ಪ್ರವೀಣ್ ನೆಟ್ಟಾರುರವರ ಹತ್ಯೆಯ ನಂತರ ಪುನಃ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿರುವುದು ಕಾಂಗ್ರೆಸ್ ಕಾಲಾವಧಿ ಯಲ್ಲಿ ಮುಸಲ್ಮಾನರ ಓಲೈಕೆಯ ರಾಜಕಾರಣದಿಂದಾಗಿ ಹಿಂದುಗಳು ಅಸುರಕ್ಷಿತರಾಗಿರುವುದು ಗಮನಕ್ಕೆ ಬರುತ್ತಿದೆ. ಕಾಂಗ್ರೆಸ್ ಸರ್ಕಾರವು ಈ ಹಿಂದೆ ದಂಗೆ, ಬರ್ಬರ ಹತ್ಯೆಯಂತಹ ಪ್ರಮುಖವಾದ ಗಂಭೀರ ಅಪರಾಧದ ಪ್ರಕರಣಗಳಲ್ಲಿ ಭಾಗಿಯಾದಂತಹ ಇಸ್ಲಾಮಿಕ್ ಜಿಹಾದಿಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿರುವುದು, ಇಂದು ರಾಜ್ಯದಲ್ಲಿ ಜಿಹಾದಿಗಳಿಗೆ ಇಂತಹ ಕುಕೃತ್ಯವನ್ನು ಮುಂದುವರಿಸಲು ನೀಡಿದ ಕುಮುಕ್ಕಾಗಿದೆ. ಸುಹಾಸ್ ಶೆಟ್ಟಿ ಅವರಿಗೆ ಜಿಹಾದಿಗಳು ಏಪ್ರಿಲ್ 30 ರಂದು ಜೀವ ಬೆದರಿಕೆಯನ್ನು ಹಾಕಿ ನಿಮ್ಮನ್ನು ಹತ್ಯೆ ಮಾಡುತ್ತೇವೆ ಎಂದು ಹೇಳಿದ ನಂತರ ಅವರ ಹತ್ಯೆಯನ್ನು ಇಸ್ಲಾಮಿಕ್ ಜಿಹಾದ್ ಗಳು ಮಾಡಿರುವುದು ಇದೊಂದು ಪೂರ್ವಯೋಜಿತ ಷಡ್ಯಂತ್ರವೆಂಬುದು ಗಮನಕ್ಕೆ ಗಮನಕ್ಕೆ ಬರುತ್ತಿದೆ ಎಂದು ಸಂಘಟನೆಯ ಮೋಹನ್ ಗೌಡ ಹೇಳಿದ್ದಾರೆ.
ಇಸ್ಲಾಮಿಕ್ ಜಿಹಾದ್ ಗಳು ರಾಜ್ಯ ಸರ್ಕಾರದಲ್ಲಿ ರಾಜಾರೋಷವಾಗಿ ಹಿಂದು ನಾಯಕರನ್ನು ಬರ್ಬರವಾಗಿ ಹತ್ಯೆ ಮಾಡುತ್ತಿ ರುವುದು ಮತಾಂಧರಿಗೆ ಕಾನೂನಿನ ಭಯ ಇಲ್ಲದಿರುವುದು ಗಮನಕ್ಕೆ ಬರುತ್ತದೆ. ಈ ಎಲ್ಲ ಘಟನೆಗಳು ಅತ್ಯಂತ ಗಂಭೀರ ವಾಗಿದ್ದು. ಈ ಪ್ರಕರಣದ ತನಿಕೆಯನ್ನು ರಾಷ್ಟ್ರೀಯ ತನಿಖಾ ದಳದಿಂದ ಮಾಡಿಸಬೇಕು ಈ ಪ್ರಕರಣದಲ್ಲಿ ಭಾಗಿಯಾದ ಅಪರಾಧಿಗಳಿಗೆ, ಮತ್ತು ಅವರಿಗೆ ಸಹಾಯ ಮಾಡಿದವರಿಗೆ, ಕುಮ್ಮಕ್ಕು ನೀಡಿದವರ ಬಂಧನ ಮಾಡಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ