ಭಾವಿ ಪರ್ಯಾಯಕ್ಕಾಗಿ ಶ್ರೀಶೀರೂರು ಮಠದ ಪೀಠಾಧಿಪತಿಗಳ ಬೆಂಗಳೂರು ಪ್ರವಾಸ

Upayuktha
0


ಬೆಂಗಳೂರು: 2026ರ ಜನವರಿಯಲ್ಲಿ ಉಡುಪಿಯಲ್ಲಿ ಪುತ್ತಿಗೆ ಮಠದ ಪರ್ಯಾಯ ಮುಗಿದು ಶೀರೂರು ಮಠದ ಪರ್ಯಾಯ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥರು ದೇಶದಲ್ಲೆಲ್ಲಾ ಪ್ರವಾಸ ಕೈಗೊಂಡು ಪರ್ಯಾಯಕ್ಕೆ ಶ್ರೀಕೃಷ್ಣನ ದರ್ಶನಕ್ಕೆ ಭಕ್ತಾದಿಗಳಿಗೆ ಆಹ್ವಾನ ನೀಡುತ್ತಲಿದ್ದಾರೆ. ಈ ಬಾರಿಯ ಪರ್ಯಾಯ ಶ್ರೀವೇದವರ್ಧನ ತೀರ್ಥರಿಗೆ ಮೊದಲ ಪರ್ಯಾಯವಾಗಿದೆ. ಇತ್ತೀಚಿಗೆ ಬೆಂಗಳೂರಿನ ವಿದ್ಯಾಮಾನ್ಯನಗರದಲ್ಲಿರುವ ಫಲಿಮಾರು ಮಠದ ಶ್ರೀಪ್ರಸನ್ನವೆಂಕೇಶ್ವರ ದೇವಾಲಯಕ್ಕೆ ಭೇಟಿ ನೀಡಿ 17ನೇ ತಾರೀಖಿನಂದು ತೊಟ್ಟಿಲ ಪೂಜೆ, ಭೂತರಾಜರ ಪೂಜೆಯನ್ನು ನೆರವೇರಿಸಿ ಅಲ್ಲಿ ನೆರದಿದ್ದ ಭಕ್ತಾದಿಗಳಿಗೆ ಅನುಗ್ರಹ ಸಂದೇಶವನ್ನು ನೀಡಿದರು. 


ರಾಮದೇವರ, ಕೃಷ್ಣನ ಹನುಮಂತನ, ಮಧ್ವಾಚಾರ್ಯರ ಮಹಿಮೆಯನ್ನು ಅವರ ಅನುಗ್ರಹವನ್ನು ಪಡೆಯುವ ಕುರಿತು ಪ್ರವಚನವನ್ನು ಮಾಡಿದರು.  ದೇವರ  ಅನುಗ್ರಹ ಪಡೆಯಲು ಪರಮಾತ್ಮನ ಕುರಿತು ಮಧ್ವಾಚಾರ್ಯರು ಹೇಳಿದ ಗ್ರಂಥಗಳನ್ನು ಓದಬೇಕು, ತಿಳಿಯಬೇಕು ಪಾರಾಯಣವನ್ನು ಮಾಡಬೇಕು ಎಂದು ಹೇಳಿದರು.


ಕಲಿಯುಗದಲ್ಲಿ ನಾಮ ಸ್ಮರಣೆಯ ಮಹತ್ವವನ್ನು ಹೇಳಿ ನಾಮ ಸ್ಮರಣೆಯನ್ನು ಮಾಡುವುದು ಹೇಗೆ ಪ್ರಮುಖವೋ ಅದರಂತೆ ನಿತ್ಯಕರ್ಮವೂ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ದಿನ ನಿತ್ಯದ ಕರ್ಮಗಳನ್ನು ಮಾಡಿ ಅದರೊಂದಿಗೆ ನಾಮಸ್ಮರಣೆಯನ್ನು ತಪ್ಪದೇ ಮಾಡಬೇಕು ಎಂದು ಹೇಳಿದರು. ಮುಂದಿನ ತಮ್ಮ ಪರ್ಯಾಯದ ಸಮಾರಂಭಕ್ಕೆ ಮತ್ತು ತಮ್ಮ ಪರ್ಯಾಯ ಸಮಯದಲ್ಲಿ ಉಡುಪಿಗೆ ಬಂದು ಶ್ರೀಕೃಷ್ಣನ ಪರಮಾನುಗ್ರಹಕ್ಕೆ ಪಾತ್ರರಾಗಲು ಕರೆ ನೀಡಿದರು.  ವಿದ್ಯಾಮಾನ್ಯನಗರ ಫಲಿಮಾರು ಮಠದ ಮ್ಯಾನೇಜರ್‌ ಆದ ಶ್ರೀ ಸೇತುಮಾಧವ ಅವರು ಎಲ್ಲ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಗುರುಗಳ ಅನುಗ್ರಹ ಸಂದೇಶದ ನಂತರ ಫಲಹಾರ ಪ್ರಸಾದವನ್ನು ನೀಡಿದರು. ವಿದ್ಯಾಮಾನ್ಯನಗರದಲ್ಲಿರುವ ನೆಮ್ಮದಿಧಾಮ ವೃದ್ಧಾಶ್ರಮ ಮತ್ತು ಹಲವು ಭಕ್ತರ ಮನೆಗೆ ಭೇಟಿ ನೀಡಿ ಶ್ರೀವೇದವರ್ಧನ ತೀರ್ಥರು ಆಶೀರ್ವದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top