ಬೆಂಗಳೂರು: ಶ್ರೀ ಸರ್ಕಲ್ ಮಾರಮ್ಮ ದೇವಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ "ನವರಾತ್ರಿ ವೈಭವ" ಕಾರ್ಯಕ್ರಮ ಆಯೋಜಿಸಿದ್ದು, ಸಮಾರಂಭದ ಎಲ್ಲಾ ದಿನಗಳಲ್ಲೂ ದೇವಿಗೆ ವಿಶೇಷ ಅಲಂಕಾರ, ಮಧ್ಯಾಹ್ನ 1-30ಕ್ಕೆ ಸಾಮೂಹಿಕ ಲಲಿತ ಸಹಸ್ರನಾಮ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6-30ಕ್ಕೆ :
ಸೆಪ್ಟೆಂಬರ್ 23 : ಶೃಂಗಾರ ಲಹರಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ "ಹಾಡುಗಾರಿಕೆ". ನಿರ್ದೇಶನ : ವಾಣಿಶ್ರೀ ಸುಂದರೇಶ್,
ಸೆಪ್ಟೆಂಬರ್ 24 : ದೇವಸ್ಥಾನದ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ "ಭಕ್ತಿ ಗೀತೆಗಳ ಗಾಯನ". ನಿರ್ದೇಶನ : ಶ್ರೀದೇವಿ ಗರ್ತಿಕೆರೆ.
ಸೆಪ್ಟೆಂಬರ್ 25 : ಭವಾನಿ ಎಂ. ರಾವ್ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ".
ಸೆಪ್ಟೆಂಬರ್ 26 : ಚಾಂದನಿ ಗರ್ತಿಗರೆ ಮತ್ತು ಸಂಗಡಿಗರಿಂದ "ಸಂಗೀತ ಸಂಭ್ರಮ".
ಸೆಪ್ಟೆಂಬರ್ 27 : ಶಿವಲೀಲಾ ಸಂಗೀತ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ "ನವದುರ್ಗೆ ವೈಭವ" ನೃತ್ಯ ರೂಪಕ.
ಸೆಪ್ಟೆಂಬರ್ 28 : ಲಲಿತ ಕಲಾ ಕೇಂದ್ರದ ಮಕ್ಕಳಿಂದ "ಭರತನಾಟ್ಯ", ನಿರ್ದೇಶನ : ರೂಪಾ ಹೇಮಂತ್.
ಸೆಪ್ಟೆಂಬರ್ 29 : ಕು|| ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ "ಸ್ಯಾಕ್ಸೋಫೋನ್ ವಾದನ".
ಸೆಪ್ಟೆಂಬರ್ 30 : ಕಿಶೋರ್ ಕುಲಕರ್ಣಿ ಮತ್ತು ತಂಡದವರಿಂದ "ಸೀತಾ ಕಲ್ಯಾಣ" ಹರಿಕಥೆ.
ಅಕ್ಟೋಬರ್ 1 : ಜಪಮಾಲಾ ಸ್ವರ ತಂಡದವರಿಂದ "ಭಜನಾಮೃತ", ನಿರ್ದೇಶನ : ರಾಧಾ.
ಅಕ್ಟೋಬರ್ 2 : ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಗಣೇಶ ಮತ್ತು ಅಮ್ಮನವರ "ಪಲ್ಲಕ್ಕಿ ಉತ್ಸವ".
ಸ್ಥಳ : ಶ್ರೀ ಸರ್ಕಲ್ ಮಾರಮ್ಮ ದೇವಿ ದೇವಸ್ಥಾನ, ಭಾರತ ವಿಜ್ಞಾನ ಮಂದಿರದ ಹತ್ತಿರ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


