ಮಣಿಪಾಲದ ದೀಪೇಶ್ ದೀಪಕ್ ಶೆಣೈ, ಟಿ.ಎ ಪೈ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ
ಉಡುಪಿ: ಉಡುಪಿಯ ಟಿ.ಎ ಪೈ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ಸಕ್ರಿಯ ಸದಸ್ಯ ದೀಪೇಶ್ ದೀಪಕ್ ಶೆಣೈ 2025ರ ಜೂನ್ 8ರಂದು ಮಧ್ಯಾಹ್ನ, ಮನೆಗೆ ನುಗ್ಗಿ ಬಂದ ಹಾವನ್ನು ಸ್ವತಃ ಹಿಡಿದು ವನ್ಯಜೀವಿ ಸಂರಕ್ಷಕರಿಗೆ ಒಪ್ಪಿಸವ ಮೂಲಕ ಧೈರ್ಯ-ಸಾಹಸ ಮೆರೆದಿದ್ದಾನೆ. ಆ ಮೂಲಕ ಮನೆಯ ಹಿರಿಯರನ್ನು, ಮಕ್ಕಳನ್ನು ಮತ್ತು ಕುಟುಂಬದ ಸದಸ್ಯರನ್ನು ಭೀತಿಯ ವಾತಾವರಣದಿಂದ ಪಾರು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ತರಬೇತಿಯ ಬಲದ ಧೈರ್ಯದಿಂದ ಮುಂದಾಗಿ, “ಸೇವೆ” ಮತ್ತು “ಸಿದ್ಧರಾಗಿರಿ” ಎಂಬ ಮೌಲ್ಯಗಳಿಗೆ ಪೂರಕವಾಗಿ ಈ ಕಾರ್ಯ ಮಾಡಿದ್ದಾನೆ. ತನ್ನ ಶಾಲೆಯ ಪರಿಸರ ವಿಜ್ಞಾನ ಪಾಠಗಳು ಮತ್ತು ಪ್ರಾಯೋಗಿಕ ಜೀವಶಾಸ್ತ್ರದ ತರಗತಿಗಳಲ್ಲಿ ಕಲಿತ ಪ್ರಾದೇಶಿಕ ಹಾವುಗಳ ಲಕ್ಷಣಗಳ ಪಠ್ಯದ ಅಗತ್ಯ ಜ್ಞಾನ, ತುರ್ತು ವನ್ಯಜೀವಿ ರಕ್ಷಣೆಯ ಕ್ಷೇತ್ರದಲ್ಲಿ ತಾನು ಕೈಗೊಂಡ ಕಾರ್ಯಚಟುವಟಿಕೆ, ಚಿಕ್ಕಂದಿನಿಂದಲೇ ಕುಟುಂಬದವರಿಂದ ಸಿಕ್ಕಿದ ಕಷ್ಟಕಾಲವನ್ನು ಧೈರ್ಯ ಸಾಹಸದಿಂದ ಹೇಗೆ ನಿಭಾಯಿಸುವ ಕುರಿತಾಗಿ ಪಡೆದ ಮಾರ್ಗದರ್ಶನಗಳು ಈತನಿಗೆ ಪ್ರೇರಣೆಯಾಗಿವೆ.
ಸ್ಥಳೀಯ ವನ್ಯಜೀವಿ ಪ್ರಿಯರ ಸಲಹೆ ಪಡೆದಾಗ ಅದು ಪಟ್ಟೆ ಬೆನ್ನೇಣು ಹಾವು 'Buff-striped Keelback' ಎಂಬ ವಿಷರಹಿತ ಜಾತಿ ಪ್ರಭೇದಕ್ಕೆ ಸೇರಿದ್ದೆಂದು ದೃಢಪಟ್ಟಿತು. ಈ ಮೂಲಕ ಯಾರಿಗೂ ಹಾನಿಯಾಗದೆ, ಆ ಹಾವನ್ನು ತನ್ನ ಸ್ವಾಭಾವಿಕ ನೈಸರ್ಗಿಕ ವಾಸಸ್ಥಳಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
ಸಹಾಯಕ್ಕೆ ಸಂಪರ್ಕಿಸಿದರೂ ಅಧಿಕಾರಿಗಳು ಸಿಗದ ಕಾರಣ, “ಸಿದ್ಧರಾಗಿರಿ” ಎಂಬ ಮೌಲ್ಯಗಳನ್ನು ನನ್ನೊಳಗೆ ಬಿಂಬಿಸಿರುವ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ತರಬೇತಿಯ ಬಲದಿಂದ ನಾನು ಧೈರ್ಯದಿಂದಲೇ ನಾನು ಮುಂದಾಗಿ ಹಾವನ್ನು ಹಿಡಿಯಲು ಮುಂದಾದೆ. ನನ್ನ ಶಾಲೆಯ ಪರಿಸರ ವಿಜ್ಞಾನ ಪಾಠಗಳು ಮತ್ತು ಪ್ರಾಯೋಗಿಕ ಜೀವಶಾಸ್ತ್ರದ ತರಗತಿಗಳಲ್ಲಿ ಕಲಿತ ಪ್ರಾದೇಶಿಕ ಹಾವುಗಳ ಲಕ್ಷಣಗಳ ಪಠ್ಯದಿಂದ ನನಗೆ ಅಗತ್ಯ ಜ್ಞಾನ ದೊರೆತಿತ್ತು. ತುರ್ತು ವನ್ಯಜೀವಿ ರಕ್ಷಣೆಯ ಕ್ಷೇತ್ರದಲ್ಲಿ ತಾನು ಕೈಗೊಂಡ ಕಾರ್ಯಚಟುವಟಿಕೆ, ಚಿಕ್ಕಂದಿನಿಂದಲೇ ಕುಟುಂಬದವರಿಂದ ಸಿಕ್ಕಿದ ಕಷ್ಟಕಾಲವನ್ನು ಧೈರ್ಯ ಸಾಹಸದಿಂದ ಹೇಗೆ ನಿಭಾಯಿಸುವ ಕುರಿತಾಗಿ ಪಡೆದ ಮಾರ್ಗದರ್ಶನ ಇವೆಲ್ಲದರಿಂದ ತಾನು ಗ್ಲೌಸ್ ಧರಿಸಿ, ಬಹು ಎಚ್ಚರಿಕೆಯಿಂದ ಬೆಚ್ಚಿಬಿದ್ದ ಹಾವನ್ನು ಶಾಂತವಾಗಿ ಬಾಕ್ಸ್ಗೆ ಹಾಕಿ, ಕುಟುಂಬದವರನ್ನು ಹಾವಿನ ಭೀತಿಯಿಂದ ಪಾರುಮಾಡಿದೆ; ಜತೆಗೆ ಆ ವನ್ಯ ಜೀವಿಗೂ ರಕ್ಷಣೆ ಒದಗಿಸಿದೆ. ಈ ಕಾರ್ಯದಲ್ಲೆಲ್ಲವೂ "ಸುರಕ್ಷತೆಗೆ ಆದ್ಯತೆ, ಸದಾ ಧೈರ್ಯದಿಂದಿರಿ" ಎಂಬ ಧ್ಯೇಯವಾಕ್ಯ ನನ್ನನ್ನು ಮುನ್ನಡೆಸಿತು' ಎಂದು ದೀಪೇಶ್ ದೀಪಕ್ ಶೆಣೈ ಹೆಮ್ಮೆಯಿಂದ ತಿಳಿಸಿದ್ದಾನೆ.
ಈ ಸಂದರ್ಭದಲ್ಲಿ ಅಜ್ಜ-ಅಜ್ಜಿ ಸಣ್ಣ ಮಕ್ಕಳ ಆರೋಗ್ಯದ ಬಗ್ಗೆ ನಾನು ಎಚ್ಚರಿಕೆಯಿಂದಿದ್ದೆ. ಸ್ಕೌಟ್ಸ್ ಶಿಬಿರಗಳು, ಪ್ರಾಥಮಿಕ ಚಿಕಿತ್ಸಾ ತರಬೇತಿಗಳು, ಕರ್ನಾಟಕ ಸರ್ಕಾರದ ಬಾಲಭವನ ಸಂಸ್ಥೆಯ ಬೇಸಿಗೆ ಶಿಬಿರದ ಪಠ್ಯೇತರ ತರಬೇತಿ ಮತ್ತು ಚಟುವಟಿಕೆಯ ಶಿಕ್ಷಣ, ಉಡುಪಿ ಲಕ್ಷ್ಮೀ ವೆಂಕಟೇಶ ದೇವಳದ ಗೌಡ ಸಾರಸ್ವತ ಸಮಾಜ ಯುವಕ ಮಂಡಳಿ ಶಿಬಿರದ ಮನೋಧೈರ್ಯದ ತರಬೇತಿ, ಶ್ರೀ ಕಾಶೀಮಠ ಗುರುಪರಂಪರೆಯ ಆಶೀರ್ವಾದ ಜೊತೆ ಹರಿಗುರು ಕೃಪೆಯ ಶ್ರೀರಕ್ಷೆ, ಶಾಲಾ ವಿಜ್ಞಾನ ಯೋಜನೆಗಳಲ್ಲಿ ಬೆಳೆಸಿದ ನೈಪುಣ್ಯದಿಂದ ನಾನು ತಕ್ಷಣದ ನಿರ್ಧಾರ ತೆಗೆದು, ಒಂದು ದುರ್ಘಟನೆಯ ಸಂಭವವನ್ನು ತಪ್ಪಿಸಲು ಸಾಧ್ಯವಾಯಿತು ಎಂದು ತನ್ನ ಅನುಭವ ಹಂಚಿಕೊಂಡಿದ್ದಾನೆ.
ಪಠ್ಯೇತರ ಕಲಿಕೆಯ ಅನುಭವದಿಂದ, ಅನ್ಯರಿಂದ ತುರ್ತು ಸಹಾಯ ಸಿಗದಿದ್ದರೂ ಧೈರ್ಯ, ಜ್ಞಾನದಿಂದ ಮಕ್ಕಳು ಹೇಗೆ ಸ್ವಾಭಿಮಾನದಿಂದ ಕಾರ್ಯ ನಿರ್ವಹಿಸಿ ನೈತಿಕತೆ ತೋರಬಹುದೆಂದು ದೀಪೇಶ್ ದೀಪಕ್ ಶೆಣೈ ಮಾಡಿದ ಈ ಸಾಹಸದ ಕಾರ್ಯವೇ ಸಾಕ್ಷಿ ಮತ್ತು ಇದು ಎಲ್ಲರಿಗೂ ಪ್ರೇರಣೆ ಎಂದು ಸಾರ್ವಜನಿಕರು ಪ್ರಶಂಸೆಯ ಸುರಿಮಳೆ ವ್ಯಕ್ತಪಡಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ