ಜುಲೈ 29 ; ಭಜನ - ಪ್ರವಚನ - ಸಂಕೀರ್ತನ

Upayuktha
0



ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಹೊಸಕೆರೆಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜುಲೈ 29 ರಿಂದ ಆಗಸ್ಟ್ 1ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :


ಭಜನಾ ಕಾರ್ಯಕ್ರಮ (ಸಂಜೆ 6 ರಿಂದ 7) : ಜುಲೈ 29- ಚಂದ್ರಿಕಾ ಭಜನಾ ಮಂಡಳಿ, ಜುಲೈ 30-ಶೃತಿ ಭಜನಾ ಮಂಡಳಿ, ಜುಲೈ 31-ಅಲಕನಂದ ಭಜನಾ ಮಂಡಳಿ. 


ಪ್ರವಚನ ಕಾರ್ಯಕ್ರಮ (ಪ್ರತಿದಿನ ಸಂಜೆ 7 ರಿಂದ 8) : ಜುಲೈ 29 ರಿಂದ 31ರ ವರೆಗೆ ಮ||ಶಾ||ಸಂ|| ಹೊಳವನಹಳ್ಳಿ ಶ್ರೀನಿವಾಸಾಚಾರ್ಯರಿಂದ "ಶ್ರೀ ಗುರುಸಾರ್ವಭೌಮರ ವೈಭವ" ವಿಷಯವಾಗಿ ಧಾರ್ಮಿಕ ಪ್ರವಚನ.


ಹರಿನಾಮ ಸಂಕೀರ್ತನೆ : ಆಗಸ್ಟ್ 1, ಶುಕ್ರವಾರ, ಸಂಜೆ 6-30 ರಿಂದ 8-00 ವಿದುಷಿ  ಅನುಷಾ ರಾಘವೇಂದ್ರ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ" ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top