ಬಳ್ಳಾರಿ: ನಗರದ ಕಾಂಗ್ರೆಸ್ ಮುಖಂಡ ಬಿ ರಾಮ್ ಪ್ರಸಾದ್ ಅವರ ಮಗ ಅರವ್ ಸೂರ್ಯ ನಾಯಕನಾಗಿ ನಟಿಸಿರುವ ಕಾಲೇಜ್ ಕಲಾವಿದ ಕನ್ನಡ ಚಿತ್ರ ಇದೇ ಜೂನ್ 6 ರಂದು ನಗರದ ಉಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸಂಜಯ್ ಮಳವಳ್ಳಿ ತಿಳಿಸಿದರು.
ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಬಗೆಯ ಲವ್ ಸ್ಟೋರಿ ಸಿನಿಮಾಗಳು ಬಂದು ಹೋಗಿವೆ ಅವೆಲ್ಲಕ್ಕಿಂತಲೂ ನಮ್ಮ ಕಾಲೇಜ್ ಕಲಾವಿದ ಸಿನಿಮಾ ಭಿನ್ನವಾಗಿದೆ ಇದು ಲವ್ ಮತ್ತು ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಆಗಿದೆ ಈ ಚಿತ್ರವನ್ನು ಬಳ್ಳಾರಿ ನಗರದ ಜನತೆ ನೋಡಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.
ನಾಯಕ ಅರವ್ ಸೂರ್ಯ ಮಾತನಾಡಿ, ನಾನು ಬಳ್ಳಾರಿಯ ಹುಡುಗ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವು ಬಿಡುಗಡೆಗೊಂಡಿವೆ ಮತ್ತು ಹಲವಾರು ಧಾರವಾಹಿಗಳಲ್ಲಿ ಸಹ ನಟಿಸಿದ್ದೇನೆ ಈಗ ನನ್ನ ಮೂರನೇ ಸಿನಿಮಾ ಕಾಲೇಜ್ ಕಲಾವಿದ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ನಗರದ ಉಮಾ ಚಿತ್ರಮಂದಿರದಲ್ಲಿ ಜೂನ್ 6 ರಂದು ಬಿಡುಗಡೆಗೊಳಿಸಲಾಗುತ್ತಿದೆ. ನಿಮ್ಮೂರಿನ ಹುಡುಗನನ್ನು ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಮೂಲಕ ಆಶೀರ್ವದಿಸಿ ಎಂದರು.
ಚಿತ್ರದಲ್ಲಿ ನವ ನಾಯಕಿ ಚೈತ್ರ ಲೋಕನಾಥ್ ನಟಿಸಿದ್ದಾರೆ, ಉಳಿದ ತಾರಾ ಬಳಗದಲ್ಲಿ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಹುಲಿ ಕಾರ್ತಿಕ್ ಹರಣಿ ಶ್ರೀಕಾಂತ್ ಹಾಗೂ ರಮೇಶ್ ಭಟ್ ಶೈಲ ಪುತ್ರಿ ಪೋಷಕ ಪಾತ್ರಗಳಲ್ಲಿ ಮತ್ತು ನಿಖಿಲ್ ನಂದಿನಿ ದಿನೇಶ್ ಕುಲಕರ್ಣಿ ನವೀನ್ ನಿರಂತ್ ಸೂರ್ಯ ನಾಯಕನ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಗಜಾನನ ಫಿಲಂ ಬ್ಯಾನರ್ ಅಡಿಯಲ್ಲಿ ತರುಣ್ ಶರ್ಮ ನಿರ್ಮಾಣ ಮಾಡಿದ್ದು ಸೂರಜ್ ಸಂಗೀತ, ಗಂಗಾವತಿ ಮಹೇಶ್ ಸಂಕಲನ ಮತ್ತು ಆನಂದ್ ಸುರೇಶ್ ಛಾಯಾಗ್ರಹಣ ಚಿತ್ರಕ್ಕಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ