನ, ಮಾನ, ಪುರಸ್ಕಾರ…ಎಲ್ಲ ಸೌಲಭ್ಯಗಳೂ! ಹಿಂದೂ ಧರ್ಮದ ಗ್ರಂಥಗಳು ಹಿಂಸೆಯನ್ನು ಹುಟ್ಟಿಸುವಂತೆ ಪ್ರಲೋಭನೆ, ಪ್ರಚೋದನೆ, ಪ್ರೇರಣೆಯನ್ನು ನೀಡುತ್ತವೆಂದು ಘಂಟಾಘೋಷವಾಗಿ ನೀವು ಹೇಳುತ್ತಿರಾದರೆ ನಿಮಗೂ, ದೇಶಕ್ಕೂ, ಜಗತ್ತಿಗೂ ಕ್ಷೇಮವಾಗುತ್ತದೆಂದು ಹೇಳಿದವರು, ಬರೆದವರು, ಹಾಗೆಯೇ ಬದುಕಿದವರು ಹಿಂದೂ ಟೆರರಿಸಂ ಎಂಬುದನ್ನು ಬಿತ್ತಿದರು.


ನಮ್ಮದೇ ರಾಜ್ಯದ ಮುಖ್ಯಮಂತ್ರಿಗಳು ಹಿಂದೂ ಎಂಬುದು ಹಿಂಸೆಯನ್ನು ಹುಟ್ಟಿಸುತ್ತದೆ ಎಂದಿರುವುದನ್ನು ನೆನಪಿಸಿಕೊಳ್ಳಿ. ಕನ್ನಡದ ಜ್ಞಾನಪೀಠಿಯೊಬ್ಬ ಹಿಂದೊಮ್ಮೆ ಹೇಳಿದ್ದು: ಕರ್ನಾಟಕದಲ್ಲಿ ನಡೆಯುತ್ತಿರುವ ಎಲ್ಲ ಬಗೆಯ ಹಿಂಸೆಗೆ ಉಡುಪಿಯೇ ಮೂಲ ಎಂದು! ಆ ಜ್ಞಾನಪೀಠಿ (ತಾನು ಲಾಭಿ ಮಾಡಿಯೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದದ್ದು ಎಂದು ವಾಸ್ತವವನ್ನೇ ಹೇಳಿ ಪ್ರಶಸ್ತಿಯನ್ನು ತಾನು ಹೊಡೆದುಕೊಂಡದ್ದು ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು) ಸಂಶೋಧನೆ ಮಾಡಿ ಹೇಳಿದ್ದನೋ ಉಡುಪಿಯ ಆ ಕಡೆಗೋಲು ಕೃಷ್ಣನೇ ಬಲ್ಲ! ಅದಕ್ಕೆ ಬನ್ನಂಜೆಯವರು ಅವನಿಗೆ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದು ಇನ್ನೂ ನೆನಪಿದೆ. ಮಜಾ ಏನೆಂದರೆ, ಇದೆಲ್ಲ ವಿದ್ಯಮಾನಗಳು ನಡೆಯುವಾಗ ಜ್ಞಾನಪೀಠಕ್ಕಾಗಿ ಆ ಜ್ಞಾನಪೀಠಿ ನಡೆಸಿದ ಲಾಭಿಯ ವಿವರವನ್ನು ಹಿರಿಯರೊಬ್ಬರು ಆ ಹೊತ್ತಲ್ಲಿಯೇ ಕಳಿಸಿದ್ದರು! ಅದನ್ನು ಓದಿದಾಗ ನಿಜವಾಗಿ ದಿಗಿಲುಗೊಂಡಿದ್ದೆ! ಇರಲಿ ಬಿಡಿ, ಅದೆಲ್ಲ ಈಗ ನೆನಪಾಯಿತು, ಹೇಳಿದೆಯಷ್ಟೆ. ಯಾಕೆಂದರೆ ಹಿಂದೂಗಳಾಗಿದ್ದುಕೊಂಡೇ ಹಿಂದೂಧರ್ಮವನ್ನು, ಹಿಂದೂ ಸಮುದಾಯವನ್ನು ಅವಹೇಳನ ಮಾಡುತ್ತಲೇ ಬಂದವರಲ್ಲಿ ಅನೇಕರು ಈಗ ಇಲ್ಲದಿದ್ದರೂ ಅವರ ವರಸೆಗಳು ಮಾಸಿಲ್ಲವಾದ್ದರಿಂದ! 


ಕ್ರೈಸ್ತ ಮುಸಲ್ಮಾನರ ವಿಷಯದಲ್ಲಿ ಚರಿತ್ರೆಯೆಂಬುದು ಕೇವಲ ಫ್ಯಾಕ್ಟ್! ಹಿಂದೂಗಳ ವಿಷಯದಲ್ಲಿ ಅದು ಸತ್ಯ! ಹೇಗೆ? ನೋಡಿ: ರಾವಣ ಸೀತೆಯನ್ನು ಕದ್ದೊಯ್ದದ್ದು ಅವಳ ಹಿತಕ್ಕಾಗಿ; ಅವಳ ಪ್ರಗತಿಗಾಗಿ; ಸುಖಕ್ಕಾಗಿ! ರಾವಣ ಶಾಂತಿಪ್ರಿಯ. ರಾಮನೇ ಟೆರರಿಸ್ಟ್ ಇದ್ದ! ಅವನ‌ ಬಿಲ್ಲು ಬಾಣಗಳು ಟೆರರಿಸಂ ಸಂಕೇತ. (ಪ್ರಭು ಶ್ರೀರಾಮನನ್ನು ನೆಗೆಟಿವ್ ದೃಷ್ಟಿಕೋನದಲ್ಲಿ ಕಂಡ ಅತಿಮಾನುಷ ಬುದ್ಧಿಯವನೊಬ್ಬ ಶ್ರೀರಾಮನಿಗೆ ಮಂದಿರ ಯಾಕೆ ಬೇಕು ಎಂದಿದ್ದ? ರಾಮ ಟೆರರಿಸ್ಟ್ ಆದರೆ, ಶ್ರೀಕೃಷ್ಣನಂತೂ ಮಹಾ ಟೆರರಿಸ್ಟ್. ಕಂಸ ಅತಿ ಶಾಂತಿಪ್ರಿಯ. ಬಹುದೊಡ್ಡ ಕ್ರಾಂತಿಕಾರಿ. ಅತ್ಯಂತ ಸಭ್ಯ. ಜರಾಸಂಧ, ಶಿಶುಪಾಲ, ಪೌಂಡ್ರಕ, ಕರ್ಣ, ದುಃಶ್ಶಾಸನ, ದುರ್ಯೋಧನಾದಿಗಳು ಹಿಂದೂ ಸಮಾಜದಲ್ಲಿರುವ ಅನಿಷ್ಟಗಳಿಗೆ ಮೋಚಕರಾಗಿ ಹುಟ್ಟಿ ಬಂದ ಮಹಾನ್ ಸುಧಾರಕರು. ಶ್ರೀಕೃಷ್ಣ ನಯವಂಚಕ. ಪಕ್ಷಪಾತಿ. ಅವನ ಚಕ್ರ, ಗದೆ, ಕತ್ತಿ, ಬಿಲ್ಲು-ಮುಂತಾದವೆಲ್ಲವೂ ಟೆರರಿಸಂ ಸಂಕೇತಗಳು. ವಿಷ್ಣು ಸಹಸ್ರನಾಮ ಅವನನ್ನು ಸರ್ವಪ್ರಹರಣಾಯುಧ ಎಂದದ್ದೇ ಪ್ರಮಾಣ. ಎಲ್ಲ ದೇವತೆಗಳ ಕೈಯಲ್ಲಿರುವ ಆಯುಧಗಳು ಹಿಂಸೆಯನ್ನು ಪ್ರಚೋದಿಸುತ್ತವೆ. (ಅತೀ ಬುದ್ಧಿವಂತ ಎಡಚರನೊಬ್ಬ ಚಾಮುಂಡಿಯನ್ನು ಹಿಂಸ್ರಕಿ ಎಂದು ಕರೆದಿದ್ದ!) ಬಲರಾಮರೂ ಅಷ್ಟೆ. ನರಸಿಂಹ ಅತೀದೊಡ್ಡ ಟೆರರಿಸ್ಟ್. ವರಾಹ, ಕಲ್ಕಿ, ಅತಿಭೀಷಣ, ದಾರುಣ ಭಯಾನಕ ಟೆರರಿಸ್ಟ್ ಗಳು! ಗಣಪತಿ, ಸುಬ್ರಹ್ಮಣ್ಯ, ಹನೂಮಂತ (ಅವನೇ ಭಜರಂಗ ಬಲಿ, ಬಜರಂಗದಳದ ಸ್ಥಾಪಕ!), ಶಿವ, ಬ್ರಹ್ಮ, ದೇವತೆಗಳೆಲ್ಲರೂ ಹಿಂದೂ ಟೆರರಿಸ್ಟುಗಳು. ಯಾಕೆಂದರೆ, ಅವರುಗಳ ಕೈಯಲ್ಲಿ ಆಯುಧಗಳಿವೆ. ಒಟ್ಟಾರೆ ಹಿಂದೂ ಎಂಬುದೇ ಮಹಾ ಭಯೋತ್ಪಾದನೆಯ ಆಡುಂಬೊಲ ಎಂಬಂತೆ ಬಿಂಬಿಸಿರುವ ಇಂಥವರ ಚಿತಾವಣೆಗಳಿಂದ ಹಿಂದೂದ್ವೇಷ ನಿರಂತರವಾಗಿ ಬೆಳೆಯುತ್ತಲೇ ಇದೆ. ಆದರೆ ಆ ದ್ವೇಷಕ್ಕೆ ಕಾರಣವೇನು? ಗೊತ್ತಿಲ್ಲ. 


ಆಯುಧ ಹಿಡಿಯದೇ ಹಣ ಕೊಟ್ಟು, ಹೆಣ್ಣು ತೋರಿಸಿ, ಸೀಟು ಕೊಟ್ಟು ಮತಾಂತರ ಮಾಡುವವರೇ ಶಾಂತಿಪ್ರಿಯರು. ಶಾಂತಿದೂತರು. ಅವರು ದೇವರಿಂದ ಕಳಿಸಲ್ಪಟ್ಟವರು. ಊರುಗಳಿಗೇ ಹಸಿರು ಬಳಿದು ಅರೇಬಿಯಾಕ್ಕೆ ಮಾರುವವರು ಮಹಾಶಾಂತಿಪ್ರಿಯರು. ಇವರು ಆಗಾಗ ಭಾರತದಲ್ಲಿ ನಡೆಸುವ ಬಾಂಬುಸ್ಫೋಟಗಳು ಜನಸಂಖ್ಯಾ ನಿಯಂತ್ರಣದ ಉಪಕಾರದ ಅಮೃತ ಫಲಗಳು. ಅಫಜಲ್ ಗುರುವೇ ವಿಶ್ವಗುರು! ಇಸ್ಲಾಂ ವಿಚಾರದಲ್ಲಿ ಮತಕ್ಕೂ ಭಯೋತ್ಪಾದನೆಗೂ ಸಂಬಂಧವಿಲ್ಲ. ಟೆರರಿಸಂ ಈಸ್ ಟೆರರಿಸಂ. It has no religion ಎನ್ನುತ್ತಾರೆ ಸ್ವಾತಂತ್ರ್ಯೋತ್ತರ ಭಾರತ ಕಂಡ ಮಹಾನ್ ದಾರ್ಶನಿಕರಾದ ಸರದೀಪ ದೇಸಾಯಿ, ಬರ್ಖಾ ದತ್, ಸೆಟಲ್ವಾಡ್, ಥಾಪರ್ ಮುಂತಾದ ಇಂಟ್ ಲೆಕ್ಚುವಲ್ ಮಹನೀಯರು- ಎನ್ ಡಿಟಿವಿ, ಸಿಎನ್ ಎನ್, ಐಬಿನ್ ಇತ್ಯಾದಿ ಲಹರಿಗಳಲ್ಲಿ! ಪಾಪಿ ಹಿಂದೂಗಳದ್ದು ಹೀಗಲ್ಲ. ಅವರದ್ದು it is rooted in their very religion! ಕ್ರೈಸ್ತ, ಮುಸಲ್ಮಾನರು ಹಿಂದೂಗಳನ್ನು ಸಾಯಿಸುವಾಗ, ಕಾಶ್ಮೀರದಿಂದ ಹೊರದಬ್ಬುವಾಗ, ಜನಸಂದಣಿಯಲ್ಲಿ ಬಾಂಬು ಬ್ಲಾಸ್ಟ್ ಮಾಡಿದಾಗಾ, ಹುಡುಕಿ ಹುಡುಕಿ ಹಿಂದೂ ಹೆಂಗಳೆಯರನ್ನು ಕೊಂದಾಗ, ಪಾಕೀಸ್ಥಾನ ಜಿಂದಾಬಾದ್ ಎಂದಾಗ, ಪ್ರಸಾದಗಳಲ್ಲಿ ವಿಷ ರಾಸಾಯನಿಕಗಳನ್ನು ಬೆರೆಸುವಾಗ, ಗೃಹಮಂತ್ರಿ, ಪ್ರಧಾನಮಂತ್ರಿ ಸೈನ್ಯಗಳು ಸೈಲೆಂಟಾಗಿರಬೇಕು. ಅದು ಮಾತ್ರ ಸುಧಾರಣೆಯ ಹಾದಿ! ಇಂಡಿಯಾದ ಹಿತ ಅದರಲ್ಲಿದೆ. Of course ಭಾರತದ್ದಲ್ಲ! ಆಕಸ್ಮಾತ್ ಹಿಂದೂ ಇಂಥವುಗಳನ್ನು ವಿರೋಧಿಸಿದರೆ, ಪ್ರತಿಭಟಿಸಿದರೆ ಅದು ಹಿಂದೂ ಟೆರರಿಸಂ! ಆಗ ಜಗತ್ತಿನ ಎಲ್ಲ ಪ್ರಗತಿಪರರೂ, ಎಡಚರರೂ, ಕಮ್ಯುನಿಸ್ಟರೂ ಸೇರಿ ಖಂಡಿಸಬೇಕು. ಹಿಂದೂ ಧರ್ಮದ ವಿರುದ್ಧ ಬಾಯಿಗೆ ಬಂದಂತೆ ಹೇಳಿಕೆಗಳನ್ನು‌ ನೀಡಬೇಕು. ಸಾಮೂಹಿಕವಾಗಿ ಪ್ರತಿಭಟಿಸಬೇಕು. ಹಿಂದೂ ಧರ್ಮ ಅಸಹಿಷ್ಣುತೆಯಿಂದ ತುಂಬಿದೆಯೆಂದು ನೆಗೆಟಿವಿಸಂ ಹುಟ್ಟಿಸಬೇಕು. ಹರಡಬೇಕು!


ಇನ್ನೂ ಮುಂದುವರೆದು, ಶಿವಾಜಿ, ರಾಣಾಪ್ರತಾಪ, ಮದಕರಿ, ಜಾನ್ಸಿ, ಓಬವ್ವ, ಅಬ್ಬಕ್ಕರೆಲ್ಲರೂ ಟೆರರಿಸ್ಟುಗಳು. ಅರವಿಂದ, ವಿವೇಕಾನಂದ, ದಯಾನಂದರು, ರಾಜಾರಾಮರು ಟೆರರಿಸ್ಟರು! ಹಿಂದೂ ಮಠಾಧೀಶರುಗಳು ಟೆರರಿಸ್ಟುಗಳು! ಈಗ ನಿಮಗೆ ಗೊತ್ತಾಗಿರಬೇಕಲ್ಲ: ಹಿಂದೂ=ಜಾತಿವಾದಿ=ಟೆರರಿಸ್ಟ್. ಇದು ಇತ್ತೀಚಿನ ಸಂಶೋಧನೆ ಎಂತ ಕಂಡರೂ ನೆಹರೂ ಪ್ರಧಾನಿ ಲಾಗಾಯ್ತಿನಿಂದಲೂ ಸೃಷ್ಟಿಯಾದದ್ದು. ಪ್ರತಿಭಟಿಸಿದ ಎಲ್ಲ ಹಿಂದೂಗಳು ಟೆರರಿಸ್ಟುಗಳು. ಪೋಲಿಸರು,‌ ವೈದ್ಯರು ಆಯುಧವನ್ನು ಹಿಡಿಯುತ್ತಾರೆ. ಅವರು ಟೆರರಿಸ್ಟ್ ಗಳು! ಪರೀಕ್ಷೆಯಲ್ಲಿ ಫೇಲು ಮಾಡಿದ ಮೇಷ್ಟ್ರು ಟೆರರಿಸ್ಟ್! ಹಣಕ್ಕೆ ಅಂಕ, ಪ್ರಶಸ್ತಿ, ಪದವಿ ಕೊಡುವವರೇ ಪ್ರಗತಿಪರರು! ಅದು ಲೋಕೋಪಕಾರ! ಹಿಂದೂಗಳನ್ನು ಮುಸ್ಲಿಮರು ಕೊಂದರೆ ಹಿಂದೂವಿನದ್ದೇ ತಪ್ಪು. ಆ ತಪ್ಪಿಗೆ ಅದು ಶಿಕ್ಷೆ. ಇಂಥ ಶಿಕ್ಷೆಗಳು ಫ್ಯಾಕ್ಟ್! ಆದರೆ ಸತ್ಯವಲ್ಲ ಎಂಬ ಮನಃಸ್ಥಿತಿಯವರಿಗೆ ಜಾತಿಯನ್ನು ಬ್ರಾಹ್ಮಣರು ಸೃಷ್ಟಿಸಲಿಲ್ಲ; ಅದು ಅನಾದಿ ಎಂದ ಅಂಬೇಡ್ಕರರೂ ಜಾತಿವಾದಿ ಎಂದು ಕಂಡರು! ಬೌದ್ಧಮತದ ಅತೀ ಮಡಿವಂತಿಕೆ, ಅಹಿಂಸಾಚರಣೆ,‌ ಮಾಂಸವರ್ಜನೆಗಳಿಂದ ಜಾತಿ ಬಿಗಡಾಯಿಸಿತೆಂದು ಅವರು ಬರೆದದ್ದು ಜಾತಿಗೆ ಪ್ರೋತ್ಸಾಹಕರ! ಅಂಬೇಡ್ಕರರನ್ನು ಪ್ರಗತಿಪರರು, ಎಡಚರರು ಕಮ್ಯುನಿಸ್ಟರು ಓದಬಾರದು. ಓದಿದರೆ ಜ್ಞಾನ ಬಂದು ಬಿಡುತ್ತದೆ. ಅದು ಬಲು ಅಪಾಯಕಾರಿ! ಹಾಗಾದರೆ ಓದಬೇಕಾದವರು ಯಾರು? ಊಹಿಸಿಕೊಳ್ಳಿ.


ವಿವೇಕಾನಂದರು ಜಾತಿವಾದಿ! ಸುಭಾಸ್ ಚಂದ್ರ ಬೋಸರು ಮಹಾನ್ ಟೆರರಿಸ್ಟ್! ಲಾಲ್ ಬಾಲ್ ಪಾಲರು ತ್ರಿವಳಿ ಟೆರರಿಸ್ಟರು! ಭಗತ್ ಸಿಂಗ್, ಆಜಾದ್, ರಾಜಗುರು, ಸುಖದೇವ, ಧಿಂಗ್ರಾ, ಅಲ್ಲೂರಿಯಂಥ ನೂರಾರು ಕ್ರಾಂತಿವೀರರು ಕ್ರಾಂತಿಕಾರಿ ಟೆರರಿಸ್ಟುಗಳು! ಪಟೇಲರು ಟೆರರಿಸ್ಟ್! ಈಗ ಮೋದಿ, ಅಮಿತ್ ಷಾ, ಯೋಗಿ ಅದಿತ್ಯನಾಥ್ ಮತ್ತು ಅವರಂಥ ಅಪ್ಪಟ ಹಿಂದೂ ಮುಖಂಡರು ಕೂಡ ಸರಿಹೊತ್ತಿನ ಟೆರರಿಸ್ಟುಗಳು! ಈ ಕ್ಷಣವೇ ಇವರೆಲ್ಲ ಹಿಂದೂವಿರೋಧಿಯಾದರೆ ಪ್ರಗತಿಪರರು! ಈಗಲಾದರೂ ಗೊತ್ತಾಯಿತಲ್ಲ? ಯಾರು ಯಾಕೆ ಟೆರರಿಸ್ಟುಗಳು ಅಂತ! ಹೀಗೆ ಹಿಂದೂ ಟೆರರಿಸಂ ಬಗ್ಗೆ ಬರೆಯುವ ಜರೆಯುವ ಕೊರೆಯುವ ನಿಂದಿಸುವ ಅಣಕಿಸುವ ನಿಂದಿಸುವವರೆಲ್ಲರೂ ಜಗದೋದ್ಧಾರಕರು! Classless society with only to classes, masses and bosses- ಎಂಬುದು ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಸತ್ತಿರಬಹುದು. ಆದರೆ ಭಾರತದಲ್ಲಿ ಸಾಯಬಾರದು. ಸತ್ತರೆ ಹಿಂದೂ ಟೆರರಿಸಂ ಉಚ್ಛ್ರಾಯಕ್ಕೆ ಬರುತ್ತದೆ. ಅದನ್ನು ತಡೆಯಲು ಈ ಸೋಕಾಲ್ಡ್ ಪುಟುಗೋಸಿ ಪಡಪೋಷಿ ಎಡಪಂಥೀಯರು ಗುತ್ತಿಗೆ ಪಡೆದುಕೊಂಡು ದುಡಿಯುತ್ತಿದ್ದಾರೆ. ಅವರಲ್ಲಿ ಕೆಲವರು ಮೇಲೆ ಹೋಗಿದ್ದಾರೆ. ಅಳಿಯದೆ ಉಳಿದವರಿಗೆ ಉಸಿರು ಕಟ್ಟಿದೆ. ಈಗ ಅವರಿಗೆ ಎಲ್ಲೆಲ್ಲೂ ಮೋದಿ ಫೋಬಿಯಾ! ಆದರೂ ಇಂಥ ಪುಟಗೋಸಿಗಳು ಹೇಳಿದ್ದು ಸತ್ಯ! ಹಿಂದೂಯೇತರರದು ಫ್ಯಾಕ್ಟ್!


ಹೌದು, ಹಿಂದೂ ಧರ್ಮದಲ್ಲಿ ನ್ಯೂನತೆಯಿದೆ. ತಪ್ಪುಗಳಿವೆ. ಕೊರತೆಗಳಿವೆ. ಹಿಂದೂ ಎನ್ನುವ ಮುಖ್ಯವಾಹಿನಿಯ ಭಾರತೀಯ ಸಮಾಜಕ್ಕೆ ಬಲಿಷ್ಠ ನಾಯಕರೇ ಇಲ್ಲ. ಮುಂದಾಳೇ ಇಲ್ಲ. ಇದ್ದವರ ಮಾತನ್ನು ಹಿಂದೂಗಳೇ ಕೇಳುವುದಿಲ್ಲ. ಧರ್ಮ ಸಂರಕ್ಷಣೆ, ರಾಜಕಾರಣ, ಸಮಾಜ ಚಿಂತನೆಯಲ್ಲಿ ಕ್ರೈಸ್ತ ಮುಸ್ಲಿಮರು ನಡಕೊಂಡ ರೀತಿಯಲ್ಲಿ ಹಿಂದೂವಲ್ಲಿಲ್ಲ, ಹಿಂದೂವಲ್ಲಿ ಏಕತೆಯಿಲ್ಲ. ಹೆಚ್ಚುತ್ತಿರುವ ಮುಸ್ಲಿಂ ಭಯೋತ್ಪಾದನೆಯ ಬಗ್ಗೆ ಅರಿವಿಲ್ಲ. ಹೆಚ್ಚುತ್ತಿರುವ ಅವರ ಜನಸಂಖ್ಯೆಯ ಬಗ್ಗೆಯೂ ಎಚ್ಚರವಿಲ್ಲ. ಅವರ ತುಷ್ಟೀಕರಣದ ದುರಂತ ಫಲದ ಬಗ್ಗೆ ಯಾವ ಭಯವೂ ಇಲ್ಲ. ಅನಾಚಾರ, ಭ್ರಷ್ಟಾಚಾರ ಯಾವ ಪ್ರಮಾಣದಲ್ಲಿ ಬೇಕಾದರೂ ಆಗಲಿ. ನಮಗೆ ತೊಂದರೆಯಾಗದಿದ್ದರೆ ಸಾಕು, ನಮಗೆ ಫ್ರೀ ಆಗಿ ಸರ್ಕಾರದ ಸವಲತ್ತುಗಳು ಸಿಕ್ಕರೆ ಸಾಕು ಎಂಬ ಹಿಂದೂವಿನ ಮನಃಸ್ಥಿತಿ, ಧೋರಣೆ ಮನೋಭಾವವೇ ಅವನನ್ನು ಅಥವಾ ಅಂಥದ್ದಕ್ಕೆ ಅವನ ಸೊಲ್ಲು ಏರಿತೆಂದರೆ ಅವನು ಟೆರರಿಸ್ಟ್ ಆಗಿಬಿಡುತ್ತಾನೆ! ದುಷ್ಟ ರಾಜಕಾರಣದ ದುರಂತದ ಫಲವಿದು! ದುರಂತದ ಮುನ್ಸೂಚನೆಯಿದು. ಮುಸ್ಲಿಂ ತುಷ್ಟೀಕರಣದ ಪರಿಣಾಮಗಳು ಇನ್ಮುಂದೆ ಮುಂದೆ ಘೋರವಾಗೇ ಇರುತ್ತದೆ ಎನಿಸಲು ಸುರುವಾಗಿಬಿಟ್ಟಿದೆ. ಮುಸ್ಲಿಂ ಭಯೋತ್ಪಾದನೆ ರಕ್ತಬೀಜಾಸುರನಂತೆ! ಒಬ್ಬರು ಹೋದರೆ ಇನ್ನೊಬ್ಬ ಆ ಸ್ಥಾನ‌ ತುಂಬುವುದಕ್ಕೆ ಸಿದ್ಧ! ಒಬ್ಬನೇ ನಾಯಕ,‌ ಆದರೆ, ಹಿಂದೂಗಳಲ್ಲಿ too many leaders. ಮುಸ್ಲಿಂ ನಾಯಕತ್ವ ಸೋಲುವುದೇ ಇಲ್ಲ. ಒಬ್ಬ ಮುಸಲ್ಮಾನ ನಾಯಕ ಸುಧಾರಿಸಿ ದಾರಿಗೆ ಬಂದು ಸಮರಸತೆಯನ್ನು ಬೋಧಿಸಿದರೆ ಅವನನ್ನು ಇತರರು ಕೊಲ್ಲುತ್ತಾರೆ! ಆದರೂ ಅದು ಟೆರರಿಸಂ ಅಲ್ಲ! ಆದರೆ, ಎಲ್ಲೆಲ್ಲೂ ಕಾಣುವುದು ಹಿಂದೂ ಟೆರರಿಸಂ ಎಂಬ ಅಪ್ಪಟ ಸುಳ್ಳು ಮಾತ್ರ!  




- ಟಿ. ದೇವಿದಾಸ್


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top