ಬೆಂಗಳೂರು: ವಿಶ್ವ ವಿಖ್ಯಾತ ಪುಣ್ಯಕ್ಷೇತ್ರ ತಿರುಮಲದಲ್ಲಿ ನಡೆಯುತ್ತಿರುವ ವೆಂಕಟೇಶ್ವರ ಸ್ವಾಮಿಯವರ ನವರಾತ್ರಿ ಬ್ರಹ್ಮೋತ್ಸವದ ಅಂಗವಾಗಿ ಸಿಂಹ ವಾಹನ ಉತ್ಸವದಂದು ಬೆಂಗಳೂರಿನ ಅಧ್ಯಾತ್ಮ ಚಿಂತಕಿ ಡಾ. ಲೀಲಾ ಬಸಬರಾಜುರವರ ಅನುವಾದಿತ ಕೃತಿ ಆನಂದ ನಿಲಯ ಲೋಕಾರ್ಪಣೆಗೊಂಡಿತು.
ಟಿಟಿಡಿ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಘಲ್, ಟಿಟಿಡಿ ಆಡಳಿತ ಆಡಳಿತ ಸದಸ್ಯರು ಮತ್ತು ಟಿಟಿಡಿ ಪ್ರಕಟನ ಶಾಖೆಯ ವಿಶೇಷ ಅಧಿಕಾರಿ ಡಾ ವಿಭೀಷಣ ಶರ್ಮ ಸಂಪಾದಕ ಡಾ ನರಸಿಂಹಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ರಂಗಭೂಮಿ ಹಿರಿತೆರೆ ಕಿರುತೆರೆಗಳಲ್ಲಿ ಸಕ್ರಿಯರಾದ ಶ್ರೀಮತಿ ಲೀಲಾ ಬಸವರಾಜು ಅಧ್ಯಾತ್ಮ ಚಿಂತಕಿ, ಲೇಖಕಿಯಾಗಿ ಹಲವು ಕೃತಿಗಳನ್ನು ರಚಿಸಿರುತ್ತಾರೆ. ಶ್ರೀ ವೆಂಕಟೇಶ್ವರನ ದಿವ್ಯ ಲೀಲೆಗಳ ಆನಂದನಿಲಯ ಕೃತಿಯನ್ನು ತೆಲುಗು ನಿಂದ ಕನ್ನಡಕ್ಕೆ ಅನುವಾದಿಸಿ ಧಾರ್ಮಿಕ ಸಾಹಿತ್ಯಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ