ದಾರಿ ತಪ್ಪಿಸುವ ಜಾಹೀರಾತುಗಳಿಗೆ ಲಗಾಮು ಬೀಳಲಿ

Upayuktha
0


ಜಾಹೀರಾತು ಎನ್ನುವುದು ಇತ್ತೀಚಿನ ದಿನಗಳಲ್ಲಿ ಅತಿ ಸಾಮಾನ್ಯವಾಗಿದ್ದು, ಚಾಕೊಲೇಟ್‌ನಿಂದ ವಿಮಾನ ಯಾನದವರೆಗೆ ಯಾವುದೇ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸಿದ ಕೂಡಲೇ ಜಾಹಿರಾತಿನ ಮೂಲಕ ಪ್ರಚಾರ ಬಯಸುತ್ತವೆ. ಜನಪ್ರಿಯ ವ್ಯಕ್ತಿಗಳನ್ನು ತಮ್ಮ ಉತ್ಪನ್ನಗಳ ಜಾಹೀರಾತು ರೂಪದರ್ಶಿಯಾಗಿ ಹಾಗೂ ರಾಯಭಾರಿಯಾಗಿ ಮಾಡಿಕೊಳ್ಳುವ ಮೂಲಕ ಜನರನ್ನು ಸೆಳೆಯುವ ಪ್ರಯತ್ನವನ್ನು ಉತ್ಪಾದಕರು ಮಾಡುತ್ತಾ ಬಂದಿದ್ದಾರೆ. ಜನಪ್ರಿಯ ವ್ಯಕ್ತಿಗಳಿಗೆ ಅವರದೇ ಹಿಂಬಾಲಕರು ಇರುವುದರಿಂದ, ಉತ್ಪನ್ನಗಳ ಪ್ರಚಾರಕ್ಕೆ ಜನಪ್ರಿಯ ವ್ಯಕ್ತಿಗಳನ್ನು ಬಳಸಿಕೊಳ್ಳುವುದು ಸಾಮಾನ್ಯ. ಆದರೆ ಇದೀಗ ಉತ್ಪನ್ನಗಳ ಪ್ರಚಾರಕ್ಕೆ ಬೆಂಬಲ ನೀಡುವಾಗ ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ವರ್ತಿಸುವಂತೆ ಸೆಲೆಬ್ರಿಟಿಗಳಿಗೆ 'ಸುಪ್ರೀಂ' ಕೋರ್ಟ್ ಎಚ್ಚರಿಕೆ ನೀಡಿದೆ.


ಗ್ರಾಹಕ ಬಳಕೆಯ ಉತ್ಪನ್ನಗಳಿಗೆ ತಮ್ಮ ಅನುಮೋದನೆ ನೀಡುವಾಗ ಜನಪ್ರಿಯ ವ್ಯಕ್ತಿಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದಿರುವ ಸುಪ್ರೀಂ ಕೋರ್ಟು, ಜಾಹೀರಾತು ನೀಡುವವರು ಹಾಗೂ ಉತ್ಪನ್ನಗಳಿಗೆ ತಮ್ಮ ಅನುಮೋದನೆ ನೀಡುವವರು ತಪ್ಪುದಾರಿಗೆ ಎಳೆಯುವ ಜಾಹೀರಾತುಗಳ ವಿಚಾರದಲ್ಲಿ ಸಮಾನ ಹೊಣೆಗಾರಿಕೆ ಇರುತ್ತದೆ ಎಂದು ಎಚ್ಚರಿಸಿದೆ. ತಪ್ಪು ಸಂದೇಶ ನೀಡುವ ಜಾಹೀರಾತುಗಳಿಗೆ ಲಗಾಮು ಹಾಕುವ ಉದ್ದೇಶದಿಂದ ಜಾಹೀರಾತು ನೀಡುವ ಮೊದಲು ಕೇಬಲ್ ಟಿ.ವಿ. ನೆಟ್ವರ್ಕ್ ನಿಯಮ 1994ಕ್ಕೆ ಅನುಗುಣವಾಗಿ ಸ್ವಯಂ ಘೋಷಣೆ ಪಡೆದುಕೊಳ್ಳಲು ಸೂಚಿಸಲಾಗಿದೆ. ಜಾಹೀರಾತುಗಳು ನೈತಿಕತೆ, ಸಭ್ಯತೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಇರಬಾರದು ಎಂದು ತೀರ್ಪು ನೀಡಿದೆ.


ಕೆಲವು ದಿನಗಳ ಹಿಂದೆಯಷ್ಟೇ ಪತಂಜಲಿ ಆಯುರ್ವೇದ ಲಿಮಿಟೆಡ್ ಕಂಪನಿಯ ಜಾಹೀರಾತುಗಳ ಮೇಲೆ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಜಾಹೀರಾತು ಹಿಂಪಡೆದು ಬಳಕೆದಾರರ ಕ್ಷಮೆ ಕೇಳುವಂತೆ ಕೋರ್ಟ್ ಸೂಚಿಸಿತ್ತು. ಕೆಲವು ಸೌಂದರ್ಯ ವರ್ದಕ ಜಾಹೀರಾತುಗಳು ಕೂಡ ಜನರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿವೆ.


ಸೌಂದರ್ಯ ವರ್ದಕದ ಜಾಹೀರಾತುಗಳಲ್ಲಿ ವರ್ಣಬೇದ ಮಾಡುವುದರ ಜೊತೆಯಲ್ಲಿ ಅವುಗಳಲ್ಲಿ ಉಪಯೋಗಿಸುವ ರಾಸಾಯನಿಕಗಳ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂಬ ಗಂಭೀರ ಆರೋಪವಿದೆ. ಇನ್ನೂ ಬಾಲಿವುಡ್‌ನ ಕೆಲವು ಜನಪ್ರಿಯ ನಟರು ಹಣಕ್ಕಾಗಿ ಸಮಾಜದ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಕೆಲವು ಉತ್ಪನ್ನಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು, ಯುವ ಸಮುದಾಯಕ್ಕೆ ಮಾದರಿಯಾಗಬೇಕಿದ್ದವರೇ ಹಾದಿ ತಪ್ಪಿಸುವ ಕೆಲಸ ಮಾಡುತ್ತಿರುವುದು ದುರಂತವಾಗಿದೆ. ಭಾರತೀಯ ಯುವ ಸಮುದಾಯ ಕ್ರಿಕೆಟ್ ಆಟವನ್ನು ಆರಾಧಿಸುತ್ತಾ, ಕ್ರಿಕೆಟಿಗರನ್ನು ದೇವರಂತೆ ಕಾಣುತ್ತಿದ್ದರೆ, ಕ್ರಿಕೆಟಿಗರು ಮಾತ್ರ ರಮ್ಮಿ, ಡ್ರೀಮ್ ಲೆವೆನ್‌ನಂತಹ ಆನ್ಲೈನ್ ಜೂಜುಗಳ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಣ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಾಹೀರಾತುಗಳು ಉತ್ಪನ್ನ ಪ್ರಚಾರದ ಹೆಸರಿನಲ್ಲಿ ನೈತಿಕ ಎಲ್ಲೆ ಮೀರುತ್ತಿದ್ದು, ಸಮಾಜದ ಹಿತದೃಷ್ಟಿಯಿಂದ ಜಾಹೀರಾತು ಪ್ರಚಾರದ ಮೇಲೆ ಸರ್ಕಾರಗಳು ಗಮನಹರಿಸಬೇಕಾಗಿದೆ. 




- ನೈದಿಲೆ 

ಎಸ್ ಡಿ ಎಂ ಕಾಲೇಜು ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top