ಕಾಪು ಸ.ಪ್ರ.ದರ್ಜೆ ಕಾಲೇಜಿನಲ್ಲಿ ರಾಣಿ ಅಬ್ಬಕ್ಕ @500 ಪ್ರೇರಣಾದಾಯಿ ಉಪನ್ಯಾಸ

Upayuktha
0


ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪುವಿನ ಮಹಿಳಾ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿಭಾಗದ ಸಹಭಾಗಿತ್ವದಲ್ಲಿ ರಾಣಿ ಅಬ್ಬಕ್ಕ @500: ಪ್ರೇರಣಾದಾಯಿ ಉಪನ್ಯಾಸಗಳ ಸರಣಿ ಎಸಳು-22 “ಎಂಬ ಕಾರ್ಯಕ್ರಮ ಶುಕ್ರವಾರ (ಆ.22) ಆಚರಿಸಲಾಯಿತು.


ಮುಖ್ಯ ಅತಿಥಿಯಾಗಿ ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್‌ ಮೆಂಡನ್‌ ಅವರು ವಹಿಸಿದರು. ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉಧ್ಘಾಟಿಸಿ “ರಾಣಿ ಅಬ್ಬಕ್ಕರವರ ಸಾಧನೆಯ ಬಗ್ಗೆ ಮತ್ತು ಅವರಲ್ಲಿರುವ ಧ್ಯೆರ್ಯವನ್ನು ಈಗಿನ ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಹೇಗೆ ಆಳವಡಿಸಿಕೊಳ್ಳಬೇಕು” ಎಂದು ಹೇಳಿದರು.


ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಗೋವಿಂದ ದಾಸ್‌ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಅಕ್ಷತಾ ಶೆಟ್ಟಿ ಅವರು “ರಾಣಿ ಅಬ್ಬಕ್ಕ  ಪೋರ್ಚುಗೀಸರ ಧಾಳಿಯನ್ನು ದ್ಯೆರ್ಯದಲ್ಲಿ ಎದುರಿಸಿ ಹೇಗೆ ಹಿಮ್ಮೆಟ್ಟಿಸಿದಳು ಹಾಗೂ 10 ವರ್ಷಗಳ ಕಾಲ ರಾಣಿ ಅಬ್ಬಕ್ಕನಿಗೆ ಹೆದರಿ ಪೋರ್ಚುಗೀಸರು ಉಳ್ಳಾಲದ ಕಡೆ ತಲೆಹಾಕಲಿಲ್ಲ ಒಬ್ಬ ಮಹಿಳೆಯಾಗಿ ವೀರ ವನಿತೆಯಾಗಿ, ಹೇಗೆ ಯುಧ್ದ ಮಾಡಿ ವಿದೇಶಿಯರನ್ನು ಹೊಡದೋಡಿಸಿದಳು ಎಂದು ಆಕೆಯ ಜೀವನ ಚರಿತ್ರೆಯನ್ನು ಸರಳವಾಗಿ ವಿವರಿಸಿದರು.


ಕಾಲೇಜಿನ ಪ್ರಾಂಶುಪಾಲ ಡಾ. ಗೋಪಾಲಕ್ರಷ್ಣ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕರಾದ ಮಹಿಳಾ ವೇದಿಕೆಯ ಸಂಘಟಕಿ  ಶ್ರೀಮತಿ ಯಶೋದಾ ಸ್ವಾಗತಿಸಿದರು. ಕೆಆರ್‌ ಎಂ ಎಸ್‌ ನ ಉಡುಪಿ ವಿಭಾಗದ  ಕಾಲೇಜಿನ ಪ್ರಾಂಶುಪಾಲ ಡಾ. ಗೋಪಾಲಕೃಷ್ಣ ಗಾಂವಕರ ಅಧ್ಯಕ್ಷತೆ ವಹಿಸಿದ್ದರು.


ಕೆಆರ್‌ ಎಂ ಎಸ್‌ ನ ಉಡುಪಿ ವಿಭಾಗದ ಸಂಘಟಕ ಯಶವಂತ್‌ ಕುದ್ರೋಳಿಯವರು KRMSS ಮಂಗಳೂರು ವಿಭಾಗದ ಬಗ್ಗೆ, ಅವರ ಅನೇಕ ವಿನೂತನ ಕಾರ್ಯಕ್ರಮದ ಬಗ್ಗೆ ತಿಳಿಸಿದರು.  ವಿದ್ಯಾರ್ಥಿನಿ ಜಾಹ್ನವಿ ಪ್ರಾರ್ಥಿಸಿದರು. ತೃತೀಯ ಬಿ.ಎ. ವಿದ್ಯಾರ್ಥೀನಿ ಮನೀಷಾ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ವೇದಿಕೆಯ ಮುಖ್ಯ ಕಾರ್ಯದರ್ಶಿ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಅನುಷಾ ವಂದಿಸಿದರು. ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ಉಪನ್ಯಾಸಕರು, ಶಿಕ್ಷಕೇತರ ಸಿಬ್ಬಂದಿಗಳು, ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top