ಗುಂಡಿಗೆ ಗುಂಡು- ಬುಲೆಟ್ ಫಾರ್ ಬುಲೆಟ್: "ಚಲೋ ಎಲ್‌ಒಸಿ" ಬೃಹತ್ ಬುಲೆಟ್ ಸವಾರರ ರ್‍ಯಾಲಿ

Upayuktha
0
ಶಂಕರದಿಂದ ಶಾರದೆಗೆ- ಕಾಲಡಿಯಿಂದ ಕಾಶ್ಮೀರದವರೆಗೆ: 3600 ಕಿ.ಮೀ ದೂರ ಕ್ರಮಿಸಲಿರುವ ಸವಾರರು




ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ "ಗುಂಡಿಗೆ ಗುಂಡು'' ಎಂಬ ಧೈರ್ಯದ ಘೋಷಣೆಗೆ ಪ್ರತಿಧ್ವನಿಯಾಗಿ, ದೇಶದ ಭದ್ರತೆಗೆ ಸಮರ್ಪಿತ "ಆಪರೇಷನ್ ಸಿಂದೂರ"ದ ಸ್ಮರಣಾರ್ಥವಾಗಿ ಮತ್ತು ರಾಷ್ಟ್ರಪ್ರೇಮದ ಕಿಚ್ಚನ್ನು ಹಚ್ಚುವ ಉದ್ದೇಶದಿಂದ ಶಂಕರಾಚಾರ್ಯರ ಜನ್ಮಸ್ಥಳ ಕಾಲಡಿಯಿಂದ ಕಾಶ್ಮೀರದವರೆಗೆ ಸುಮಾರು 100 ಮಂದಿ ಬುಲೆಟ್ ಸವಾರರು ಸೇರಿಕೊಂಡು, 3600 ಕಿ.ಮೀ ದೂರದ "ಚಲೋ ಎಲ್‌ಒಸಿ" ಎಂಬ ಘೋಷವಾಕ್ಯದಡಿ ಬೃಹತ್ ಮೋಟಾರ್‌ ಸೈಕಲ್ ರ್‍ಯಾಲಿಗೆ ಚಾಲನೆ ನೀಡಲಾಯಿತು.


ಈ ಭವ್ಯ ರ್‍ಯಾಲಿಗೆ ಕೇರಳದ ಎರ್ನಾಕುಳಂನ ಡಾ. ಶ್ರೀರಾಮಾನಂದ ಜೀ ನೇತೃತ್ವ ವಹಿಸಿರುವುದು ಗಮನಾರ್ಹ. ಬೆಂಗಳೂರು ನಗರದ ನಿವಾಸಿ ಪ್ರಶಾಂತ್ ರಾವ್ ಅವರು, ಸಮನ್ವಯ ಟ್ರಸ್ಟ್‌ ತಂಡದ ಸದಸ್ಯರೊಂದಿಗೆ, ಬೆಂಗಳೂರು ಸರ್ಜಾಪುರ ಬಳಿ ಈ ಬುಲೆಟ್ ಸವಾರರ ರ್‍ಯಾಲಿಗೆ ಆತ್ಮೀಯ ಸ್ವಾಗತ ನೀಡಿ, ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

 


ಈ ಯಾತ್ರೆ ಭಾರತದ ಭೌಗೋಳಿಕ ಹಾಗೂ ಸಾಂಸ್ಕೃತಿಕ ಏಕತೆಯ ಪ್ರತೀಕವಾಗಿದ್ದು, "ಶಂಕರದಿಂದ ಶಾರದೆಗೆ– ಕಾಲಡಿಯಿಂದ ಕಾಶ್ಮೀರದವರೆಗೆ" ಎಂಬ ಘೋಷಣೆಯಡಿ, ಪ್ರಚಂಡ ದೇಶಾಭಿಮಾನದಿಂದ ಮುಂದುವರಿಯುತ್ತಿದೆ.


ಇದು ಪ್ರಧಾನಿ ನರೇಂದ್ರ ಮೋದಿ ಅವರ ಗುಂಡುಗಳ ವಿರುದ್ಧ ಗುಂಡುಗಳನ್ನು ಹಾರಿಸುವ ನವ ಭಾರತದ ಹೊಸ ಆಖ್ಯಾನವನ್ನು ಸ್ಥಾಪಿಸುತ್ತದೆ.


ದುಷ್ಕರ್ಮಿಗಳು 26 ಮಂದಿಯನ್ನು ಕೊಂದಿರಬಹುದು, ಆದರೆ ಇವು 26 ಯುವ ಬులೆಟ್ ಸವಾರರು- ಬುಲೆಟ್ ರೈಡ್ ಅಭಿಯಾನವನ್ನು ಮುಂದುವರೆಸಲು ಏನೂ ಅಡ್ಡಿಯಾಗಿಲ್ಲ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top