ಮಗುವಾಗಿದ್ದಾಗ ಬದುಕು ತುಂಬಾ ಚೆನ್ನಾಗಿರುತ್ತದೆ. ಸಣ್ಣ ತಪ್ಪು ಮಾಡಿದರೂ ಮಗು ಅಲ್ವ ಅಂತಾ ಮನೆಯವರು ಸುಮ್ಮನಿರುತ್ತಾರೆ. ದೊಡ್ಡವರಾದ ಮೇಲೆ ತಪ್ಪು ಮಾಡಿದರೆ ದೊಡ್ಡ ಪರಿಣಾಮವೇ ಬೀಳುತ್ತದೆ. ಏಕೆಂದರೆ, ಕತ್ತೆ ವಯಸ್ಸಾಗಿದೆ ಇನ್ನೂ ಬುದ್ಧಿ ಬರಲಿಲ್ಲಾ ಅಂತಾ ಬೈಯುವವರು ಜಾಸ್ತಿ. ಚಿಕ್ಕದಿರುವಾಗ ಬಾಯಿಗೆ ಬಂದಂತೆ ಮಾತಾಡುತ್ತಿದ್ದ ನಮಗೆ, ಬುದ್ಧಿ ಬಂದಮೇಲೆ ಸ್ವಲ್ಪ ಯೋಚಿಸಿ ಮಾತಾಡು ಅಂತಾ ಹೇಳುತ್ತಾರೆ.
ಹುಟ್ಟು- ಸಾವಿನ ನಡುವಲ್ಲಿ ಹಲವಾರು ಜನ ನಮ್ಮ ಬದುಕಿನಲ್ಲಿ ಬಂದು ಹೋಗುತ್ತಾರೆ. ಕೆಲವರು ನಮ್ಮ ತಪ್ಪನ್ನು ತಿದ್ದಿತೀಡಿ ಸರಿಪಡಿಸಿ ನಮ್ಮೊಂದಿಗೆ ಇರುತ್ತಾರೆ. ಕೆಲವರು ಅವರವರ ಅವಶ್ಯಕತೆ ಮುಗಿದ ಮೇಲೆ ನಮಗೆ ಪಾಠ ಕಲಿಸಿ ಹೋಗುತ್ತಾರೆ. ಚಿಕ್ಕದಿರುವಾಗ ನಮ್ಮ ಮಾತನ್ನು ಕೇಳಿ ಖುಷಿ ಪಡುತ್ತಿದ್ದವರು, ದೊಡ್ಡವರಾದ ಮೇಲೆ ಸ್ವಲ್ಪ ಮಾತು ಕಡಿಮೆ ಮಾಡು ಎಂದು ಹೇಳುತ್ತಾರೆ.
ಸಣ್ಣವರಿದ್ದಾಗ ಖುಷಿ ಹಾಗೂ ನೆಮ್ಮದಿ ಅತಿಯಾಗಿ ಇತ್ತು. ದೊಡ್ಡವರಾದ ಮೇಲೆ ಜವಾಬ್ದಾರಿಯೆಂಬ ಮೂಟೆಯನ್ನು ಹೊತ್ತ ನಮಗೆ ಖುಷಿ ಹಾಗೂ ನೆಮ್ಮದಿ ಮರೀಚಿಕೆಯಾಗಿದೆ. ಬೆಳೆದು ದೊಡ್ಡವರಾದ ಮೇಲೆ ಜಾಸ್ತಿ ಮಾತಾಡಿದರೆ ಜಾಸ್ತಿ ಮಾತಾಡ್ತಾರೆ, ಕಡಿಮೆ ಮಾತಾಡಿದರೆ ಕಡಿಮೆ ಮಾತಾಡ್ತಾರೆ ಎಂದು ಹೇಳುವ ಜನರ ನಡುವಲ್ಲಿ ಮೌನವಾಗಿರುವುದೇ ಲೇಸು. ಈ ಕಲಿಯುಗದಲ್ಲಿ ಯಾರ ಬಳಿಯೂ ಏನನ್ನೂ ಬಯಸದೇ, ಏನನ್ನೂ ಹೇಳಿಕೊಳ್ಳದೇ ನಮ್ಮಷ್ಟಕ್ಕೆ ನಮ್ಮ ಕಾಯಕ ಮಾಡುವುದು ಒಳಿತು.
"ಬೇರೆಯವರ ಭಾವನೆಯ ಜೊತೆ ಆಟ ಆಡುವ ಬದಲು, ನಮಗೆ ನಾವೂ ಸಮಯ ನೀಡುವುದು ಒಳ್ಳೆಯದು"
- ಸುಚಿರಾ ಪಿ ಶೆಟ್ಟಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ