ಬಡತನ, ಕನಸು, ದುಃಖ ದುಮ್ಮಾನ ಹತಾಶೆಯ ಸಮಗ್ರ ಚಿತ್ರಣ ಚೋಮನ ದುಡಿ: ಅಮರೇಶ್

Upayuktha
0


ಸುರತ್ಕಲ್‍:  ಗೋವಿಂದದಾಸ ಕಾಲೇಜಿನ ಗ್ರಂಥಾಲಯ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯುಕ್ತ ಆಶ್ರಯದಲ್ಲಿ ನಡೆಯುವ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮದಲ್ಲಿ ಪ್ರಥಮ ಬಿ.ಎ ವಿದ್ಯಾರ್ಥಿ ಅಮರೇಶ್‍ರವರು ಕಡಲ ತೀರದ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಕೆ. ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯನ್ನು ಪರಿಚಯಿಸುತ್ತಾ ಹೇಳಿದರು.


ಇಂದಿಗೂ ಸಹ ಕೆಲವೊಂದು ಹಳ್ಳಿಯಲ್ಲಿ  ಜಾತಿ ಪದ್ದತಿ ಜೀವಂತವಾಗಿದೆ ಎಂದು ಉದಾಹರಣೆಯ ಸಹಿತ ವಿಮರ್ಶಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ ಹರೀಶ್‍ ಆಚಾರ್ಯ ಪಿ. ಇವರು ಆಗಿನ ಕಾಲದಲ್ಲಿದ್ದ ಜಾತಿ ಪದ್ದತಿ,  ಜೀತ ಪದ್ದತಿಯ ಜ್ವಲಂತ ಉದಾಹರಣೆಗಳನ್ನು ನೀಡಿದರು. 


ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕ ಪ್ರೊ.ಧನ್ಯಕುಮಾರ್‌ ವೆಂಕಣ್ಣನವರ್, ಗ್ರಂಥಪಾಲಕಿ ಡಾ. ಸುಜಾತಾ.ಬಿ ಅಲ್ಲದೇ  ಉಪನ್ಯಾಸಕ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿ.ಎ ವಿದ್ಯಾರ್ಥಿನಿ ಕೌಶಿತಾ ಕಾರ್ಯಕ್ರಮವನ್ನು  ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಹರೀಶ್‍ ಆಚಾರ್ಯ ಪಿ, ವಿದ್ಯಾರ್ಥಿಗೆ ಸ್ಮರಣಿಕೆ ನೀಡಿ ಗೌರವಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top