ಕರಾವಳಿಯ ಐದು ಕಡೆ ಬೀಚ್ ಸ್ವಚ್ಛತೆ ಅಭಿಯಾನ

Upayuktha
0


ಮಂಗಳೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಾರ್ನಿಯರ್ ವತಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಸಬಾ ಬೆಂಗ್ರೆ, ಪಡುಬಿದ್ರಿ/ ಬಡಾ ಎರ್ಮಾಳು, ಉಳ್ಳಾಲ (ಪಶ್ಚಿಮ), ಉಳ್ಳಾಲ (ಪೂರ್ವ) ಮತ್ತು ಕಡಪ್ಪುರ- ಕುಂಬಳೆ ಬೀಚ್ ಹೀಗೆ ಐದು ಕಡೆಗಳಲ್ಲಿ ಬೀಚ್ ಸ್ವಚ್ಛತಾ ಅಭಿಯಾನ ನಡೆಸಲಾಯಿತು.


ಪ್ರಮುಖ ಸೌಂದರ್ಯ ವರ್ಧಕ ಬ್ರಾಂಡ್ ಆಗಿರುವ ಗಾರ್ನಿಯರ್, ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವ, ಮರುಬಳಕೆ ಮಾಡುವ ಹಾಗೂ ಸಂಸ್ಕರಣೆ ಮಾಡುವತ್ತ ಗಮನ ಹರಿಸುವ ತನ್ನ ಸುಸ್ಥಿರತೆಯ ಬದ್ಧತೆಗಳನ್ನು ಬಲಪಡಿಸಲು 'ಸ್ವಚ್ಛ ಭಾರತ್ ಮಿಷನ್-ನಗರ' ಜೊತೆ ಕೈಜೋಡಿಸಿದೆ. ಮುಂಬೈ, ಚೆನ್ನೈ, ವೈಜಾಗ್, ಪುದುಚೇರಿ, ಪುರಿ, ಗೋವಾ ಮತ್ತು ಕಾಸರಗೋಡು ಸೇರಿದಂತೆ ಅನೇಕ ನಗರಗಳಲ್ಲಿ ನಡೆದ ಅಭಿಯಾನದಲ್ಲಿ ಸಾವಿರಾರು ವಿದ್ಯಾರ್ಥಿ ಸ್ವಯಂಸೇವಕರು ಭಾಗವಹಿಸಿದ್ದರು ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (ಎಂಒಎಚ್‍ಯುಎ) 'ಸ್ವಚ್ಛ ಭಾರತ್ ಮಿಷನ್-ನಗರ'ದ ಜಂಟಿ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಯೋಜನಾ ನಿರ್ದೇಶಕಿ ರೂಪಾ ಮಿಶ್ರಾ ಹೇಳಿದ್ದಾರೆ.


ಗ್ರಾಹಕರನ್ನು ತಮ್ಮ ಹಸಿರು ಉಪಕ್ರಮದತ್ತ ಒಂದು ಹೆಜ್ಜೆ ಇಡಲು ಪ್ರೋತ್ಸಾಹಿಸುತ್ತಿದ್ದು, ಇಲ್ಲಿಯವರೆಗೆ, ಈ ಸಹಭಾಗಿತ್ವದ ಮೂಲಕ, 'ಗಾರ್ನಿಯರ್' 900 ಟನ್ ಪ್ಲಾಸ್ಟಿಕ್ ಸಂಗ್ರಹಿಸಿದೆ. 2025 ಒಂದೇ ವರ್ಷದಲ್ಲಿ  1000 ಟನ್ ಪ್ಲಾಸ್ಟಿಕ್ ಸಂಗ್ರಹಿಸುವ ಗುರಿಯನ್ನು 'ಗಾರ್ನಿಯರ್' ಹೊಂದಿದೆ ಎಂದು ವಿವರಿಸಿದ್ದಾರೆ.


'ಪ್ಲಾಸ್ಟಿಕ್ ಫಾರ್ ಚೇಂಜ್' ಸಂಸ್ಥೆಯ ಪ್ಲಾಸ್ಟಿಕ್ ಸಂಗ್ರಹ ಮಾದರಿಯಲ್ಲೇ ಕಾರ್ಯನಿರ್ವಹಿಸುವ ಈ ಸಂಗ್ರಹ ಕೇಂದ್ರಗಳು ತ್ಯಾಜ್ಯ ಸಂಗ್ರಾಹಕರ ಜೀವನವನ್ನು ಸಬಲೀಕರಣಗೊಳಿಸಲು ಕೊಡುಗೆ ನೀಡುತ್ತವೆ. ಇಂದು ಇದು ಆರ್ಥಿಕ ಸೇರ್ಪಡೆ, ವಸತಿ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಪ್ರವೇಶದ ಮೂಲಕ, ಸಮುದಾಯದ 15,000 ಸದಸ್ಯರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಗಾರ್ನಿಯರ್ ಇಂಡಿಯಾ'ದ ಪ್ರಧಾನ ವ್ಯವಸ್ಥಾಪಕರಾದ ಅಜಯ್ ಸಿಂಹ ಸ್ಪಷ್ಟಪಡಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top