ಬೆಂಗಳೂರು: ನಗರದ ಹೆಸರಾಂತ ಭರತನಾಟ್ಯ ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟಿನ ಗುರು ಡಾ|| ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ಮಲ್ಲತ್ತಳ್ಳಿಯ ಕಲಾಮಂದಿರದ ವೇದಿಕೆಯಲ್ಲಿ 2025ರ ಸಾಲಿನ "ನೃತ್ಯ ನೀರಾಜನ" ಕಿರಿಯರ ನೃತ್ಯ ಉತ್ಸವ-2 ಕಾರ್ಯಕ್ರಮ ಏರ್ಪಡಿಸಿತ್ತು.
ಡಾ|| ದರ್ಶಿನಿ ಮಂಜುನಾಥ್ ರವರ ಶಿಷ್ಯೆಯರಾದ ಕು|| ಅಮೂಲ್ಯ, ಕು|| ಧರಣಿ, ಕು|| ಮೌಲ್ಯ ಮತ್ತು ಕು|| ಶ್ರೀನಿಧಿ ಭರತನಾಟ್ಯ ಕಾರ್ಯಕ್ರಮ ನೀಡಿ ಪ್ರಸಂಶೆಗೆ ಪಾತ್ರರಾದರು.
ಮೊದಲಿಗೆ ವಿದುಷಿ ಭಾರತಿ ವೇಣುಗೋಪಾಲರವರ ರಚನೆಯ ಹಂಸಧ್ವನಿ ರಾಗದ "ಪುಷ್ಪಾಂಜಲಿ" ಇಂದ ಕಾರ್ಯಕ್ರಮ ಪ್ರಾರಂಭವಾಯಿತು. ಇದರೊಂದಿಗೆ ಆದಿ ಶಂಕರಾಚಾರ್ಯರ ವಿರಚಿತ ನಿರ್ಮಾಣ ಶತಕದ "ಅಜಂ ನಿರ್ವಿಕಲ್ಪಂ" ಶ್ಲೋಕ ನರ್ತಿಸಿದರು ಕಲಾವಿದೆಯರು. ಮುಂದೆ ಸಾಂಪ್ರದಾಯಿಕ ಚತುರಶ್ರ ಅಲರಿಪು, ಕಲ್ಯಾಣಿ ಜತಿಸ್ವರ ನರ್ತಿಸಿದರು. ಏಕವ್ಯಕ್ತಿ ಪ್ರದರ್ಶನದಲ್ಲಿ ಕು|| ಧರಿಣಿ- "ವಂದಿಸುವುದಾದಿಯಲಿ ಗಣನಾಥನ" ದೇವರನಾಮದಲ್ಲಿ ಆತ್ಮಲಿಂಗ ಕಥಾ ಪ್ರಸಂಗ ನರ್ತಿಸಿದಳು. ಕು|| ಮೌಲ್ಯ- "ಹರಿನಾರಾಯಣ"ದೇವರನಾಮದಲ್ಲಿ ಮನೋಹರವಾಗಿ ನಾರಸಿಂಹ ಅವತಾರ ಪ್ರದರ್ಶಿಸಿದಳು. ಕು|| ಶ್ರೀನಿಧಿ- ಮುತ್ತಯ್ಯ ಭಾಗವತರ ವಿರಚಿತ "ಸಾರಸಮುಖಿ"ಯಲ್ಲಿ ಚಾಮುಂಡೇಶ್ವರಿಯನ್ನು ಅದ್ಬುತವಾಗಿ ತೋರಿದಳು. ಕು|| ಅಮೂಲ್ಯ-"ಕೃಷ್ಣ ಬಾರೋ ರಂಗ ಬಾರೋ" ಎಂಬ ದೇವರನಾಮದಲ್ಲಿ ಕೃಷ್ಣನ ತುಂಟಾಟಕ್ಕೆ ತಾಯಿ ವಾತ್ಸಲ್ಯವನ್ನು ಸುಂದರವಾಗಿ ನರ್ತಿಸಿದರು.
ರಾಜ್ಯೋತ್ಸವದ ಸಂಭ್ರಮವನ್ನು ನಾಲ್ಕು ಕಲಾವಿದರು ಕರ್ನಾಟಕದ ಮೊದಲನೆಯ ಆಧುನಿಕ ಕರ್ನಾಟಕ ನಾಟಕ ಪಿತಾಮಹ ಎಂದು ಕರೆಸಿಕೊಳ್ಳುವ ಶಾಂತ ಕವಿ ವಿರಚಿತ "ರಕ್ಷಿಸು ಕರ್ನಾಟಕ ದೇವಿ ಮನೋಹರವಾಗಿ ನರ್ತಿಸಿದರು. ಕೊನೆಯಲ್ಲಿ "ಬೃಂದಾವನಿ ತಿಲ್ಲಾನ" ಹಾಗೂ ಪಂಚಭೂತಗಳನ್ನು ವಂದಿಸುವ "ಭೂಮಿ ಮಂಗಳಂ"ದೊಂದಿಗೆ ಕಾರ್ಯಕ್ರಮ ಸಂಪೂರ್ಣಗೊಳಿಸಿ ನೆರೆದಿದ್ದ ನೂರಾರು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಗುರು. ಡಾ|| ದರ್ಶಿನಿ ಮಂಜುನಾಥ್ ರವರು ಎಲ್ಲಾ ನೃತ್ಯ ಸಂಯೋಜನೆಗೆ ಮೆಚ್ಚುಗೆ ವ್ಯಕ್ತವಾಯಿತು. ಒಟ್ಟಿನಲ್ಲಿ ನೃತ್ಯ ನೀರಾಜನ ಯಶಸ್ವಿ ಪ್ರದರ್ಶನ ಕಂಡಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




