ಉಡುಪಿ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನ, ಜಿಎಸ್ಬಿ ಯುವಕ ಮಂಡಳಿ ಆಯೋಜನೆ
ಉಡುಪಿ: ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿ (ರಿ) ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ, ತೆಂಕುಪೇಟೆ ಉಡುಪಿ ವತಿಯಿಂದ ನವರಾತ್ರಿ ಮತ್ತು ಶಾರದಾ ಮಹೋತ್ಸವ 2025 ಪ್ರಯುಕ್ತ ಆಯೋಜಿಸಲಾದ ಚಿತ್ರಕಲೆ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ ಮತ್ತು ವೈವಿಧ್ಯಮಯ ಆಟಗಳ ಸ್ಪರ್ಧೆಯು ಶನಿವಾರ (ಸೆ. 20) ಪ್ರಾರಂಭಗೊಂಡಿತು.
ಸಮಾಜದ ಮಕ್ಕಳಲ್ಲಿ ಅಡಗಿರುವ ಬಹುಮುಖ ಸುಪ್ತಪ್ರತಿಭೆಯನ್ನು ಅನಾವರಣ ಮಾಡುವ ವೇದಿಕೆಯಾಗಿ ಹಲವಾರು ಮಕ್ಕಳು ಹರುಷದಿಂದ ಪಾಲ್ಗೊಂಡು ಸಂಭ್ರಮ ಸಡಗರದ ವಾತಾವರಣಕ್ಕೆ ಸಾಕ್ಷಿಯಾದರು. ನಾಳೆಯೂ ಈ ಸ್ಫರ್ಧೆಗಳು ಮುಂದುವರಿಯಲಿವೆ.
ವರದಿ: ದೀಪಾ ದೀಪಕ್ ಶೆಣೈ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


