ಜೂ14: ಹಾಸನ ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರ ಸಂಘದಿಂದ ಕುರುಕ್ಷೇತ್ರ ನಾಟಕ

Upayuktha
0


ಹಾಸನ: ಹಾಸನ ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಜೂ.14ರ ಶನಿವಾರ ಬೆಳಗ್ಗೆ 10-30ಕ್ಕೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಿರಿಯ ರಂಗಭೂಮಿ ಕಲಾವಿದ ರಾಮಲಿಂಗೇಗೌಡರು ಕಾರ್ಯಾಧ್ಯಕ್ಷರು ಮತ್ತು ನಟರು ಇವರ ಧರ್ಮಪತ್ನಿ ಶ್ರೀಮತಿ ಗಾಯಿತ್ರಿ ಜೆ. ರವರ ಸ್ಮರಣಾರ್ಥ ಬಿ. ಪುಟ್ಟಸ್ವಾಮಯ್ಯ ವಿರಚಿತ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಡಿ. ಸಿ. ಪುಟ್ಟರಾಜು ನಿರ್ದೇಶನದಲ್ಲಿ ಪ್ರದರ್ಶಿಸಲಾಗುತ್ತಿದೆ.


ಹಾಸನ ಮಹಾನಗರಪಾಲಿಕೆ ಮಹಾಪೌರ ಚಂದ್ರೇಗೌಡರು, ಮಾಜಿ ತಾ. ಪಂ. ಸದಸ್ಯ ಶಿವಣ್ಣ ಬಿ.ಸಿ, ಎಂಟಿಇಎಸ್ ಕಾರ್ಯದರ್ಶಿ ಜಗದೀಶ್ ಚೌಡುವಳ್ಳಿ, ಸಾಹಿತಿ ಗೊರೂರು ಅನಂತರಾಜು, ಜೀವನ್ ಪಾಟೀಲ್ ಎನ್. ನಿವೃತ್ತ ತಹಸೀಲ್ದಾರ್ ಎ.ವಿ. ರುದ್ರಪ್ಪಾಜಿರಾವ್, ಸರ್ಕಾರಿ ನೌಕರರ ಸ೦ಘದ ಮಾಜಿ ಅಧ್ಯಕ್ಷ ಈ ಕೃಷ್ಲೇ ಗೌಡರು, ಚೆಸ್ಕಾಂ ಎಇಇ ಹೇಮಚಂದ್ರ, ನಿವೃತ್ತ ಪ್ರಾಂಶುಪಾಲ ಎಂ.ಆರ್. ಚಂದ್ರಶೇಖರ್, ಪ್ರಗತಿ ಪರ ರೈತ ಕುಮಾರೇಗೌಡರು, ನಿವೃತ್ತ ಮುಖ್ಯೋಪಾಧ್ಯಾಯ ಹೆಚ್ ಎಂ. ನಂಜೇಗೌಡರು ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. 


ಜಗದೀಶ ರಾಮಘಟ್ಟ- ದುರ್ಯೋಧನ, ರಾಮಲಿಂಗೇಗೌಡರು ಅರ್ಜುನ, ಅಪ್ಪಾಜಣ್ಣ, ಕೃಷ್ಣ, ಕುಬೇರಾ ಚಾರ್- ಕರ್ಣ, ಭೀಮ- ದಿಲೀಪ್ ನಾಟಕದ ಪ್ರಮುಖ ಪಾತ್ರಗಳಲ್ಲಿ ನಟಿಸುವರು. ಮರಡಿ ಕೃಷ್ಣ ಕುಮಾರ್ ಕಾರ್ಯಕ್ರಮದ ವ್ಯವಸ್ಥಾಪಕರಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top