ಲಿಟಿಲ್ ಮಾಸ್ಟರ್ಸ್ ಯೋಜನೆಗೆ ಆಯ್ಕೆ

Upayuktha
0


ಬದಿಯಡ್ಕ: ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕೇರಳ ಸರಕಾರ ರೂಪಿಸಿರುವ ಲಿಟಲ್ ಮಾಸ್ಟರ್ಸ್‌ ಯೋಜನೆಗೆ ಚಿಪ್ಪಾರಿನ ಹಿಂದೂ ಎ.ಯುಪಿ. ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಭವಿಷಾ ಎ. ಆಯ್ಕೆಯಾಗಿದ್ದಾಳೆ.


ಕೇರಳ ಸರಕಾರದ ಸಾರ್ವಜನಿಕ‌ ಶಿಕ್ಷಣ ಕ್ಷೇತ್ರದ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಗೊಳಿಸಲು ರೂಪಿಸಿದ ಸಮಗ್ರ ಗುಣಮಟ್ಟದ ಶಿಕ್ಷಣ ಯೋಜನೆ- 2025-26. ಈ ಯೋಜನೆಯ ಒಂದು ಉಪ ವಿಭಾಗವಾಗಿದೆ ಲಿಟಿಲ್ ಮಾಸ್ಟರ್ಸ್ ಯೋಜನೆ.


ಕಳೆದ ಶೈಕ್ಷಣಿಕ ವರ್ಷದ LSS ಪರಿಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಪ್ರತಿಭಾವಂತರಾದ, ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಪ್ರತೀ ಉಪಜಿಲ್ಲೆಯಿಂದ 10 ಜನ ವಿದ್ಯಾರ್ಥಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top