ಕಲಬುರಗಿ: ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್‌ಗೆ ಸನ್ಮಾನ

Upayuktha
0

"ಮೈಂಡ್ ಮಿಸ್ಟರಿ" ವಿಶೇಷ ಜಾದೂ ಆ ಯೋಜನೆಗೆ ಚಿಂತನೆ: ಶರಣು ಪಪ್ಪಾ




ಕಲಬುರಗಿ: ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಅವರಿಗೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆಯಲ್ಲಿ ಜೂ.2 ರಂದು ವಿಶೇಷ ಸನ್ಮಾನ ನೆರವೇರಿಸಲಾಯಿತು.


ಸಂಸ್ಥೆಯ ಅಧ್ಯಕ್ಷ ಶರಣು ಪಪ್ಪಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಮತ್ತು ಶಿಕ್ಷಣಕ್ಕಾಗಿ ಜಾದೂ ಮುಂತಾದ ಹೊಸ ಪ್ರಯೋಗಗಳಿಂದ ಜಾದೂ ರಂಗಕ್ಕೆ ಹೊಸ ಸ್ಪರ್ಶ ನೀಡಿ ಇತ್ತೀಚೆಗೆ "ಮೈಂಡ್ ಮಿಸ್ಟರಿ" ಎಂಬ ವಿನೂತನ ಜಾದೂ ಪ್ರಯೋಗವನ್ನು ಮಾಡಿ ಖ್ಯಾತಿ ಹೊಂದುತ್ತಿರುವ ಕುದ್ರೋಳಿ ಗಣೇಶ್ ಅವರಿಗೆ ವಿಶೇಷವಾಗಿ ಸತ್ಕರಿಸಲಾಯಿತು.


ಸಮಾಜದಲ್ಲಿ ಬದಲಾವಣೆಗೆ ಕಾರಣಿಭೂತರಾಗಿ ಮನರಂಜನಾ ರಂಗದಲ್ಲಿ ಹೊಸ ಪ್ರಯೋಗಗಳನ್ನು ಮಾಡಿರುವ ಸಾಧನೆಗೆ ಯಶಸ್ಸು ಸಿಗಲಿ. ಜೂನ್ 27ರಿಂದ ಕಲಬುರಗಿ ಪ್ರವಾಸ ಮಾಡುವ ಕುದ್ರೋಳಿ ಗಣೇಶ್ ಜಾದು ಕಾರ್ಯಕ್ರಮಗಳಿಗೆ ಸಂಸ್ಥೆಯಿಂದ ಪೂರ್ಣ ಸಹಕಾರ ನೀಡಲಾಗುವುದು. ಶಿಕ್ಷಣಕ್ಕಾಗಿ ಜಾದು ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲು ಚಿಂತನೆ ನಡೆದಿದೆ. ಸಮಾಜದ ವೈದ್ಯರು, ಇಂಜಿನಿಯರ್, ಸಿ.ಎ, ರೋಟೇರಿಯನ್, ಉದ್ಯಮಿಗಳಿಗಾಗಿ "ಮೈಂಡ್ ಮಿಸ್ಟರಿ" ಎಂಬ ವಿಶೇಷ ಜಾದೂ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಶರಣು ಪಪ್ಪಾ ತಿಳಿಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಶಶಿಕಾಂತ್ ಪಾಟೀಲ್, ಗೌರವ ಕಾರ್ಯದರ್ಶಿ ಶಿವರಾಜ್ ಇಂಗಿನ್ ಶೆಟ್ಟಿ ಮತ್ತು ಸದಸ್ಯರಾದ ಅಭಿಜಿತ್ ಶೆಟ್ಟಿ, ಜಗದೀಶ್ ಗಾಜರೆ ನಮೃತಾ ಫತಾಟೆ, ಮೋದಿ ವಿಚಾರ ಮಂಚ್‌ನ ಕರ್ನಾಟಕ ವಲಯ ಅಧ್ಯಕ್ಷ ಶಿವರಾಜ್ ಕೋಟ್ಯಾನ್, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ಮತ್ತಿತರರು ಉಪಸ್ಥಿತರಿದ್ದರು.


ಜಾದೂ ಮೂಲಕ ಕೈಚಳಕ ಮೆರೆದ ಗಣೇಶ್:

ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಸೇರಿದ ಸಂಸ್ಥೆಯ ಸದಸ್ಯರ ಮುಂದೆ ಕುದ್ರೋಳಿ ಗಣೇಶ್ "ಕ್ಲೋಸ್ ಅಪ್" ಜಾದೂ ಮಾಡಿ ವಿಸ್ಮಯಗೊಳಿಸಿದರು. ನಾಣ್ಯಗಳ ಮಾಯ, ಇಸ್ಪೀಟ್ ಎಲೆಗಳಲ್ಲಿ ವಿವಿಧ ಜಾದು ವಿಸ್ಮಯ, ಮೈಂಡ್ ರೀಡಿಂಗ್, ಮೆಮೊರಿ ಗೇಮ್ ಮುಂತಾದ ಜಾದು ಕೈಚಳಕದಿಂದ ಎಲ್ಲರನ್ನು ನಕ್ಕು ನಗಿಸಿ ಚಕಿತಗೊಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top