ದೇಹದ ನಿಯಂತ್ರಣಕ್ಕೆ ಯೋಗಾಭ್ಯಾಸ ಅಗತ್ಯ : ಮಾಲತಿ ಡಿ.

Upayuktha
0



ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡಿಸುತ್ತಿರುವ  ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಶನಿವಾರ ಅಂತರಾಷ್ಟ್ರೀಯ  ಯೋಗ ದಿನಾಚರಣೆಯನ್ನು ಆಚರಿಸಲಾಯಿತು.


ಶಾಲಾ ಪ್ರಾಂಶುಪಾಲಲೆ ಮಾಲತಿ ಡಿ. ಮಾತನಾಡಿ ನಮ್ಮ ದೇಹ  ನಮ್ಮ ನಿಯಂತ್ರಣದಲ್ಲಿ ಇರಬೇಕು. ಆಗ ಮಾತ್ರ ನಾವು ಮನಸನ್ನು ನಿಗ್ರಹಿಸಲು ಸಾಧ್ಯ. ಹೀಗೆ ನಮ್ಮ ದೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಾಧಿತವಾಗುವುದು ಯೋಗದಿಂದ. ನಾವು ಆರೋಗ್ಯವಂತ  ಜೀವನವನ್ನು ನಡೆಸಬೇಕಾದರೆ ಪ್ರತಿದಿನ ಯೋಗದ ಅವಶ್ಯಕತೆ ಇದೆ ಎಂದು ತಿಳಿಸಿದರು.


ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಆರ್ಯ ಮೋಹನ್, ಯೋಗದ ಪ್ರಾಮುಖ್ಯತೆ ಕುರಿತು ತಿಳಿಸಿದರೆ, ಪ್ರೇಮ್ ಅವರು ಸೂರ್ಯ ನಮಸ್ಕಾರದ ಉಪಯೋಗದ ಕುರಿತು ತಿಳಿಸಿದರು. ವಿದ್ಯಾರ್ಥಿಗಳಾದ ಸನ್ಮಯ್, ಆದಿ ಶ್ರೀ, ತನ್ವಿ ನಾಗೇಂದ್ರ ,ಅನುಶ್ರೀ ಇವರು ಯೋಗ ಶ್ಲೋಕವನ್ನು ಹಾಡಿದರು. ನಂತರ ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗವನ್ನು ಪ್ರಸ್ತುತಗೊಳಿಸಿದರು. 


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾಥಿ ದೀಪಾಂಶ್ ಸ್ವಾಗತಿಸಿ, ನಿರೂಪಿಸಿದರು.





إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top