ಉಡುಪಿ: ಮಲ್ಪೆ ಕಲ್ಮಾಡಿ ಆರೋಗ್ಯ ಮಾತೆ ಚರ್ಚ್ ಆರೋಗ್ಯ ಆಯೋಗ ಮಿಷನ್ ಆಸ್ಪತ್ರೆ ಉಡುಪಿ ಇದರ ಆಶ್ರಯದಲ್ಲಿ ಚರ್ಚಿನ ಆವರಣದಲ್ಲಿ ಭಾನುವಾರ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಚರ್ಚಿನ ಧರ್ಮ ಗುರು ಚಾಲ್ಸ್ ಸಲ್ದಾನ ಶುಭ ಹಾರೈಸಿದರು.
ಧರ್ಮ ಪಾಲನಾ ಸಮಿತಿಯ ಕಾರ್ಯದರ್ಶಿ ಸ್ಟ್ಯಾನ್ಲಿ ಮ್ಯಾನೇಜಸ್, ಆರೋಗ್ಯ ಆಯೋಗದ ಸಂಚಾಲಕ ಲ್ಯಾನ್ಸಿ ಫರ್ನಾಂಡಿಸ್, ಲೂಯಿಸ್ ಲೋಬೋ ಮೂಳೆ ತಜ್ಞರಾದ ಡಾ. ಅರ್ಜುನ್ ಬಳ್ಳಾಲ್ ಸ್ತ್ರೀರೋಗ ತಜ್ಞರಾದ ಡಾ.ಅಕ್ಷತಾ ರಾವ್, ಡಾ. ವೈಭವ್, ನೇತೃ ತಜ್ಞರಾದ ಡಾ. ಅಭಿನವ್ ಅಶೋಕ್, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮಾಜಿ ಅಧ್ಯಕ್ಷರಾದ ಮಧುಸೂದನ್ ಹೇರೂರು, ಸುಂದರ ಪೂಜಾರಿ ಮೂಡುಕುಕ್ಕುಡೆ, ರೋಹಿ ರತ್ನಾಕರ್, ವೈದ್ಯಕೀಯ ಪ್ರತಿನಿಧಿ ಸಂಘದ ಪ್ರಸನ್ನ ಕಾರಂತ್, ರಾಘವೇಂದ್ರ ಕರ್ವಾಲು ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


