ದೃಶ್ಯ 1
ಐದು ವರ್ಷವೂ ನಾನೇ,
ಮತ್ತೈದು ನಾನೇ !
ತೆರವಾದರೇ ತಾನೇ ಬೇರೊಬ್ಬ ಪ್ರಶ್ನೆ?
'ಟಗರು' ಮೈಯುಜ್ಜಲಿಕೆ
ಮಾತ್ರ
ಬೇಕೊಂದು
'ಬಂಡೆ'
ಜಜ್ಜಿಕೊಳ ಲಿಕ್ಕಲ್ಲ
ಅದರ ಮಂಡೆ !
ದೃಶ್ಯ 2
ಏನೇ ಮಾಡಲಿ ಬಿಡಲಿ
'ಐ' ಕಮಾಂಡ್
ದೆಹಲಿ...
ಆಗಾಗ
ಕೇಳುವುದೇ ನಮ್ಮ ಚಾಳಿ.
ನಮ್ಮನಮ್ಮೊಳಗಿಲ್ಲ ಬಿರುಕು ಬಂಡಾಯ
ಕಟ್ಟಲಿಲ್ಲವೇ ಸೇರಿ
ದಳ ಇನ್.ಡಿ. ಯ.
ದೃಶ್ಯ 3
ಕುಟುಂಬ ಒಂದನೇ ನಂಬಿ
ಕುಂಟುತಿದೆ ಪಕ್ಷ.
ತಿಂದು ತೇಗಿದರೆಲ್ಲ
ಲಕ್ಷ ಲಕ್ಷ !
ಬಿಡುವುದುಂಟೇ
'ಯತ್ನ- ಆಳ' ತಲುಪದಲೇ?
ಕಾಣಿಸದೇ ಅಳಿಯನ
ಕುರುಡು ಬೆಳಗಾದರೆ !
ದೃಶ್ಯ 4
ತಾನೇ ಬಿದ್ದರೂ ಅಷ್ಟೇ,
ತಾಗಿ ಒಡೆದರೂ ಅಷ್ಟೇ,
'ಜೇಡಿ' ಮಣ್ಣಿನ ಮಡಕೆ
ಆದರೂ
ಕುತ್ತಿಲ್ಲ ಜೀವಕೆ.!
ಸದಾ ಆಳುವ ಹೆಬ್ಬಯಕೆ.
ಸುಟ್ಟ ಬೂದಿಯಲೇ ಎದ್ದು ಬರುವ
ಫೀನಿಕ್ಸ್ ಹಕ್ಕಿ ರೆಕ್ಕೆ..!
- ಡಾ. ಹೆಚ್. ಎಸ್ ಸುರೇಶ್
9448027400
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ