ಧಾರವಾಡ: ಸಂಸ್ಕೃತ ಭಾರತೀ (ಕರ್ನಾಟಕ ಉತ್ತರಮ್) ವತಿಯಿಂದ ಧಾರವಾಡದ ದಾನೇಶ್ವರಿ ನಗರದ ಅದ್ವೈತಿ ಪ್ರಬೋಧಕ ಸಂಘದ ಪಾಠಶಾಲೆಯಲ್ಲಿ ಮೂರು ದಿನದ ವಸತಿ ಸಹಿತ ಭಾಷಾ ಬೋಧನ ವರ್ಗವನ್ನು ಹಮ್ಮಿಕೊಳ್ಳಲಾಗಿತ್ತು. ವರ್ಗದಲ್ಲಿ ಉತ್ತರ ಕರ್ನಾಟಕದ 8 ಜಿಲ್ಲೆಗಳಿಂದ 38 ಶಿಕ್ಷಾರ್ಥಿಗಳು ಅತೀವ ಉತ್ಸಾಹದಿಂದ ಭಾಗವಹಿಸಿದ್ದರು. ಶಿಕ್ಷಕರು ಪ್ರಬಂಧಕರು, ಶಿಕ್ಷಾರ್ಥಿಗಳು ಸೇರಿ ವರ್ಗದಲ್ಲಿ ಸಂಪೂರ್ಣ ಸಂಸ್ಕೃತಮಯ ವಾತಾವರಣ ನಿರ್ಮಾಣಗೊಂಡಿತ್ತು. ವರ್ಗದಲ್ಲಿ ಸಂಸ್ಕೃತ ಸಂಭಾಷಣೆಯ ಪಾಠದ ಜೊತೆ ಕ್ರೀಡೆ, ವಾಗ್ವಿನೋದ, ಯೋಗ, ಪ್ರಾತಃಸ್ಮರಣೆ, ಭಜನೆ, ಗಣಕಾರ್ಯ, ಸಂಸ್ಕೃತದ ಮಹತ್ವದ ಪರಿಚಯ ಮುಂತಾದವುಗಳನ್ನು ಯೋಜಿಸಲಾಗಿತ್ತು.
ವರ್ಗದ ಉದ್ಘಾಟನೆಯನ್ನು ಅದ್ವೈತಿ ಪ್ರಬೋಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಗುರುನಾಥ ಇನಾಮದಾರ ರವರಿಂದ ನೆರವೇರಿಸಲಾಯಿತು. ವರ್ಗದಲ್ಲಿ ಸಂಸ್ಕೃತ ಭಾರತೀಯ ಹಿರಿಯ ಕಾರ್ಯಕರ್ತೆಯಾದ ಶ್ರೀಮತಿ ಸುಮಂಗಲಾ ದಾಂಡೇವಾಲೇ, ಧಾರವಾಡ ನಗರದ ಅಧ್ಯಕ್ಷರಾದ ಶ್ರೀ ಪ್ರವೀಣ ವೈದ್ಯ ಹಾಗೂ ಪ್ರಮುಖ ಕಾರ್ಯಕರ್ತರಾದ ಶ್ರೀಮತಿ ಕೃಷ್ಣವೇಣಿ ಹೆಗಡೆ, ಶ್ರೀ ಮುಕುಂದ ಜಠಾರ, ಶ್ರೀಮತಿ ವನಿತಾ ಭಟ್ಟ, ಶ್ರೀಮತಿ ಚೇತನಾ ವಸಂತ, ಶ್ರೀಮತಿ ರೇವತಿ ಮುಂತಾದವರು ಉಪಸ್ಥಿತರಿದ್ದರು.
ಸುಮಾರು 15ಕ್ಕೂ ಹೆಚ್ಚು ಜನ ಯುವಕ ಯುವತಿಯರು ವರ್ಗದಲ್ಲಿ ಭಾಗವಹಿಸಿದ್ದು ವಿಶೇಷತೆಯಾಗಿತ್ತು. ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಹಲವು ಪ್ರಮುಖರು ಸಹ ವರ್ಗದಲ್ಲಿ ಭಾಗವಹಿಸಿದ್ದರು. ಕೆಲವು ಯುವಕ ಯುವತಿಯರು ಸಂಸ್ಕೃತದ ಕಾರ್ಯಕ್ಕಾಗಿ ತಮ್ಮ ವಿದ್ಯಾಭ್ಯಾಸದ ನಂತರ ಪೂರ್ಣ ಪ್ರಮಾಣದ ಸ್ವಯಂಸೇವಕರಾಗಿ ಒಂದಿಷ್ಟು ವರ್ಷಗಳ ಕಾಲ ಸಂಸ್ಕೃತದ ಸೇವೆ ಸಲ್ಲಿಸಲು ನಿಶ್ಚಯಿಸಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಧುನಿಕ ವಿಜ್ಞಾನದ ಜೊತೆ ಸಂಸ್ಕೃತ, ಜ್ಯೋತಿಷ್ಯ, ಆಯುರ್ವೇದ, ಧಾರ್ಮಿಕ ವಿಚಾರಗಳಲ್ಲಿ ಪರಿಣಿತರಾದ ಪ್ರೊ. ವಿದ್ವಾನ್ ನವೀನ ಪುರಾಣಿಕ ಶಾಸ್ತ್ರಿರವರು ಭಾಗವಹಿಸಿ ಶಿಕ್ಷಾರ್ಥಿಗಳಿಗೆ ಆಧುನಿಕ ಯುಗದಲ್ಲಿ ಸಂಸ್ಕೃತದ ಮಹತ್ವವನ್ನು ತಿಳಿಸಿಕೊಟ್ಟರು. ವರ್ಗವನ್ನು ಯಶಸ್ವಿಯಾಗಿ ನಡೆಸಲು ಧಾರವಾಡದ ಖ್ಯಾತ ಉದ್ಯಮಿಗಳು ಹಾಗೂ ಅದ್ವೈತಿ ಪ್ರಬೋಧಕ ಸಂಘದ ಅಧ್ಯಕ್ಷ ರವಿ ದೇಶಪಾಂಡೆಯವರು ನೀಡಿದ ಸಹಕಾರ ಸ್ಮರಣೀಯವಾಗಿದೆ.
ಹಲವು ವರ್ಷಗಳ ನಂತರ ಧಾರವಾಡದಲ್ಲಿ ಈ ರೀತಿಯ ವಸತಿ ಸಹಿತ ವರ್ಗ ನಡೆದದ್ದು ಸಂಸ್ಕೃತದ ಪ್ರಸಾರ ಮತ್ತು ಪ್ರಚಾರದ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸಂಸ್ಕೃತಭಾರತಿ ವತಿಯಿಂದ ನಡೆಸಲಾಗುವ ಈ ರೀತಿಯ ಮುಂದಿನ ವರ್ಗಗಳ ಮಾಹಿತಿಗಾಗಿ 9481486255 ಸಂಖ್ಯೆಗೆ ಸಂಪರ್ಕಿಸಬಹುದು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ