ಶ್ರೀ ನೃಸಿಂಹ ಜಯಂತಿ: ಉಡುಪಿ ಅಂಬಲಪಾಡಿಯಲ್ಲಿ ಚಿತ್ರಾಪುರ ಶ್ರೀಗಳಿಂದ ವಿಶೇಷ ಪೂಜೆ

Upayuktha
0


ಉಡುಪಿ: ಶ್ರೀ ನೃಸಿಂಹ ಜಯಂತೀ ಅಂಗವಾಗಿ ಉಡುಪಿ ಅಂಬಲಪಾಡಿಯ ಈಶಾವಾಸ್ಯಂನಲ್ಲಿ (ಡಾ ಬನ್ನಂಜೆ ಗೋವಿಂದಾಚಾರ್ಯರ ಮನೆ) ವಿನಯಭೂಷಣ ಆಚಾರ್ಯ ಮತ್ತು ರಮಾ ಆಚಾರ್ಯ ದಂಪತಿಯ ಯಜಮಾನಿಕೆಯಲ್ಲಿ ಭಾನುವಾರ ಶ್ರೀ ನೃಸಿಂಹ ಮಂತ್ರ ಯಾಗ, ಶ್ರೀ ಸಂಸ್ಥಾನ ಚಿತ್ರಾಪುರ ಮಠಾಧೀಶ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರಿಂದ ಪಟ್ಟದ ದೇವರು ಶ್ರೀ ಕಾಲೀಯ ಮರ್ದನ ಕೃಷ್ಣನ‌ಪೂಜೆ, ನರಸಿಂಹ ದೇವರಿಗೆ ವಿಶೇಷ ಕಲಶಾಭಿಷೇಕ ಸಹಿತ ಮಹಾಪೂಜೆ, ರಾಷ್ಟ್ರರಕ್ಷಣೆ, ದೇಶದ ಸುರಕ್ಷೆ ಸುಭಿಕ್ಷೆಗಾಗಿ ಶ್ರೀಗಳಿಂದ ಪ್ರಾರ್ಥನೆ ಸಹಿತ ಸಾಮೂಹಿಕ ನರಸಿಂಹ ಮಂತ್ರಜಪ, ಶ್ರೀಗಳಿಗೆ ಗುರುಪೂಜೆ ಇತ್ಯಾದಿಗಳು ವೈಭವದಿಂದ ನೆರವೇರಿದವು. ಅನೇಕ ವಿದ್ವಾಂಸರು ಭಕ್ತರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top