ಕಲಬುರಗಿ: 1935ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ

Upayuktha
0

ಧರ್ಮಸ್ಥಳದ ಸೇವಾ ಕಾರ್ಯ ಜನತೆಯ ಕಲ್ಯಾಣಕ್ಕಾಗಿ: ಶಾಸಕ ಅಲ್ಲಮಪ್ರಭು ಪಾಟೀಲ್




ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನರ ಕಲ್ಯಾಣಕ್ಕಾಗಿ ವಿವಿಧ ಮುಖಗಳಲ್ಲಿ ಸೇವಾ ಕಾರ್ಯ ನಡೆಸುತ್ತಿದ್ದು ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹೇಳಿದರು. 


ಕಲಬುರಗಿ ಸಮೀಪದ ಬಬಲಾದ (ಎಸ್) ಗ್ರಾಮದ ಶ್ರೀ ಮಲ್ಲಿಕಾರ್ಜುನ ಬ್ರಹ್ಮನ್ಮಠದ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲಬುರಗಿ ತಾಲೂಕು ಹಾಗೂ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಕಲಬುರಗಿ ಜಿಲ್ಲಾ ಜನಜಾಗೃತಿ ವೇದಿಕೆ, ಗ್ರಾಮ ಪಂಚಾಯತ್ ಸಾವಳಗಿ, ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ 1935 ನೇ ಮದ್ಯ ವರ್ಜನ ಶಿಬಿರವನ್ನು ಉದ್ಘಾಟಿಸಿ ಪೂಜ್ಯರಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸಮಾಜದ ಉನ್ನತಿಗಾಗಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಕಲ್ಯಾಣ ಕರ್ನಾಟಕದಲ್ಲಿ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳುತ್ತಿರುವುದರಿಂದ ಪ್ರಗತಿ ಸಾಧ್ಯವಾಗಿದೆ. ಕೆರೆಗಳ ಅಭಿವೃದ್ಧಿ, ಶಾಲೆಗಳಿಗೆ ಅಧ್ಯಾಪಕರ ಒದಗಿಸುವಿಕೆ, ಪೀಠೋಪಕರಣಗಳ ಪೂರೈಕೆ, ಮನೆ ವಿತರಣೆ, ವಿಮಾ ವ್ಯವಸ್ಥೆ, ಸ್ವ ಸಹಾಯ ಗುಂಪುಗಳ ರಚನೆ ಸ್ವಚ್ಚತೆ ಮುಂತಾದ ಕಾರ್ಯಕ್ರಮಗಳಿಂದ ಅಭಿವೃದ್ಧಿ ಹೊಂದಲು ಪ್ರೇರಣೆಯಾಗಿದೆ ಎಂದರು.


"ನವ ಸಮಾಜ ನಿರ್ಮಾಣ ಮಾಡಲು ಕಂಕಣ ಬದ್ಧರಾಗಿ"

ಕಾರ್ಯಕ್ರಮದ ಸಾನಿಧ್ಯವನ್ನು ಬಬಲಾದ (ಎಸ್) ಬೃಹನ್ಮಠದ ಪೂಜ್ಯರಾದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಗ್ರಾಮದ ಮತ್ತು ರಾಷ್ಟ್ರದ ಉದ್ಧಾರಕ್ಕಾಗಿ ಧರ್ಮಸ್ಥಳ ಹಮ್ಮಿಕೊಂಡಿದೆ ಇದರ ಸದುಪಯೋಗವನ್ನು ಪಡೆದು ನಮ್ಮ ಬದುಕು ಉತ್ತಮಗೊಳಿಸಲು ನಿರ್ಧಾರ ಕೈಗೊಳ್ಳಬೇಕಾಗಿದೆ. ಮದ್ಯ ವ್ಯಸನ ಮುಕ್ತರಾಗಿ ಹೊಸ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಿಬೇಕಾಗಿದೆ ಎಂದರು.


ವ್ಯಸನ ಮುಕ್ತ ಸಮಾಜದಿಂದ ಮಾತ್ರ ರಾಷ್ಟ್ರ ಉದ್ಧಾರ


ಸಮಾಜಕ್ಕೆ ಕಂಟಕವಾಗಿರುವ ಮದ್ಯಚಟ, ಧೂಮಪಾನ ತಂಬಾಕು ಸೇವನೆ ಮುಂತಾದ ದೇಸನಗಳಿಂದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿನ್ನಡೆಯಾಗುತ್ತಿದ್ದು ಪ್ರಗತಿ ಕುಂಠಿತಗೊಳ್ಳುತ್ತಿದೆ. ಈ ಕ್ಷೇತ್ರದಿಂದ ಅನುಷ್ಠಾನಗೊಳ್ಳುವ ಮದ್ಯವರ್ಜನ ಶಿಬಿರವು ಮದ್ಯ ವ್ಯಸನಿಗಳ ಮನಸ್ಸನ್ನು ಪರಿವರ್ತನೆ ಮಾಡಿ ಅದರಿಂದ ಉಂಟಾಗುವ ಅಪಾಯಗಳನ್ನು ಮನೆಮರಿಕೆ ಮಾಡಿ ಸ್ವಾಸ್ಥ್ಯ ಜೀವನ ಬಗ್ಗೆ ಜಾಗೃತಿ ಮೂಡಿಸುವ ಒಂದು ವಿನೂತನ ಪ್ರಯೋಗವಾಗಿದ್ದು 1935 ನೇ ಈ ಶಿಬಿರವು ಅತ್ಯಂತ ಯಶಸ್ವಿಯಾಗಲಿ ಆ ಮೂಲಕ ಬಬದಲಾದ ಗ್ರಾಮವು ದುಶ್ಚಟ ಮುಕ್ತ ಗ್ರಾಮವಾಗಿ ರಾಜ್ಯದಲ್ಲಿ ಮಾದರಿಯಾಗಲಿ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಡಾ. ಸದಾನಂದ ಪೆರ್ಲ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಸಾವಳಗಿಯ ಅಧ್ಯಕ್ಷ ರಮೇಶ ಆರ್ ಕನಗೊಂಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲಿಂಗರಾಜ್ ತಾರಫೈಲ, ಶ್ರೀ ಸಿದ್ದರಾಮಯ್ಯ ಹಿರೇಮಠ, ನಬಿ ಸಾಬ್ ಮುಜಾವರ್, ಅಂಬಾರಾಯ ಪಾಟೀಲ್, ಬಸವರಾಜ್ ಪಾಲಿ, ಬರಗಾಲ ಸಿದ್ಧ ಅಂದೆಲಿ, ಯೋಜನಾಧಿಕಾರಿ ರಿಯಾಜ್ ಅತ್ತಾರ,  ಜನಜಾಗೃತಿ ಅಧಿಕಾರಿ ರಾಜೇಶ್ ಕೆ  ಉಪಸ್ಥಿತರಿದ್ದರು.


ಶ್ರೀದೇವಿ ಪ್ರಸಾದ್ ಸುವರ್ಣ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಿಬಿರಧಿಕಾರಿಗಳು ನಿರೂಪಿಸಿದರು. ರಿಯಾಜ್ ಅತ್ತಾರ್ ಸ್ವಾಗತಿಸಿದರು. ಶಂಕ್ರಯ್ಯ ಹಿರೇಮಠ ಧನ್ಯವಾದವಿತ್ತರು. ಶಿಬಿರದಲ್ಲಿ ಬಬಲಾದ (ಎಸ್) ಮುತ್ತು ಮುತ್ತಲಿನ 50 ಜನ ಮದ್ಯ ವ್ಯಸನಿಗಳನ್ನು ಶಿಬಿರಾರ್ಥಿಗಳಾಗಿ ನೋಂದಣಿ ಮಾಡಲಾಯಿತು. ಎಂಟು ದಿನಗಳ ಕಾಲ ವಿವಿಧ ವಿಷಯಗಳ ಕುರಿತು ಶಿಬಿರಾರ್ಥಿಗಳಿಗೆ ಜಾಗೃತಿ ಭಾಷಣ ಭಜನೆ ವೈದ್ಯಕೀಯ ಸಲಹೆ ಹಾಗೂ ವ್ಯಸನ ಮುಕ್ತರಾಗಿ ಯಾವ ಜೀವನ ನಡೆಸುವವರ ಅನುಭವಗಳನ್ನು ವಿನಿಮಯ ಮಾಡುವ ಕಾರ್ಯಕ್ರಮ ಏರ್ಪಡಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top