ಶ್ರೀನಿವಾಸ ವಿಶ್ವವಿದ್ಯಾಲಯ ಸಾಂಸ್ಕೃತಿಕೋತ್ಸವ: ಓಣಾಷ್ಟಮಿ– 2025

Chandrashekhara Kulamarva
0


ಮಂಗಳೂರು: ಮಂಗಳೂರು ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ನಗರ ಕ್ಯಾಂಪಸ್‌ ಆಗಸ್ಟ್ 20, 2025ರಂದು ಬಣ್ಣ ಹಾಗೂ ಸಂಭ್ರಮದಿಂದ ಕಂಗೊಳಿಸಿತು. ಇನ್‌ಸ್ಟಿಟ್ಯೂಟ್‌ ಆಫ್‌ ಹೋಟೆಲ್ ಮ್ಯಾನೇಜ್ಮೆಂಟ್ ಆಂಡ್‌ ಟೂರಿಸಂ, ಡಿಪಾರ್ಟ್‌ಮೆಂಟ್‌ ಆಫ್‌ ಇಂಟೀರಿಯರ್ ಡಿಸೈನ್, ಡಿಪಾರ್ಟ್‌ಮೆಂಟ್‌ ಆಫ್‌ ಅನಿಮೇಷನ್, ಡಿಪಾರ್ಟ್‌ಮೆಂಟ್‌ ಆಫ್‌ ಮಾಸ್ ಕಮ್ಯುನಿಕೇಶನ್ ಆಂಡ್‌ ಮೀಡಿಯಾ ಸ್ಟಡೀಸ್ ಜಂಟಿಯಾಗಿ ಆಯೋಜಿಸಿದ್ದ ಈ ಸಾಂಸ್ಕೃತಿಕ ಉತ್ಸವವು ಶ್ರೀನಿವಾಸ ಟೈಗರ್ಸ್ ತಂಡದ 11ನೇ ವರ್ಷ ಸಂಭ್ರಮದಿಂದ ಆಚರಿಸಿತು ಮತ್ತು ವಿಶ್ವವಿದ್ಯಾಲಯದ ಸಾಂಸ್ಕೃತಿಕ ಶಕ್ತಿಯನ್ನು ಪರಿಚಯಿಸಿತು.


ಈ ಉತ್ಸವದ ಪ್ರಮುಖ ಆಕರ್ಷಣೆ ಎಂದರೆ ಶ್ರೀನಿವಾಸ ಟೈಗರ್ಸ್ ತಂಡದ 11ನೇ ವಾರ್ಷಿಕೋತ್ಸವ ಆಚರಣೆ. ಹಾಜರಾದವರಿಗೆ ಕೇರಳದ ಪರಂಪರಾತ್ಮಕ ನೃತ್ಯ ರೂಪವಾದ ತಿರುವಾದಿರ ನೃತ್ಯದ ಅದ್ಭುತ ಪ್ರದರ್ಶನ ಮನಮೋಹಕ ಅನುಭವ ನೀಡಿತು. ಇದು ದಿನದ ಸಂಭ್ರಮಕ್ಕೆ ಇನ್ನಷ್ಟು ಸಾಂಸ್ಕೃತಿಕ ಮೆರುಗು ನೀಡಿತು.


ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಪ್ರವಾಸೋದ್ಯಮ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿದ್ದ ಸವಿಯಾದ ವಿವಿಧ ಆಹಾರ ಪದಾರ್ಥಗಳು ಉತ್ಸವಕ್ಕೆ ಮತ್ತೊಂದು ವಿಶೇಷ ಸುವಾಸನೆ ನೀಡಿದವು. ರುಚಿಕರವಾದ ಸ್ಟಾರ್ಟರ್‌ಗಳಿಂದ ಹಿಡಿದು ವೈವಿಧ್ಯಮಯ ಮುಖ್ಯಾಹಾರ ಮತ್ತು ಸಿಹಿತಿಂಡಿಗಳವರೆಗೆ ಸವಿದವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಪಾಕಶಾಲಾ ಕೌಶಲ್ಯವು ಹಸಿವು ತಣಿಸುವುದಷ್ಟೇ ಅಲ್ಲ, ಉತ್ಸವದ ವಾತಾವರಣಕ್ಕೂ ಆಕರ್ಷಕತೆಯನ್ನು ನೀಡಿತು.




ಈ ಕಾರ್ಯಕ್ರಮವನ್ನು ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್ ಹಾಗೂ ಗೌರವಾನ್ವಿತ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೇಸರಿ ಫ್ರೆಂಡ್ಸ್‌ ಸರ್ಕಲ್‌ ಸ್ಥಾಪಕಾಧ್ಯಕ್ಷ ಹಾಗೂ ಹುಲಿ ಕುಣಿತಕ್ಕೆ ಪ್ರಸಿದ್ಧರಾಗಿರುವಂತಹ ಕಮಲಾಕ್ಷ ಬಜಿಲಕೇರಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಹಲವು ಗಣ್ಯ ಅತಿಥಿಗಳು ಹಾಜರಿದ್ದರು.


ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಪ್ರವಾಸೋದ್ಯಮ ಸಂಸ್ಥೆಯ ಡೀನ್ ಪ್ರೊ. ಪ್ರಶಾಂತ್ ಪ್ರಭು, ಮ್ಯಾನೇಜ್ಮೆಂಟ್ ಮತ್ತು ಕಾಮರ್ಸ್ ಇನ್ಸ್ಟಿಟ್ಯೂಟ್‌ನ ಡೀನ್ ಡಾ. ವೆಂಕಟೇಶ್ ಅಮೀನ್, ಫಿಸಿಯೋಥೆರಪಿ ಇನ್ಸ್ಟಿಟ್ಯೂಟ್‌ನ ಡೀನ್ ಡಾ. ತೃಷಾಲಾ ನೊರೋನ್ಹಾ, ಎಜುಕೇಶನ್ ಇನ್ಸ್ಟಿಟ್ಯೂಟ್‌ನ ಡೀನ್ ಡಾ. ಪದ್ಮನಾಭ ಸಿ.ಎಚ್., ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫರ್ಮೇಷನ್ ಸೈನ್ಸ್ ಇನ್ಸ್ಟಿಟ್ಯೂಟ್‌ನ ಡೀನ್ ಡಾ. ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಲಿಷಾ ಸ್ವಾಗತಿಸಿ, ಪ್ರಸಿಲ್ಲಾ ವಂದಿಸಿದರು. ವಿದ್ಯಾರ್ಥಿಗಳಾದ ಮೊಹಮ್ಮದ್ ಇಸ್ಮಾಯಿಲ್ ಮತ್ತು ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.


إرسال تعليق

0 تعليقات
إرسال تعليق (0)
To Top